Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ನಾಮಿನೇಟ್ ಆಗಿದ್ದ 'ಜೆಕೆ' ಕ್ಷಣದಲ್ಲೇ ಸೇಫ್ ಆಗ್ಬಿಟ್ರು.! ಹೇಗೆ?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಸೋಮವಾರ ನಡೆಯಿತು. ಈ ವಾರ ಒಟ್ಟು 9 ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಆದ್ರೆ, 9 ಜನರ ಪೈಕಿ ನಟ 'ಜೆಕೆ' ಸೇಫ್ ಆದರು.
ಈ ವಾರದ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆದ ಶ್ರುತಿ ಪ್ರಕಾಶ್ ಅವರ ಕೃಪಾಕಟಾಕ್ಷದಿಂದ 'ಜೆಕೆ' ನಾಮಿನೇಷನ್ ಪ್ರಕ್ರಿಯೆಯಿಂದ ಉಳಿದುಕೊಂಡರು.
ಅಷ್ಟಕ್ಕೂ, ನಾಮಿನೇಟ್ ಆಗಿದ್ದ ಜೆಕೆಯನ್ನ ಕ್ಯಾಪ್ಟನ್ ಉಳಿಸಿಕೊಂಡಿದ್ದೇಕೆ? ಜೆಕೆ ಅವರನ್ನ ನಾಮಿನೇಟ್ ಮಾಡಿದವರು ಯಾರು? ಎಂದು ತಿಳಿಯಲು ಮುಂದೆ ಓದಿ.....
ಈ ವಾರ 'ಜೆಕೆ'ನಾಮಿನೇಟ್ ಆಗಿದ್ದರು.!
ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಟ ಕಾರ್ತಿಕ್ ಜಯರಾಂ ನಾಮಿನೇಟ್ ಆಗಿದ್ದರು. ಚಂದನ್ ಶೆಟ್ಟಿ ಮತ್ತು ಸಮೀರಾಚಾರ್ಯ ವೋಟ್ ಮಾಡಿದ್ದರು.
ಈ ವಾರ ಎಲಿಮಿನೇಷನ್ ನಿಂದ ಬಚಾವ್ ಆದ ನಿವೇದಿತಾ ಗೌಡ.!
ಕ್ಯಾಪ್ಟನ್ ಕೃಪಾಕಟಾಕ್ಷ
2 ವೋಟ್ ಪಡೆದು ನಾಮಿನೇಟ್ ಆಗಿದ್ದ 'ಜೆಕೆ' ಅವರನ್ನ ಮನೆಯ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಉಳಿಸಿಕೊಂಡರು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಒಬ್ಬ ಸದಸ್ಯರನ್ನ ಉಳಿಸಿಕೊಳ್ಳುವ ಅಧಿಕಾರವನ್ನ ಕ್ಯಾಪ್ಟನ್ ಶ್ರುತಿ ಅವರಿಗೆ ನೀಡಲಾಗಿತ್ತು. ಹೀಗಾಗಿ, ಶ್ರುತಿ ಅವರು ಜೆಕೆ ಅವರನ್ನ ಉಳಿಸಿಕೊಂಡರು.
ಈ ವಾರ 'ಬಿಗ್ ಬಾಸ್' ಮನೆಯ ಅರ್ಧದಷ್ಟು ಸದಸ್ಯರು ನಾಮಿನೇಟ್.!
ನಾಮಿನೇಷನ್ ನಿಂದ ಬಚಾವ್
ಶ್ರುತಿ ಪ್ರಕಾಶ್ ಅವರ ಕೃಪಾಕಟಾಕ್ಷದಿಂದ ಈ ವಾರ ನಾಮಿನೇಷನ್ ಆಗಿದ್ದ ಒಟ್ಟು 9 ಜನರ ಪೈಕಿ 'ಜೆಕೆ' ಬಚಾವ್ ಆದರು. ಈ ಮೂಲಕ ಎರಡನೇ ವಾರ 'ಜೆಕೆ' ಸೇಫ್ ಆಗಿ ಆಟವಾಡಬಹುದಾಗಿದೆ.
'ದೊಡ್ಮನೆ'ಯೊಳಗಿರುವವರ ಕಣ್ಣಿಗೆ ಈ ಮೂವರು ಮಾತ್ರ ಘಟಾನುಘಟಿಗಳು.!
ಈ ವಾರ ನಾಮಿನೇಟ್ ಆಗಿರುವವರು ಯಾರು?
'ಜೆಕೆ' ಅವರನ್ನ ಹೊರತು ಪಡಿಸಿ, ದಿವಾಕರ್, ಮೇಘ, ಸಮೀರಾಚಾರ್ಯ, ಜಗನ್, ರಿಯಾಜ್, ಆಶಿತಾ, ಕೃಷಿ, ದಯಾಳ್ ಪದ್ಮನಾಭನ್ ಅವರು ಈ ವಾರ ಬಿಗ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.