Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರತಿ ಮನ್ಮಥರನ್ನು ಹೊರಗೆ ಕಳುಹಿಸಲು ಬ್ರಹ್ಮಾಂಡ ಪ್ಲಾನ್
ಲೂಸ್ ಮಾದ ಅಲಿಯಾಸ್ ಯೋಗೇಶ್ ಅವರು ಬಿಗ್ ಬಾಸ್ ಮನೆಗೆ ಆಗಮಿಸಿದ ಬಳಿಕ ಅದ್ಯಾಕೋ ಏನೋ ಮನೆಯ ವಾತಾವರಣ ಇನ್ನಷ್ಟು ಹದಗೆಟ್ಟಿದೆ. ನಿಕಿತಾ ನಾಮಿನೇಟ್ ಆದರೆ ಯೋಗಿಯೂ ನಾಮಿನೇಟ್ ಆದಂತೆ. ನಿಕಿತಾ ಮನೆಯಲ್ಲಿ ಇರುವಷ್ಟು ದಿನವೂ ಯೋಗಿಯೂ ಇರಬಹುದು ಎಂದು ಈಗಾಗಲೆ ಬಿಗ್ ಬಾಸ್ ಹೇಳಿರುವುದು ಮನೆಯ ಸದಸ್ಯರಿಗೆ ಒಂಥರಾ ಮಜಾ ಕೊಟ್ಟಂತಿದೆ.
ಇಲ್ಲಿವೆ ನೋಡಿ 56 ಹಾಗೂ 57ನೇ ದಿನದ ಹೈಲೈಟ್ಸ್. ನಿಕಿತಾರನ್ನು ಕಳುಹಿಸಿದರೆ ಯೋಗಿ ಸಹ ಮನೆಯಿಂದ ಔಟ್ ಆಗುತ್ತಾನೆ ಎಂಬ ಬಗ್ಗೆ ನರೇಂದ್ರ ಬಾಬು ಶರ್ಮಾ ಕೊಂಚ ಸೀರಿಯಸ್ಸಾಗಿ ಯೋಚಿಸಿರುವಂತಿದೆ.
ಇದೇ ವಿಷಯವನ್ನು ಅವರು ಅನುಶ್ರೀ ಹಾಗೂ ವಿಜಯ್ ರಾಘವೇಂದ್ರ ಬಳಿ ಚರ್ಚಿಸಿದರು. ನೋಡಿ ನಿಕಿತಾರನ್ನು ನಾವು ಹೇಗಾದರೂ ಮನೆಯಿಂದ ಹೊರಹೋಗುವಂತೆ ಮಾಡಬೇಕು. ಆಗ ಒಂದೇ ಏಟಿಗೆ ಎರಡು ಹಕ್ಕಿ ಹೊಡೆದಂತಾಗುತ್ತದೆ ಎಂದರು.
ನಾವು ಈಗಲೇ ಪ್ಲಾನ್ ಹಾಕಿಕೊಳ್ಳೋಣ ರತಿಮನ್ಮಥರನ್ನು ಹೊರಗೆ ಕಳುಹಿಸೋಣ ಎಂದರು. ಇನ್ನೊಂದು ಕಡೆ ಅರುಣ್ ಸಾಗರ್ ಅವರಿಗೆ ಮನೆಯ ಎಲ್ಲ ಸದಸ್ಯರ ಬಟ್ಟೆ ಒಗೆಯುವ ಕಾಯಕ ನೀಡಲಾಗಿದೆ. ಅವರು ರಾಜ್ಯದ ಎಲ್ಲಾ ಬಟ್ಟೆ ಒಗೆಯುವವರ ಪರವಾಗಿ ನಾನು ಕೊಳೆ ತೆಗೆಯುತ್ತೇನೆ. ಎಲ್ಲರೂ ನನಗೆ ಶಕ್ತಿ ಕೊಡಿ ಎಂದು ಕೇಳಿಕೊಂಡು ತಮ್ಮ ಕಾಯಕ ಶುರುವಚ್ಚಿಕೊಂಡರು. ಇದಕ್ಕೆ ಧ್ವನಿಗೂಡಿಸಿದ ಯೋಗಿ ಬಟ್ಟೆ ತೊಳೆಯಲು ಬುಲೆಟ್ ಪ್ರಕಾಶ್ ಹೆಲ್ಫ್ ಕೇಳು ಎಂದು ತಮಾಷೆ ಮಾಡಿದ.