Don't Miss!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಾಲಾಯಕ್' ಜೊತೆ ಶೋಗೆ ಹೋಗಿದ್ದಕ್ಕೆ ದರ್ಶನ್ ಗೆ ಕ್ಷಮೆ ಕೇಳಿದ ಪ್ರಥಮ್.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಗ್ ಬಾಸ್' ಸಂಜನಾ 'ಬಿಲ್ಡಪ್' ಅಂತ ಕರೆದಿರುವುದೇ ಇಂದು ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.
'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!
''ದೂಸ್ರಾ ಮಾತಾಡದೆ ದರ್ಶನ್ ರವರನ್ನ ಸಂಜನಾ ಕ್ಷಮೆ ಕೇಳಬೇಕು'' ಎಂದು 'ಡಿ' ಬಾಸ್ ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ. ಹೀಗಿರುವಾಗಲೇ, ದರ್ಶನ್ ರವರನ್ನ 'ಒಳ್ಳೆ ಹುಡುಗ' ಪ್ರಥಮ್ ಕ್ಷಮೆ ಯಾಚಿಸಿದ್ದಾರೆ.
ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!
''ನಾಲಾಯಕ್' ಸಂಜನಾ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ದಯವಿಟ್ಟು ಕ್ಷಮಿಸಿ ದರ್ಶನ್ ಸರ್'' ಎಂದು ಪ್ರಥಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿರಿ....
ಕ್ಷಮಿಸಿ ದರ್ಶನ್ ಸರ್....
''ಎಲ್ಲಾ challenging ಅಭಿಮಾನಿಗಳಿಗೆ ಕ್ಷಮೆ ಕೋರುತ್ತಿರುವೆ.... ಕ್ಷಮಿಸಿ ದರ್ಶನ್ ಸರ್.... ನಿಮಗೆ ಅಗೌರವ ಮಾಡಿದ ನಾಲಯಕ್ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ....ಈಗಲೂ ಸ್ಕ್ರೀನ್ ಶೇರ್ ಮಾಡ್ತಾ ಇರೋದಕ್ಕೆ ನಾಚಿಕೆ ನನ್ನ ಬಗ್ಗೆಯೇ ಇದೆ. ನಾನು ಈ ಕಾರಣಕ್ಕೆ ಆ ಹೆಣ್ಣಿನ ರೂಪದಲ್ಲಿರೋ ಕಸದ ಜೊತೆ ಸ್ಕ್ರೀನ್ ಶೇರ್ ಮಾಡೋಕೆ ಹಿಂಸೆ'' ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರಥಮ್ ಬರೆದುಕೊಂಡಿದ್ದಾರೆ.
'ಹೀಲ್ಸ್ ಚಪ್ಪಲಿ ಹಾಕೊಂಡ್ರೂ, 'ಡಿ' ಬಾಸ್ ಹೈಯ್ಟ್ ಗೆ ಬರಲ್ಲ, ಬಿಲ್ಡಪ್ ಅಂತಿಯಾ?'
ಗಿಮಿಕ್ ಮಾಡೋದು ಸುಲಭ
''ತುಂಬಾ ಸುಲಭ ಸಾಧಕರ ಹೆಸರನ್ನು ಗಿಮಿಕ್ ಗೆ ಬಳಸೋದು.... Actually 'ಸೂಪರ್ ಟಾಕ್ ಟೈಮ್' ಮುಗಿದ ಮೇಲೆ ಒಬ್ಬರು ಹೀಗೆ ಹೇಳಿದರು.... Trust me it will be the biggest troll forever..(#darshan sir buildup issue)'' - ಪ್ರಥಮ್
ಪಬ್ಲಿಸಿಟಿ ಸ್ಟಂಟ್
''ಅವಾಗ ಹೇಳಿಕೆ ಕೊಟ್ಟ ಹುಡುಗಿ ಮತ್ತು ಆಕೆಯ ಜೊತೆಯಲ್ಲಿದ್ದ ಪುಣ್ಯಾತ್ಮ ಹೇಳಿದ ಮಾತು ಏನು ಗೊತ್ತಾ? ಒಳ್ಳೆಯದ್ದೋ... ಕೆಟ್ಟದೋ ನಮಗೆ ಬೇಡ... ಇವಳ ಹೆಸರು ಪಬ್ಲಿಸಿಟಿಯಲ್ಲಿ ಇರಬೇಕು... ಹಿಂಗೆ ಹೇಳೋದ್ರಿಂದ ಒಂದು ವೀಕ್ ಮತ್ತೆ ಪಬ್ಲಿಸಿಟಿ ಸಿಗುತ್ತಾ?Just chill....ಅಂದ.... ಇದಕ್ಕೆ ಎನಿದ್ಯಪ್ಪ ಸಾಕ್ಷಿ ಅಂದ್ರೆ.... ಜಗಳ ನಡೆದಾಗಲೇ ಸಾಕ್ಷಿ ಇಟ್ಟುಕೊಳ್ಳದ ದಡ್ಡ ನಾನು... ಇದಕ್ಕೆ ಎಲ್ಲಿಂದ ತರಲಿ ಸಾಕ್ಷಿ?'' - ಪ್ರಥಮ್
ಕಳಗೆ ನಿಂತು ಕಲ್ಲು ಹೊಡೆಯುವುದು ಸುಲಭ
''ತುಂಬಾ ಸಾಧಕರಿಗೆ ಕೆಳಗೆ ನಿಂತ್ಕೊಂಡು ಕಲ್ಲು ಹೊಡೆದು ಬಿಟ್ಟರೆ ಎಲ್ಲರ ಗಮನ ನನ್ನ ಕಡೆ ಬರುತ್ತೆ ಅನ್ನೋದು #ತಿರ್ಕೆ ಶೋಕಿ ಅಲ್ಲದೆ ಬೇರೇನು ಇಲ್ಲ....'' - ಪ್ರಥಮ್
ನಾಚಿಕೆ ಆಗುತ್ತೆ
''ನೀವು ಹೇಳಬಹುದು ಅವರವರ ಅಭಿಪ್ರಾಯ ಅವರ ಹಕ್ಕು ಅಂತ.... ಇಲ್ಲ ಅನ್ನಲ್ಲ... But ಜನರ ಗಮನ ಸೆಳೆಯೋಕೆ ಅಂತ ಸ್ಟೇಟ್ಮೆಂಟ್ ಕೊಡೋದು ನಿಜಕ್ಕೂ ಬೇಸರ... ಇಂಥವರ ಜೊತೆ ಈಗಲೂ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ನಾಚಿಕೆ ಇದೆ... ನನ್ನನ್ನು ಮೊದಲ ಬಾರಿ Sir ಅಂತ ಹೇಳಿದ ಪುಣ್ಯಾತ್ಮ ದರ್ಶನ್ ಅವರು... ನಿಮಗೆ ಅಗೌರವ ನಡೆದಾಗ ಏನೂ ಮಾಡಲಾಗಲಿಲ್ಲ ಕ್ಷಮಿಸಿ....ಅಂದಹಾಗೆ ಇಲ್ಲಿ ಮಾತಾಡ್ತಾ ಇರೋದು big boss ಪ್ರಥಮ ಅಲ್ಲ.... ಕನ್ನಡ ಕಲಾ ಸಾಧಕರನ್ನು ಗೌರವಿಸೋ ಅಭಿಮಾನಿ ಪ್ರಥಮ ಆಗಿ ಹೇಳಿದ್ದಾನೆ ಅಷ್ಟೇ.... ಕೀರ್ತಿ ಇವತ್ತಿಗೂ ನನ್ನ ಒಳ್ಳೆಯ ಗೆಳೆಯ....'' - ಪ್ರಥಮ್