Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನ್ ಮಕ್ಳಾ ಏನ್ ತಿಳ್ಕೊಂಡಿದ್ದೀರಾ ನನ್ನ ಎಂದ ಬ್ರಹ್ಮಾಂಡ
ನನ್ ಮಕ್ಳ ನನ್ನನ್ನು ಏನೆಂದುಕೊಂಡಿದ್ದೀರಿ. ಸೊಂಟ ಬಿದ್ದುಹೋದರೆ ಯಾ ನನ್ ಮಗ ಬಂದು ನೋಡ್ತಾನೆ. ನನ್ ಮಕ್ಳಾ ನಾನು ಕೈಕಾಲು ಒತ್ತಿಸಿಕೊಳ್ಳೋಕೆ ನಿಮ್ಮಲ್ಲೇ ಇಬ್ಬರನ್ನು ಇಟ್ಟುಕೊಳ್ತೀನಿ. ನನ್ನ ಭಕ್ತಾದಿಗಳು ಒಂದೊಂದು ರುಪಾಯಿ ಕೊಟ್ರು ಸಾಕು ಅದೇ ಬೇಜಾನ್ ಆಗುತ್ತದೆ. ಭಕ್ತಾದಿಗಳೇ ಕರುಣಿಸಿ.
ನನ್ ಮಕ್ಳಾ ನನ್ನನ್ನು ಕೋತಿ ತರಹ ಆಡಿಸುತ್ತಿದ್ದೀರಲ್ಲಾ. ನಿಮಗೆ ಕಾದಿದೆ ಎಂದು ಬಿಗ್ ಬಾಸ್ ಮುಖಕ್ಕೆ ಮಂಗಳಾರತಿ ಮಾಡಿದರು. ಈ ಬಾರಿ ಸುದೀಪ ಬ್ಯಾಗ್ ಎತ್ತಿಕೋ ಎನ್ನುತ್ತಿದ್ದಂತೆ ಓಡಿ ಹೋಗ್ತೀನಿ. ಸಾಕಪ್ಪಾ ಸಾಕು ಇವರ ಸಹವಾಸ ಎಂದರು.
ಇನ್ನೊಂದು ಕಡೆ ಅರುಣ್ ಸಾಗರ್ ಅವರಿಗೆ ಬಿಗ್ ಬಾಸ್ ರಹಸ್ಯ ಟಾಸ್ಕ್ ಒಂದನ್ನೂ ಕೊಟ್ಟರು. ಅದರ ಪ್ರಕಾರ ಅವರು ಐದುನೂರು ಲೀಟರ್ ಟ್ಯಾಂಕ್ ನಿಂದ ಖಾಲಿಯಾಗುವಂತೆ ಎಲ್ಲರನ್ನೂ ಒಪ್ಪಿಸಬೇಕು. ಆದರೆ ರಹಸ್ಯ ಟಾಸ್ಕ್ ಬಗ್ಗೆ ಮಾತ್ರ ಎಲ್ಲೂ ಬಾಯಿಬಿಡಬಾರದು ಎಂದು ಕಟ್ಟಪ್ಪಣೆ ಮಾಡಿದರು.
ನಿಕಿತಾ ಜೊತೆ ಚಂದ್ರಿಕಾ ಮಾತನಾಡುತ್ತಾ, "ಇಲ್ಲಿಗೆ ನಾನು ಬಂದಿರುವುದು ನನ್ನ ಬಗೆಗಿನ ತಪ್ಪು ತಿಳವಳಿಕೆಯನ್ನು ದೂರ ಮಾಡಲು. ಮುಂದೆ ನನ್ನ ಮಗನಿಗೆ ತೊಂದರೆ ಆಗಬಾರದಲ್ಲವೇ. ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ನನಗೇನು ದುಡ್ಡು ಮಾಡಬೇಕು ಎಂಬ ಆಸೆ ಇಲ್ಲ" ಎಂದರು. ಆಗ ಸಮಯ ಮಧ್ಯರಾತ್ರಿ ಮೀರಿತ್ತು.