Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
BBK 9 : ಈ ವಾರ ಯಾರು ಕಳಪೆ? ಯಾರು ಉತ್ತಮ? ನೀಡಿದ ಕಾರಣಗಳೇನು?
ಬಿಗ್ಬಾಸ್ ಸೀಸನ್ 09ರ ಎರಡನೇ ವಾರ ಪೂರ್ಣವಾಗಲು ಬಂದಿದೆ. ಮೊದಲ ವಾರ ನಾಮಿನೇಟ್ ಆಗಿದ್ದವರಲ್ಲಿ ಐಶ್ವರ್ಯಾ ಪಿಸೆ ಮನೆಯಿಂದ ಹೊರಗೆ ಹೋಗಿದ್ದಾರೆ. ಈ ಬಾರಿಯೂ ಒಬ್ಬರು ಮನೆಯಿಂದ ಹೊರಗೆ ಹೋಗುವವರಿದ್ದಾರೆ.
ವೀಕೆಂಟ್ ಪಂಚಾಯಿತಿ ಪ್ರಾರಂಭವಾಗುವ ಮುನ್ನ ಶುಕ್ರವಾರ, ವಾರದ ಕ್ಯಾಪ್ಟನ್ ಅನ್ನು ಆಯ್ಕೆ ಮಾಡುವ ಹಾಗೂ ವಾರದ ಕಳಪೆ ಆಟಗಾರ ಹಾಗೂ ಉತ್ತಮ ಆಟಗಾರನನ್ನು ಗುರುತಿಸುವ ಕಠಿಣವಾದ ಟಾಸ್ಕ್ ಮನೆಯ ಸದಸ್ಯರೆದುರು ಇತ್ತು.
ಮೊದಲಿಗೆ ನಡೆದ ಟಾಸ್ಕ್ನಲ್ಲಿ ಆರ್ಯವರ್ಧನ್ ಗುರೂಜಿ ಅವರು ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗಿ ಆಯ್ಕೆ ಆದರು. ಆ ನಂತರ ಉತ್ತಮ-ಕಳಪೆ ಆಟಗಾರರನ್ನು ಗುರುತಿಸುವ ಟಾಸ್ಕ್ ಪ್ರಾರಂಭವಾಯಿತು.
ಮೊದಲಿಗೆ ಪ್ರಾರಂಭಿಸಿದ ಸಾನ್ಯಾ, ತನ್ನ ತಂಡದ ಕ್ಯಾಪ್ಟನ್ ಅನುಪಮಾಗೆ ಉತ್ತಮ ನೀಡಿ ವಿನೋದ್ ಗೊಬ್ರಗಾಲಗೆ ಕಳಪೆ ನೀಡಿದರು. ವಿನೋದ್, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವಿದರು ಎಂದರು. ನಂತರ ಬಂದ ದೀಪಿಕಾ, ಆರ್ಯವರ್ಧನ್ ಅವರಿಗೆ ಅತ್ಯುತ್ತಮ ಹಾಗೂ ಕಳಪೆಯನ್ನು ವಿನೋದ್ಗೆ ನೀಡಿದರು. ನಂತರ ಬಂದ ನಟಿ ಮಯೂರಿ ಸಹ ಆರ್ಯವರ್ಧನ್ಗೆ ಅತ್ಯುತ್ತಮ ಹಾಗೂ ವಿನೋದ್ಗೆ ಕಳಪೆ ನೀಡಿದರು. ನಂತರ ಬಂದ ಅಮೂಲ್ಯ, ಅತ್ಯುತ್ತಮವನ್ನು ಅನುಪಮಾಗೆ ಹಾಗೂ ಕಳಪೆಯನ್ನು ವಿನೋದ್ಗೆ ನೀಡಿದರು. ನಂತರ ಬಂದ ದರ್ಶ್ ಸಹ ಇದೇ ಮಾದರಿ ಅನುಸರಿಸಿದರು. ಬಳಿಕ ಬಂದ ರಾಕೇಶ್, ಅನುಪಮಾಗೆ ಅತ್ಯುತ್ತಮ ಹಾಗೂ ಪ್ರಶಾಂತ್ ಸಂಬರ್ಗಿಗೆ ಕಳಪೆ ನೀಡಿದರು.
ಅನುಪಮಾ ಅವರು ರೂಪೇಶ್ಗೆ ಕಳಪೆಯನ್ನು, ಆರ್ಯವರ್ಧನ್ಗೆ ಉತ್ತಮವನ್ನೂ ನೀಡಿದರು. ದಿವ್ಯಾ ಅವರು ಅನುಪಮಾಗೆ ಉತ್ತಮ, ವಿನೋದ್ಗೆ ಕಳಪೆ ನೀಡಿದರು. ಬಳಿಕ ಬಂದ ನೇಹಾ, ಆರ್ಯವರ್ಧನ್ಗೆ ಅತ್ಯುತ್ತಮ, ರಾಕೇಶ್ಗೆ ಕಳಪೆ ನೀಡಿದರು. ರಾಕೇಶ್ ಪ್ರ್ಯಾಂಕ್ ಮಾಡಿದ್ದಕ್ಕೆ ಅವರಿಗೆ ಕಳಪೆ ಕೊಡುತ್ತಿರುವುದಾಗಿ ಹೇಳಿದರು. ನವಾಜ್ ಅವರು ಅರುಣ್ ಸಾಗರ್ಗೆ ಅತ್ಯುತ್ತಮ ಹಾಗೂ ರಾಕೇಶ್ಗೆ ಕಳಪೆ ನೀಡಿದರು. ಕಾವ್ಯಾಶ್ರೀ ಅವರು ಉತ್ತಮವನ್ನು ಗುರೂಜಿಗೆ ನೀಡಿ, ಕಳಪೆಯನ್ನು ರಾಕೇಶ್ಗೆ ನೀಡಿದರು. ಬಳಿಕ ಬಂದ ರೂಪೇಶ್ ಶೆಟ್ಟಿ, ಅನುಪಮಾಗೆ ಅತ್ಯುತ್ತಮ, ಪ್ರಶಾಂತ್ಗೆ ಕಳಪೆ ನೀಡಿದರು. ಬಳಿಕ ಬಂದ ಪ್ರಶಾಂತ್, ಆರ್ಯವರ್ಧನ್ಗೆ ಅತ್ಯುತ್ತಮ ಹಾಗೂ ರಾಕೇಶ್ಗೆ ಕಳಪೆ ನೀಡಿದರು.
ಬಳಿಕ ಬಂದ ವಿನೋದ್, ರೂಪೇಶ್ ಶೆಟ್ಟಿಗೆ ಅತ್ಯುತ್ತಮ, ರಾಕೇಶ್ಗೆ ಕಳಪೆ ನೀಡಿದರು. ಬಳಿಕ ಬಂದ ಅರುಣ್ ಸಾಗರ್, ಆರ್ಯವರ್ಧನ್ಗೆ ಅತ್ಯುತ್ತಮ ಹಾಗೂ ಕಳಪೆಯನ್ನು ರಾಕೇಶ್ಗೆ ನೀಡಿದರು. ರೂಪೇಶ್ ರಾಜಣ್ಣ ಅವರು ಅತ್ಯುತ್ತಮವನ್ನು ಗುರೂಜಿಗೆ ಹಾಗೂ ಕಳಪೆಯನ್ನು ಪ್ರಶಾಂತ್ ಸಂಬರ್ಗಿಗೆ ನೀಡಿದರು. ಬಳಿಕ ಬಂದ ಆರ್ಯವರ್ಧನ್, ಕಾವ್ಯಾಶ್ರೀಗೆ ಕಳಪೆ ಹಾಗೂ ರೂಪೇಶ್ಗೆ ಅತ್ಯುತ್ತಮ ನೀಡಿದರು. ಅಂತಿಮವಾಗಿ ಮನೆಯರೆಲ್ಲರಿಂದ ಹೆಚ್ಚು ಮತ ಗಳಿಸಿದ್ದ ಆರ್ಯವರ್ಧನ್ಗೆ ಅತ್ಯುತ್ತಮ ನೀಡಲಾಯಿತು. ಆದರೆ ಕಳಪೆ ವಿಷಯದಲ್ಲಿ ವಿನೋದ್ ಹಾಗೂ ರಾಕೇಶ್ಗೆ ಸಮಾನ ಮತಗಳು ಬಿದ್ದಿದ್ದವು. ಆಗ ಮತ ಚಲಾಯಿಸಿದ ಹೊಸ ಕ್ಯಾಪ್ಟನ್ ಆರ್ಯವರ್ಧನ್ ಅವರು ರಾಕೇಶ್ ಅನ್ನು ಕಳಪೆ ಎಂದು ಘೋಷಿಸಿ ಅವರನ್ನು ಜೈಲಿಗೆ ಕಳಿಸಿದರು.