Don't Miss!
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
BBK9:ಬಿಗ್ ಬಾಸ್ ಮನೆಗೆ ಬಂದ ಮಂಜುಗೆ ಧಿಕ್ಕಾರ ಕೂಗಿದ ಮನೆ ಮಂದಿ..!
ಬಿಗ್ ಬಾಸ್ ಜರ್ನಿ ಇರುವುದು ಕೇವಲ ಇನ್ನು ಎರಡು ವಾರ ಮಾತ್ರ. ಮುಗಿದರೆ ಎಲ್ಲರೂ ಫೈನಲ್ನಲ್ಲಿ ಇರುತ್ತಾರೆ. ಯಾರಾದರೂ ಒಬ್ಬರು ಟ್ರೋಫಿ ತೆಗೆದುಕೊಂಡು ಹೋಗುತ್ತಾ ಇರುತ್ತಾರೆ. ಬಿಗ್ ಬಾಸ್ ಮುಗಿದ ಮೇಲೆ ಅದರ ಫಿಲಿಂಗ್ಸ್ ನಲ್ಲಿ ಒಂದಷ್ಟು ದಿನ ತೇಲಾಡುತ್ತಾ ಉಳಿದವರು ಮುಂದಿನ ಕೆಲಸಗಳನ್ನು ನೋಡುತ್ತಾರೆ.
ಆದರೆ ಈಗಾಗಲೇ 88 ದಿನದತ್ತ ಬಂದಿರುವ ಬಿಗ್ ಬಾಸ್ ಮನೆ ಮಂದಿಗೆ ಈಗ ಒಂದಷ್ಟು ಎಕ್ಸ್ಟ್ರಾ ಬೂಸ್ಟ್ ಬೇಕಾಗಿದೆ. ಆ ಬೂಸ್ಟ್ ನೀಡುವುದಕ್ಕೆ ಬಿಗ್ ಬಾಸ್ ಆಗಾಗ ಪ್ಲ್ಯಾನ್ ಮಾಡುತ್ತಲೇ ಇರುತ್ತದೆ. ಈ ಬಾರಿ ಮಂಜು ಪಾವಗಡ ಎಂಬ ಬೂಸ್ಟ್ ನೀಡಿದ್ದರೂ ಮನೆ ಮಂದಿ ಸೇರಿಕೊಂಡು ಧಿಕ್ಕಾರ ಕೂಗಿದ್ದಾರೆ.
BBK9 : ಬಿಗ್ ಬಾಸ್ನಲ್ಲಿ ಹಳೆ ಫರೆಂಡ್ ಕಂಡು ಫುಲ್ ಖುಷಿಯಾದ ದಿವ್ಯಾ ಉರುಡುಗ!
ಒಂದು ಹಾಡನ್ನು ಹೇಳಿಸಿದ ಮಂಜು
ಮನೆಗೆ ಬರುವುದಕ್ಕೂ ಮುನ್ನ ಎಲ್ಲರ ಬಗ್ಗೆಯೂ ಮಂಜು ಚೆನ್ನಾಗಿಯೇ ತಿಳಿದುಕೊಂಡು ಬಂದಿದ್ದರು. ಹೀಗಾಗಿ ಅವರಿಗೆ ಮನೆಗೆ ಬಂದ ಕೂಡಲೇ ಯಾವುದು ಕಷ್ಟವಾಗಲಿಲ್ಲ. ಅದರಲ್ಲೂ ರಾಜಣ್ಣನನ್ನು ಕಂಡು ಅವರ ಹಾಡನ್ನು ನೆನೆಪಿಸಿಕೊಂಡಿದ್ದಾರೆ. "ರಾಜಣ್ಣ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿ ಇದೆ. ಅವತ್ತು ಹಾಡು ಕೇಳಿದಾಗ ತುಂಬಾ ಖುಷಿ ಅನ್ನಿಸಿತ್ತು. ಒಂದು ಹಾಡು ಹೇಳಿ" ಎಂದಾಗ ರಾಜಣ್ಣ ಕೂಡ ಗೀತಾ ಸಿನಿಮಾದ "ಪ್ರೀತಿ ಎಂದರೇನು ಈಗ ಅರಿತೇನು..." ಎಂಬ ಹಾಡನ್ನು ಹಾಡಿದ್ದಾರೆ. ಜೊತೆಗೆ "ಮಂಜಣ್ಣ ಬಿಗ್ ಬಾಸ್ಗೆ ಬರುತ್ತಾರೆ ಎಂದರೆ ನಮಗೆ ಖುಷಿಯಾಗದೆ ಇರುವುದಿಲ್ಲ. ನೀವೂ ಇದ್ದಷ್ಟು ದಿನ ನಾವೂ ಖುಷಿಯಾಗಿರುತ್ತೇವೆ. ಒಳ್ಳೆಯದಾಗಲಿ ಮಂಜಣ್ಣ" ಎಂದು ಶಂಕರ್ ನಾಗ್ ಸ್ಟೈಲ್ನಲ್ಲಿ ಡೈಲಾಗ್ ಹೊಡೆದಿದ್ದಾರೆ.
BBK9 : ಅಪ್ಪ - ಮಗನ ಬಾಂಧವ್ಯಕ್ಕೊಂದು ಟಾಸ್ಕ್ : ಗುರೂಜಿ ಕಣ್ಣಲ್ಲಿ ಬಂತುನೀರು!
ರಾಜಣ್ಣನದ್ದೇ ಲಕ್ ಗುರು
ಕೆಲವೊಬ್ಬರಿಗೆ ಲಕ್ ಎಂಬುದು ಎಲ್ಲಾ ಕಡೆಯಲ್ಲೂ ಇರುತ್ತದೆ. ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತೆ ಅಂತಾರಲ್ಲ ಹಾಗೇ. ಇಲ್ಲಿ ರಾಜಣ್ಣನದ್ದು ಅದೇ ರೀತಿಯಾದಂತಹ ಲಕ್. ಹಾಡಿದ್ದು ಮಂಜಣ್ಣನೇ ಆದರೂ ಗೆದ್ದಿದ್ದು ಮಾತ್ರ ರಾಜಣ್ಣ. ಯಾವುದೇ ಕಾಯಿ ಹಾಕಿದರೂ ರಾಜಣ್ಣ ಸೋಲಲೇ ಇಲ್ಲ. ಇದು ಮನೆಯವರಿಗೆ ಶಾಕಿಂಗ್ ಆಗಿತ್ತು. ಆದರೂ ಕಡೆಗೆ ಗೆದ್ದಿದ್ದು ಮಾತ್ರ ರಾಜಣ್ಣ.
ರಾಜಣ್ಣನ ಗೆಲುವಿಗೆ ಮನೆ ಮಂದಿ ಶಾಕ್
ಹಾವು ಏಣಿ ಆಟದಲ್ಲಿ ರಾಜಣ್ಣ ಆಟವಾಡುತ್ತಿದ್ದರೆ ಆ ಕಡೆ ಮಂಜಣ್ಣ ಕಾಯಿ ನಡೆಸುತ್ತಾ ಇದ್ದರು. ಈ ಕಡೆ ಮನೆ ಮಂದಿ ರಾಜಣ್ಣ ಒಂದು ಸಲವೂ ವಾಪಾಸ್ ಆಗದೆ, ಸೋಲದೆ ಮುನ್ನಡೆಯುತ್ತಿದ್ದನ್ನು ಗಮನಿಸಿ ಶಾಕ್ ಆಗಿದ್ದರು. ರಾಜಣ್ಣನ ಅದೃಷ್ಟ ಹೇಗಿತ್ತು ಎಂದರೆ ಮಂಜು ಹಾಕಿದ ಪ್ರತಿಯೊಂದು ಕಾಯಿ ಕೂಡ ಗೆಲುವಿಗೆ ಹತ್ತಿರ ತಂದಿತ್ತು. ಫಸ್ಟ್ ವಿನ್ ಆಗಿದ್ದು ರಾಜಣ್ಣ ಅನ್ನೋದು ವಿಶೇಷ.
ಮಂಜುಗೆ ಧಿಕ್ಕಾರ ಕೂಗಿದ ಮನೆಯವರು
ಅತ್ತ ಮಂಜು ಹಾಕುತ್ತಿದ್ದ ಒಂದೊಂದು ಕಾಯಿಯಿಂದ ರಾಜಣ್ಣ ಮುಂದೆ ಹೋಗುತ್ತಾ ಇದ್ದರು. ಅದನ್ನು ಕಂಡು ಮನೆಯವರು ಹೌಹಾರುತ್ತಿದ್ದರು. "ಮಂಜ ಈ ನಂಬರ್ ಹಾಕಬೇಡ, ಆ ನಂಬರ್ ಹಾಕಬೇಡ" ಅಂತ ದಿವ್ಯಾ ಕಿರುಚುತ್ತಾ ಇದ್ದರು. ಆದರೂ ರಾಜಣ್ಣ ಫಸ್ಟ್ 100 ಪರ್ಸೆಂಟ್ಗೆ ತಲುಪಿ ಗೆದ್ದು ಹೊರಗೆ ಬಂದರು. ಗೆದ್ದ ಖುಷಿ ರಾಜಣ್ಣ ಮತ್ತು ಮಂಜಣ್ಣ ಇಬ್ಬರಲ್ಲೂ ಇತ್ತು. ಆದರೆ ಮನೆಯವರೆಲ್ಲಾ ಮಂಜನಿಗೆ ಧಿಕ್ಕಾರ, ಧಿಕ್ಕಾರ ಅಂತ ಕೂಗುತ್ತಾ ಇದ್ದರು.