ನನ್ ಮಕ್ಳಾ ಏನ್ ತಿಳ್ಕೊಂಡಿದ್ದೀರಾ ನನ್ನ ಎಂದ ಬ್ರಹ್ಮಾಂಡ
ನನ್ ಮಕ್ಳ ನನ್ನನ್ನು ಏನೆಂದುಕೊಂಡಿದ್ದೀರಿ. ಸೊಂಟ ಬಿದ್ದುಹೋದರೆ ಯಾ ನನ್ ಮಗ ಬಂದು ನೋಡ್ತಾನೆ. ನನ್ ಮಕ್ಳಾ ನಾನು ಕೈಕಾಲು ಒತ್ತಿಸಿಕೊಳ್ಳೋಕೆ ನಿಮ್ಮಲ್ಲೇ ಇಬ್ಬರನ್ನು ಇಟ್ಟುಕೊಳ್ತೀನಿ. ನನ್ನ ಭಕ್ತಾದಿಗಳು ಒಂದೊಂದು ರುಪಾಯಿ ಕೊಟ್ರು ಸಾಕು ಅದೇ ಬೇಜಾನ್ ಆಗುತ್ತದೆ. ಭಕ್ತಾದಿಗಳೇ ಕರುಣಿಸಿ.
ನನ್ ಮಕ್ಳಾ ನನ್ನನ್ನು ಕೋತಿ ತರಹ ಆಡಿಸುತ್ತಿದ್ದೀರಲ್ಲಾ. ನಿಮಗೆ ಕಾದಿದೆ ಎಂದು ಬಿಗ್ ಬಾಸ್ ಮುಖಕ್ಕೆ ಮಂಗಳಾರತಿ ಮಾಡಿದರು. ಈ ಬಾರಿ ಸುದೀಪ ಬ್ಯಾಗ್ ಎತ್ತಿಕೋ ಎನ್ನುತ್ತಿದ್ದಂತೆ ಓಡಿ ಹೋಗ್ತೀನಿ. ಸಾಕಪ್ಪಾ ಸಾಕು ಇವರ ಸಹವಾಸ ಎಂದರು.

ಇನ್ನೊಂದು ಕಡೆ ಅರುಣ್ ಸಾಗರ್ ಅವರಿಗೆ ಬಿಗ್ ಬಾಸ್ ರಹಸ್ಯ ಟಾಸ್ಕ್ ಒಂದನ್ನೂ ಕೊಟ್ಟರು. ಅದರ ಪ್ರಕಾರ ಅವರು ಐದುನೂರು ಲೀಟರ್ ಟ್ಯಾಂಕ್ ನಿಂದ ಖಾಲಿಯಾಗುವಂತೆ ಎಲ್ಲರನ್ನೂ ಒಪ್ಪಿಸಬೇಕು. ಆದರೆ ರಹಸ್ಯ ಟಾಸ್ಕ್ ಬಗ್ಗೆ ಮಾತ್ರ ಎಲ್ಲೂ ಬಾಯಿಬಿಡಬಾರದು ಎಂದು ಕಟ್ಟಪ್ಪಣೆ ಮಾಡಿದರು.
ನಿಕಿತಾ ಜೊತೆ ಚಂದ್ರಿಕಾ ಮಾತನಾಡುತ್ತಾ, "ಇಲ್ಲಿಗೆ ನಾನು ಬಂದಿರುವುದು ನನ್ನ ಬಗೆಗಿನ ತಪ್ಪು ತಿಳವಳಿಕೆಯನ್ನು ದೂರ ಮಾಡಲು. ಮುಂದೆ ನನ್ನ ಮಗನಿಗೆ ತೊಂದರೆ ಆಗಬಾರದಲ್ಲವೇ. ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ನನಗೇನು ದುಡ್ಡು ಮಾಡಬೇಕು ಎಂಬ ಆಸೆ ಇಲ್ಲ" ಎಂದರು. ಆಗ ಸಮಯ ಮಧ್ಯರಾತ್ರಿ ಮೀರಿತ್ತು.


Click it and Unblock the Notifications











