ಕಾವಿ ಜೊತೆ ಟೈ ಧರಿಸಿದ ಏಕೈಕ ಸ್ವಾಮಿ ಬ್ರಹ್ಮಾಂಡ ಶರ್ಮಾ
ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋ 72ನೇ ದಿನ ಪೂರೈಸಿದೆ. ಇಷ್ಟು ದಿನ ಒಂದೇ ಮನೆಯಲ್ಲಿ ಫೋನಿಲ್ಲದೆ, ಹೊರ ಜಗತ್ತಿನ ಸಂಪರ್ಕವಿಲ್ಲದೆ ಕಳೆದ ಸದಸ್ಯರು ಮಂಗಳವಾರ ಸ್ವಲ್ಪ ರಿಲ್ಯಾಕ್ಸ್ ಆದಂತೆ ಕಂಡುಬಂದರು.
ಈ ಬಾರಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಕೊಟ್ಟ ವಿಶೇಷ ಟಾಸ್ಕ್ ಕನ್ನಡ ವಸತಿ ಶಾಲೆ. ಈ ಶಾಲೆಯಲ್ಲಿ ಕನ್ನಡ ಪಾಠದ ಜೊತೆಗೆ ಇಂಗ್ಲಿಷ್ ಹಾಗೂ ಗಣಿತ ಪಾಠಗಳೂ ಉಂಟು. ಚಂದ್ರಿಕಾ ಅವರು ಇಂಗ್ಲಿಷ್ ಟೀಚರ್, ಅರುಣ್ ಸಾಗರ್ ನಾಟಕ ಮತ್ತು ಕಲೆ ಹಾಗೂ ಅನುಶ್ರೀ ಗಣಿತ. ಒಬ್ಬರು ಟೀಚರ್ ಆಗಿದ್ದರೆ ಉಳಿದವರು ವಿದ್ಯಾರ್ಥಿಗಳಂತೆ ನಟಿಸಬೇಕು.

ಎಲ್ಲರಿಗೂ ಸ್ಕೂಲ್ ಬ್ಯಾಗ್, ಟಿಫಿನ್ ಬಾಕ್ಸ್, ಟೈ, ಶಾಲಾ ಸಮವಸ್ತ್ರಗಳನ್ನು ಒದಗಿದಲಾಗಿತ್ತು. ಎಲ್ಲರೂ ಸಮವಸ್ತ್ರ ತೊಟ್ಟು ಶಾಲಾ ವಿದ್ಯಾರ್ಥಿಗಳಂತೆ ಬದಲಾದರೆ ಬ್ರಹ್ಮಾಂಡ ಶರ್ಮಾ ಅವರು ಮಾತ್ರ ಕಾವಿ ಮೇಲೆ ಟೈ ಮಾತ್ರ ಧರಿಸಿದರು.
ಬಹುಶಃ ಕಾವಿ ವಸ್ತ್ರದ ಜೊತೆಗೆ ಟೈ ಕಟ್ಟಿಕೊಂಡ ಏಕೈಕ ಸ್ವಾಮೀಜಿ ಎಂದರೆ ಬ್ರಹ್ಮಾಂಡ ಶರ್ಮಾ ಅವರೇ ಎನ್ನಿಸುತ್ತದೆ. ಮೊದಲ ದಿನವೇ ಶಾಲಾ ಬಾಲಕ ಅರುಣ್ ಕಪ್ಪುಹಲಗೆ ಮೇಲೆ ಸ್ಕೂಲ್ ಟೀಚರ್ ಅನುಶ್ರೀ ಬಗ್ಗೆ ಬರೆದದ್ದು ಕುಳ್ಳಿ ಮಿಸ್ ಮಳ್ಳಿ ಮಿಸ್ ಮಂಚಕ್ಕೆಷ್ಟು ಕಾಲು.


Click it and Unblock the Notifications











