ಅವಳ ತೊಡೆ ಮೇಲೆ ತಲೆಯಿಟ್ಟು ಮಲಗಬೇಕು
ಇನ್ನೊಂದು ಕಡೆ ಇವರಿಬ್ಬರ ನಡುವಿನ ಮನಸ್ತಾಪಕ್ಕೆ ಬ್ರೇಕ್ ಹಾಕಲು ವಿಜಯ್ ರಾಘವೇಂದ್ರ ತಮ್ಮ ಸಂಕಟವನ್ನು ತೋಡಿಕೊಂಡರು. ತಾನು ಹೇಗಿದ್ದೆ ಹೇಗಾದೆ ಎಂದು ತಮ್ಮ ಹಳೆಯ ದಿನಗಳನ್ನು ನೆನೆದು ಕಣ್ಣೀರ ಕೋಡಿ ಹರಿಸಿದರು. ತಮ್ಮ ಪತ್ನಿಯನ್ನು ನೆನೆದು ಇನ್ನಷ್ಟು ಸಂಕಟ ಪಟ್ಟರು.
ಒಂದೇ ಒಂದು ಸಾರಿ ಅವಳ ತೊಡೆ ಮೇಲೆ ತಲೆ ಇಟ್ಟು ಮಲಗಬೇಕು ಅನ್ನಿಸುತ್ತಿದೆ ಎಂದು ವಿಜಯ್ ರಾಘವೇಂದ್ರ ಕಣ್ಣೀರಿಟ್ಟರು. ಅವರನ್ನು ಮನೆಯ ಎಲ್ಲ ಸದಸ್ಯರು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಕಡೆಗೂ ಅವರ ನೋವು ಕಣ್ಣೀರಾಗಿ ಹರಿಯಿತು.

ಅದ್ಯಾಕೋ ಏನೋ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ಮೌನಕ್ಕೆ ಶರಣಾಗಿದ್ದರು. ಆಗಾಗ ಮೌನವಾಗಿ ರೋದಿಸುತ್ತಿದ್ದರು. ನಿಖಿತಾ ಬಳಿ ಸಂಕಟ ಹೇಳಿಕೊಂಡು ಕಣ್ಣು ತೇವ ಮಾಡಿಕೊಳ್ಳುತ್ತಿದ್ದರು. ಅವರನ್ನು ನಿಖಿತಾ ಸಮಾಧಾನ ಪಡಿಸುತ್ತಿದ್ದರು.
ಅವರು ಚಂದ್ರಿಕಾ ಬಗ್ಗೆ ಸುಖಾ ಸುಮ್ಮನೆ ಆಪಾದನೆ ಮಾಡಿದ್ದರು. ಅದೇನೆಂದರೆ "ಬೆಳಗ್ಗೆ ಅಪ್ಪಾಜಿ ರಾತ್ರಿ ಇನ್ನೇನೋ" ಎಂದು ಚಂದ್ರಿಕಾ ಎಂದಿದ್ದಾಗಿ ಹೇಳಿದ್ದರು. ಆದರೆ ಚಂದ್ರಿಕಾ ಅವರು ಆ ರೀತಿ ಹೇಳಿರಲಿಲ್ಲ ಎಂಬುದನ್ನು ಸುದೀಪ್ ಸಾಬೀತು ಪಡಿಸಿದ್ದರು. ಸುಳ್ಳು ಹೇಳಿದ್ದಕ್ಕೆ ಶರ್ಮಾ ಅವರು ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದರು.


Click it and Unblock the Notifications











