Brahmagantu; ನರಸಿಂಹನನ್ನು ಕಂಟ್ರೋಲ್ ಮಾಡಲು ಮುಂದಾದ ಸಂಜನಾ..!
ಬ್ರಹ್ಮಗಂಟು ಧಾರಾವಾಹಿಯಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆ ವತ್ಸಲಾ ಜಯರಾಂ ಗೆ ಪಾದ ಪೂಜೆಯನ್ನು ಮಾಡುತ್ತಾಳೆ. ಪ್ರತಿ ಬಾರಿಯಂತೆಯೇ ಈ ಬಾರಿಯೂ 500 ರೂಪಾಯಿಯನ್ನು ಕೊಡುತ್ತಾನೆ. ಹಣ ಹೆಚ್ಚಿಗೆ ಮಾಡುವುದಿಲ್ವಾ ಎಂದು ಕೇಳಿದ್ದಕ್ಕೆ, ವರ್ಷ ವರ್ಷಕ್ಕೆ ನಿನ್ನ ಪ್ರೀತಿ ಹೆಚ್ಚಾಗುತ್ತೆ ಎಂದರೆ ನಾನು ಕೂಡ ಹಣವನ್ನು ಹೆಚ್ಚಿಗೆ ಕೊಡುತ್ತಿದ್ದೆ ಎಂದು ಹೇಳುತ್ತಾನೆಈ ಮಾತನ್ನು ಕೇಳಿದ ವತ್ಸಲಾಳಿಗೂ ಖುಷಿಯಾಗುತ್ತದೆ. ಇನ್ನು ಜಯರಾಂ ತಂಗಿ ದುಬೈನಲ್ಲಿರುವ ತನ್ನ ಗಂಡನಿಗೆ ವೀಡಿಯೋ ಕಾಲ್ ಮೂಲಕವೇ ಪಾದ ಪೂಜೆ ಮಾಡುವುದಾಗಿ ಹೇಳಿ ಹೋಗುತ್ತಾಳೆ.
ನರಸಿಂಹನನ್ನು ಕಂಟ್ರೋಲ್ ಮಾಡುತ್ತಿರುವ ಸಂಜನಾ
ಇತ್ತ ನರಸಿಂಹನಿಗೆ ಬೆಳಗ್ಗೆ ಎದ್ದಾಗಿನಿಂದಲೂ ರಾತ್ರಿ ಮಲಗುವವರೆಗೂ ಕುಡಿಯಲು ಮಧ್ಯಪಾನ ಬೇಕೇ ಬೇಕು. ಬೆಳಗೆದ್ದ ಕೂಡಲೇ ಬಾರ್ ಗೆ ಹೋಗಿ ಮದ್ಯವನ್ನು ಕೇಳುತ್ತಾನೆ. ಆದರೆ ಎಲ್ಲಾ ಅಂಗಡಿಗಳಲ್ಲೂ ನರಸಿಂಹನಿಗೆ ಮದ್ಯ ಕೊಡುವುದಕ್ಕೆ ನಿರಾಕರಿಸುತ್ತಾರೆ. ನಿಮಗೆ ಮದ್ಯ ಕೊಡಬಾರದು ಎಂದು ಮೇಲಿಂದ ಆರ್ಡರ್ ಆಗಿದೆ ಎನ್ನುತ್ತಾರೆ. ಕೊನೆಗೆ ನರಸಿಂಹನ ಸ್ನೇಹಿತನಿಗೂ ಸಿಗುವುದಿಲ್ಲ. ಯಾಕೆ ಹೀಗೆ ಆಗುತ್ತಿದೆ ಎಂದು ನರಸಿಂಹ ತಲೆ ಕೆಡಿಸಿಕೊಂಡಿರುತ್ತಾನೆ. ಸಂಜನಾ ನರಸಿಂಹನಿಗೆ ಪಾಠ ಕಲಿಸಬೇಕು ಎಂದು ತನ್ನ ತಂದೆ ಎಸ್ ಐ ನಾಗರಾಜ್ ಮೂಲಕ ನರಸಿಂಹನಿಗೆ ಮದ್ಯ ಸಿಗದಂತೆ ನೋಡಿಕೊಳ್ಳುತ್ತಿರುತ್ತಾಳೆ. ಈ ವಿಚಾರ ತಿಳಿದ ನರಸಿಂಹ ಅಮುಲ್ ಬೇಬಿ ಕೊಬ್ಬನ್ನು ನಾನು ವಿಚಾರಿಸಿಕೊಳ್ಳುತ್ತೇನೆ ಎಂದು ಹೇಳುತ್ತಾನೆ.ಈ ಮಾತನ್ನು ಕೇಳಿದ ವತ್ಸಲಾಳಿಗೂ ಖುಷಿಯಾಗುತ್ತದೆ. ಇನ್ನು ಜಯರಾಂ ತಂಗಿ ದುಬೈನಲ್ಲಿರುವ ತನ್ನ ಗಂಡನಿಗೆ ವೀಡಿಯೋ ಕಾಲ್ ಮೂಲಕವೇ ಪಾದ ಪೂಜೆ ಮಾಡುವುದಾಗಿ ಹೇಳಿ ಹೋಗುತ್ತಾಳೆ.

ನರಸಿಂಹನನ್ನು ಕಂಟ್ರೋಲ್ ಮಾಡುತ್ತಿರುವ ಸಂಜನಾ
ಇತ್ತ ನರಸಿಂಹನಿಗೆ ಬೆಳಗ್ಗೆ ಎದ್ದಾಗಿನಿಂದಲೂ ರಾತ್ರಿ ಮಲಗುವವರೆಗೂ ಕುಡಿಯಲು ಮಧ್ಯಪಾನ ಬೇಕೇ ಬೇಕು. ಬೆಳಗೆದ್ದ ಕೂಡಲೇ ಬಾರ್ ಗೆ ಹೋಗಿ ಮದ್ಯವನ್ನು ಕೇಳುತ್ತಾನೆ. ಆದರೆ ಎಲ್ಲಾ ಅಂಗಡಿಗಳಲ್ಲೂ ನರಸಿಂಹನಿಗೆ ಮದ್ಯ ಕೊಡುವುದಕ್ಕೆ ನಿರಾಕರಿಸುತ್ತಾರೆ. ನಿಮಗೆ ಮದ್ಯ ಕೊಡಬಾರದು ಎಂದು ಮೇಲಿಂದ ಆರ್ಡರ್ ಆಗಿದೆ ಎನ್ನುತ್ತಾರೆ. ಕೊನೆಗೆ ನರಸಿಂಹನ ಸ್ನೇಹಿತನಿಗೂ ಸಿಗುವುದಿಲ್ಲ. ಯಾಕೆ ಹೀಗೆ ಆಗುತ್ತಿದೆ ಎಂದು ನರಸಿಂಹ ತಲೆ ಕೆಡಿಸಿಕೊಂಡಿರುತ್ತಾನೆ. ಸಂಜನಾ ನರಸಿಂಹನಿಗೆ ಪಾಠ ಕಲಿಸಬೇಕು ಎಂದು ತನ್ನ ತಂದೆ ಎಸ್ ಐ ನಾಗರಾಜ್ ಮೂಲಕ ನರಸಿಂಹನಿಗೆ ಮದ್ಯ ಸಿಗದಂತೆ ನೋಡಿಕೊಳ್ಳುತ್ತಿರುತ್ತಾಳೆ. ಈ ವಿಚಾರ ತಿಳಿದ ನರಸಿಂಹ ಅಮುಲ್ ಬೇಬಿ ಕೊಬ್ಬನ್ನು ನಾನು ವಿಚಾರಿಸಿಕೊಳ್ಳುತ್ತೇನೆ ಎಂದು ಹೇಳುತ್ತಾನೆ.
ಸೌಂದರ್ಯಾಳಿಂದ ಬೈಯಿಸಿಕೊಂಡ ಸುಕನ್ಯಾ
ಸೌಂದರ್ಯಾಳ ಮೇಲೆ ದೀಪಾ ಬೀಳುವಂತೆ ಮಾಡಬೇಕು. ಆಗ ಸೌಂದರ್ಯ ದೀಪಾಳನ್ನು ಬೈದು ಮನೆಯಿಂದ ಆಚೆ ಹಾಕುತ್ತಾಳೆ ಎಂದು ಸುಕನ್ಯಾ ಪ್ಲಾನ್ ಮಾಡುತ್ತಾಳೆ. ಹೀಗಾಗಿ ಸೌಮದರ್ಯ ಟೆರೆಸ್ ಗೆ ಹೋಗುವ ಮುನ್ನ ದೀಪಾಳನ್ನು ಬಟ್ಟೆ ತರಲು ಕಳಿಸುತ್ತಾಳೆ. ದೀಪಾ ಕಾಲು ಜಾರಿ ಬೀಳಲಿ ಎಂದು ತಂತಿ ಕಟ್ಟಿರುತ್ತಾಳೆ. ಅಕಸ್ಮಾತ್ ಆಗಿ ಚಿರಾಗ್ ಟೆರೆಸ್ ಮೇಲೆ ಹೋಗಬೇಕು ಎಂದು ಹೊರಡುತ್ತಾನೆ. ಸುಕನ್ಯಾ ಪ್ಲಾನ್ ನಂತೆಯೇ ದೀಪಾ ಬೀಳುತ್ತಾಳೆ. ಆದರೆ, ಚಿರಾಗ್ ಮೇಲೆ ಬಿದ್ದಾಗ ಅವನು ದೀಪಾಳನ್ನು ತಬ್ಬಿಕೊಳ್ಳುತ್ತಾನೆ. ಹಿಂದೆಯೇ ಬರುವ ಸೌಂದರ್ಯ ಈ ಘಟನೆಯನ್ನು ನೋಡಿ ಬೈಯುತ್ತಾನೆ. ಆಗ ದೀಪಾ ತಂತಿಯನ್ನು ತೋರಿಸುತ್ತಾಳೆ. ಸುಕನ್ಯಾಳನ್ನು ಕರೆದು ಸೌಂದರ್ಯ ಬೈದು ಕಳಿಸುತ್ತಾಳೆ. ಇನ್ಮುಂದೆ ನಿಮಗೆ ಯಾವ ಕೆಲಸವನ್ನು ನೀಡುವುದಿಲ್ಲ ಎನ್ನುತ್ತಾಳೆ.

ಸಹಾಯಕ್ಕೆ ಮುಂದಾದ ದೀಪಾ
ಇನ್ನು ದೀಪಾ ಹೊಸ ಕನ್ನಡಕ ಸಿಕ್ಕಿದ್ದಕ್ಕೆ ಖುಷಿಯಾಗಿದ್ದಾಳೆ. ಜಾಜಿ ಬಳಿ ಹೋಗಿ ಇದನ್ನು ಖುಷಿಯಿಂದ ಹೇಳಿಕೊಳ್ಳಲು ಯತ್ನಿಸುತ್ತಾಳೆ. ಆದರೆ, ಜಾಜಿ ತನ್ನ ಭಾವನಿಗೆ ಆರೋಗ್ಯ ಸಮಸ್ಯೆ ಇದ್ದು, ಹಣ ಬೇಕಾಗಿದೆ ಎಂದಾಗ ದೀಪಾ ತನ್ನ ಬಳಿ ಇರುವ ಚಿನ್ನವನ್ನು ಕೊಡುತ್ತೇನೆ ಎನ್ನುತ್ತಾಳೆ. ದೀಪಾಳ ಸಹಾಯದ ಗುನ ಕಂಡು ಜಾಜಿ ಮರುಗುತ್ತಾಳೆ. ದೀಪಾ ಎಲ್ಲರಿಗೂ ಕಷ್ಟ ಬಂದೇ ಬರುತ್ತದೆ. ಕಷ್ಟ ಬಂದವರಿಗೆ ಸಹಾಯ ಮಾಡಬೇಕು ಅಷ್ಟೇ ಎಂದು ಸರಾಗವಾಗಿ ಹೇಳುತ್ತಾಳೆ.


Click it and Unblock the Notifications











