ಬಿಗ್ ಬಾಸ್ ರು.50 ಲಕ್ಷಗಳ ಮೇಲೆ ಎಲ್ಲರ ಕಣ್ಣು
ಜಯಲಕ್ಷ್ಮಿ, ಅಪರ್ಣಾ ಅವರ್ಯಾರು ನಾಟಕ ಮಾಡಲಿಲ್ಲ. ಆದರೆ ನಿಕಿತಾ ಮಾತ್ರ ಬರೀ ನಾಟಕ ಮಾಡುತ್ತಿದ್ದಾಳೆ ಎಂದು ಇಬ್ಬರೂ ಮಾತನಾಡಿಕೊಂಡರು. ಆದರೆ ಸೂಟ್ ಕೇಸ್ ಬಗ್ಗೆ ಮತ್ರ ಯಾರೂ ಬಾಯ್ಬಿಡಲಿಲ್ಲ. ಸೂಟ್ ಕೇಸ್ ಬಗ್ಗೆ ನಾನು ಇನ್ನೂ ಯೋಚಿಸಿಲ್ಲ ಎಂದು ನಿಕಿತಾ ಹೇಳಿದರೆ, ಮನಿ ಮ್ಯಾಟರ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದರು ಶರ್ಮಾ.
ಒಂದು ವೇಳೆ ಋಷಿಕುಮಾರ್ ಇದ್ದಿದ್ದರೆ ಈ ಸೂಟ್ ಕೇಸ್ ತಗೊಂಡು ಹೋಗುತ್ತಿದ್ದ. ಸಿಕ್ಕಾಪಟ್ಟೆ ಕಷ್ಟ ಇದೆ ಅವನಿಗೆ ಎಂದು ಬ್ರಹ್ಮಾಂಡ ನರೇಂದ್ರ ಶರ್ಮಾ ಹೇಳಿದರು. ಇದೇ ಸಂದರ್ಭದಲ್ಲಿ ಋಷಿಕುಮಾರನಿಗೆ ಗಡಿಬಿಡಿ ಸ್ಟಾರ್ ಎಂಬ ಬಿರುದನ್ನು ಮನೆಯ ಸದಸ್ಯರು ಕೊಟ್ಟರು.

ತಾಯಿ ಜಗನ್ಮಾತೆಯ ಆಶೀರ್ವಾದ, ತಾಯಿಯ ಹಾರೈಕೆ, ಪತ್ನಿಯ ಬೆಂಬಲ ಎಲ್ಲವೂ ನಿನಗಿದೆ. ಖಂಡಿತ ನೀನೇ ಗೆಲ್ಲುತ್ತೀಯ ಎಂದು ಬ್ರಹ್ಮಾಂಡ ಶರ್ಮಾ ಅವರು ಅರುಣ್ ಅವರಿಗೆ ಹೇಳುತ್ತಿದ್ದರು. ಆದರೆ ಬಹುಮಾನದ ಮೊತ್ತ ರು.50 ಲಕ್ಷದ ಮೇಲೆ ಅವರ ಕಣ್ಣೂ ಇತ್ತು ಎಂಬುದು ವಿಶೇಷ.
ವಿಜಯ್ ರಾಘವೇಂದ್ರ ಹಾಗೂ ನಿಕಿತಾ ಸಹ ಹತ್ತು ಲಕ್ಷದ ಸೂಟ್ ಕೇಸ್ ಬಗ್ಗೆ ಚರ್ಚಿಸಿ ಸುಮ್ಮನಾದರು. ಈ ಹತ್ತು ಲಕ್ಷದ ಬಗ್ಗೆ ತಲೆಯೇ ಕೆಡಿಸಿಕೊಳ್ಳದವರೆಂದರೆ ನರೇಂದ್ರ ಬಾಬು ಶರ್ಮಾ ಹಾಗೂ ಅರುಣ್ ಸಾಗರ್. ಇಲ್ಲಿ ಗೆಲ್ಲುವುದಕ್ಕಿಂತ ನನ್ನನ್ನು ನಾನು ಗೆಲ್ಲುವುದು ಮುಖ್ಯ ಎಂದು ಅರುಣ್ ಹೇಳುತ್ತಿದ್ದರು.
ಇನ್ನೊಂದು ಕಡೆ ಬ್ರಹ್ಮಾಂಡ ಗುರುಗಳು, ಅವರೇನೋ ಮರ್ಯಾದೆಯಾಗಿಯೇ ಹೇಳಿದ್ದಾರೆ ಹತ್ತು ಲಕ್ಷ ತಗೊಂಡು ಹೋಗಿ ಎಂದು. ಆದರೆ ಸ್ವಾಭಿಮಾನ ಮುಖ್ಯ ಅಲ್ಲವೇ. ದುಡ್ಡು ಅಲ್ಲಿ ಇಟ್ಟು ಬಿಟ್ಟು ತಗೊಂಡು ಹೋಗಿ ಎಂದು ಹೇಳಿದ್ದು ಅಷ್ಟು ಗೌರವಯುವತಾಗಿಲ್ಲ ಎಂಬರ್ಥದಲ್ಲಿ ಬ್ರಹ್ಮಾಂಡ ಶರ್ಮಾ ಮಾತನಾಡುತ್ತಿದ್ದರು. ಕಡೆಗೆ ಹತ್ತು ಲಕ್ಷಗಳನ್ನು ಯಾರೂ ಮುಟ್ಟದೆ ಅದು 'ಬಿಗ್ ಬಾಸ್' ಮನೆಯ ಸ್ಟೋರ್ ರೂಂ ಸೇರಿತು.


Click it and Unblock the Notifications











