Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನ್ ಮಕ್ಳಾ ಏನ್ ತಿಳ್ಕೊಂಡಿದ್ದೀರಾ ನನ್ನ ಎಂದ ಬ್ರಹ್ಮಾಂಡ
ನನ್ ಮಕ್ಳ ನನ್ನನ್ನು ಏನೆಂದುಕೊಂಡಿದ್ದೀರಿ. ಸೊಂಟ ಬಿದ್ದುಹೋದರೆ ಯಾ ನನ್ ಮಗ ಬಂದು ನೋಡ್ತಾನೆ. ನನ್ ಮಕ್ಳಾ ನಾನು ಕೈಕಾಲು ಒತ್ತಿಸಿಕೊಳ್ಳೋಕೆ ನಿಮ್ಮಲ್ಲೇ ಇಬ್ಬರನ್ನು ಇಟ್ಟುಕೊಳ್ತೀನಿ. ನನ್ನ ಭಕ್ತಾದಿಗಳು ಒಂದೊಂದು ರುಪಾಯಿ ಕೊಟ್ರು ಸಾಕು ಅದೇ ಬೇಜಾನ್ ಆಗುತ್ತದೆ. ಭಕ್ತಾದಿಗಳೇ ಕರುಣಿಸಿ.
ನನ್ ಮಕ್ಳಾ ನನ್ನನ್ನು ಕೋತಿ ತರಹ ಆಡಿಸುತ್ತಿದ್ದೀರಲ್ಲಾ. ನಿಮಗೆ ಕಾದಿದೆ ಎಂದು ಬಿಗ್ ಬಾಸ್ ಮುಖಕ್ಕೆ ಮಂಗಳಾರತಿ ಮಾಡಿದರು. ಈ ಬಾರಿ ಸುದೀಪ ಬ್ಯಾಗ್ ಎತ್ತಿಕೋ ಎನ್ನುತ್ತಿದ್ದಂತೆ ಓಡಿ ಹೋಗ್ತೀನಿ. ಸಾಕಪ್ಪಾ ಸಾಕು ಇವರ ಸಹವಾಸ ಎಂದರು.
ಇನ್ನೊಂದು ಕಡೆ ಅರುಣ್ ಸಾಗರ್ ಅವರಿಗೆ ಬಿಗ್ ಬಾಸ್ ರಹಸ್ಯ ಟಾಸ್ಕ್ ಒಂದನ್ನೂ ಕೊಟ್ಟರು. ಅದರ ಪ್ರಕಾರ ಅವರು ಐದುನೂರು ಲೀಟರ್ ಟ್ಯಾಂಕ್ ನಿಂದ ಖಾಲಿಯಾಗುವಂತೆ ಎಲ್ಲರನ್ನೂ ಒಪ್ಪಿಸಬೇಕು. ಆದರೆ ರಹಸ್ಯ ಟಾಸ್ಕ್ ಬಗ್ಗೆ ಮಾತ್ರ ಎಲ್ಲೂ ಬಾಯಿಬಿಡಬಾರದು ಎಂದು ಕಟ್ಟಪ್ಪಣೆ ಮಾಡಿದರು.
ನಿಕಿತಾ ಜೊತೆ ಚಂದ್ರಿಕಾ ಮಾತನಾಡುತ್ತಾ, "ಇಲ್ಲಿಗೆ ನಾನು ಬಂದಿರುವುದು ನನ್ನ ಬಗೆಗಿನ ತಪ್ಪು ತಿಳವಳಿಕೆಯನ್ನು ದೂರ ಮಾಡಲು. ಮುಂದೆ ನನ್ನ ಮಗನಿಗೆ ತೊಂದರೆ ಆಗಬಾರದಲ್ಲವೇ. ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ನನಗೇನು ದುಡ್ಡು ಮಾಡಬೇಕು ಎಂಬ ಆಸೆ ಇಲ್ಲ" ಎಂದರು. ಆಗ ಸಮಯ ಮಧ್ಯರಾತ್ರಿ ಮೀರಿತ್ತು.