Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ಚಂದ್ರಕಲಾ ಮೋಹನ್ ಅವರ ಹೊಸ ಧಾರಾವಾಹಿ: ಮತ್ತೆ ಪೌರಾಣಿಕ ಪಾತ್ರದಲ್ಲಿ ಅಜ್ಜಮ್ಮ!
ಕಿರುತೆರೆಯಲ್ಲಿ ಬಾಯಿ ಜೋರು ಮಾಡುತ್ತಲೇ ಅಭಿಮಾನಿಗಳನ್ನು ಪಡೆದಿರುವ ನಟಿ ಚಂದ್ರಕಲಾ ಮೋಹನ್ ಈಗ ಮತ್ತೊಂದು ಪೌರಾಣಿಕ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಯಾವುದು ಎಂದು ತಿಳಿಯೋಣ ಬನ್ನಿ.
ಚಂದ್ರಕಲಾ ಮೋಹನ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ. 'ಪುಟ್ಟಗೌರಿ' ಮದುವೆ ಸೀರಿಯಲ್ನ ಅಜ್ಜಮ್ಮ ಪಾತ್ರದ ಮೂಲಕ ಪ್ರಸಿದ್ಧಿ ಪಡೆದವರು.
Puttakkana
Makkalu:
ಪುಟ್ಟಕ್ಕನ
ಮಗಳು
ಸಹನಾ
ಟ್ರೆಡಿಷನಲ್
ಲುಕ್
ಹೇಗಿದೆ
ನೋಡಿ!
ಚಂದ್ರಕಲಾ ಮೋಹನ್ 'ಅಭಿಸಾರಿಕೆ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದೀಗ 'ಸೂಪರ್ ಕ್ವೀನ್ಸ್' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ.

ರಾಜ್ಯ ಪ್ರಶಸ್ತಿ ಪಡೆದಿರುವ ನಟಿ
ಬೆಳ್ಳಿತೆರೆಯಲ್ಲಿ 'ಋಣಾನುಬಂಧ' ಚಿತ್ರದ ಸೌಮ್ಯ ಸ್ವಭಾವದ ಪಾತ್ರಕ್ಕೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನಟಿ ಚಂದ್ರಕಲಾ ಮೋಹನ್, ಕಿರುತೆರೆಯಲ್ಲಿ ಕಿರುಚಾಡುವ ಗಯ್ಯಾಳಿ ಪಾತ್ರಗಳಲ್ಲೇ ಹೆಚ್ಚು ಪರಿಚಿತ. ಮಂಡ್ಯದ ಹೊಸಹಳ್ಳಿಯವರಾದ ಚಂದ್ರಕಲಾ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ಕುರುಕ್ಷೇತ್ರ, ದಕ್ಷಯಜ್ಞ, ಶ್ರೀ ಕೃಷ್ಣ ಸಂಧಾನ, ರ್ತನ ಮಾಂಗಲ್ಯ, ಬಸ್ ಕಂಡಕ್ಡರ್, ಸತಿ ಸಂಸಾರದ ಜ್ಯೋತಿ, ಗೌಡ್ರ ಗದ್ಲ, ಹೀಗೆ ಬಹಳಷ್ಟು ನಾಟಕಗಳಲ್ಲಿ ನಟಿಸಿದ್ದಾರೆ.

ವಿಲನ್ ಪಾತ್ರಗಳೇ ಹೆಚ್ಚು
ಮದುವೆಯಾದ ನಂತರ ದೂರದರ್ಶನದಲ್ಲಿ ಪ್ರಸಾರವಾದ 'ಮರೀಚಿಕೆ' ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶ ಮಾಡಿದ ಇವರು ನಂತರ ಜೀವನ, ಕುಸುಮಾಂಜಲಿ, ರಂಗೋಲಿ, ಗೋಧೂಳಿ, ಎಸ್ಸೆಸ್ಸೆಲ್ಸಿ ನನ್ಮಕ್ಳು, ಮೂಡಲ ಮನೆ ಮುಂತಾದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಜೊತೆಗೆ ರಾಜಧಾನಿ, ಭದ್ರ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿ ಎಲ್ಲಾ ಕಡೆ ಸಲ್ಲಬಲ್ಲವರು ಎನಿಸಿಕೊಂಡಿದ್ದಾರೆ. ಇನ್ನು ಕೃಷ್ಣ-ರುಕ್ಮಿಣಿ ಧಾರಾವಾಹಿಯ ಗೌಡ್ತಿಯಾಗಿ, ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ಅಜ್ಜಿ ಪಾತ್ರ ಮಾಡಿ ಮನೆ ಮನೆ ಮಾತಾದರು. ಬಹುತೇಕ ಧಾರಾವಾಹಿಯಲ್ಲಿ ವಿಲನ್ ಪಾತ್ರಗಳಿಗೇ ಬಣ್ಣ ಹಚ್ಚಿದ್ದಾರೆ.

ರಿಯಾಲಿಟಿ ಶೋನಲ್ಲಿ ಭಾಗಿ
ಚಿಕ್ಕವಯಸ್ಸಿಗೆ ಮದುವೆಯಾದ ಚಂದ್ರಕಲಾ ಅವರು ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ಮದುವೆ, ಮಕ್ಕಳೂ ಎಂದು ಬ್ಯುಸಿಯಾಗಿದ್ದ ಚಂದ್ರಕಲಾ ಅವರು ನಟನೆಯ ಹವ್ಯಾಸವನ್ನು ಕಷ್ಟದ ಸಮಯದಲ್ಲೂ ಬಿಡದೇ ಇದ್ದ ಚಂದ್ರಕಲಾಗೆ ಕೊನೆಗೆ ನಟನೆಯೇ ಕೈ ಹಿಡಿಯಿತು. ಮಗ ಅನಾರೋಗ್ಯ ತಪ್ಪಿದಾಗಲೂ ನಟನೆಯನ್ನು ಮುಂದುವರಿಸಿದ್ದರು. ಅವರ ಜೀವನದ ಕಷ್ಟದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಹೇಳಿಕೊಂಡಿದ್ದಾರೆ.

ಪೌರಾಣಿಕ ಧಾರಾವಾಹಿಯಲ್ಲಿ ಚಂದ್ರಕಲಾ
ಇನ್ನು ಕಳೆದ ಒಂದು ವರ್ಷದಿಂದ 'ದಾಸ ಪುರಂದರ' ಎಂಬ ಧಾರಾವಾಹಿಯಲ್ಲಿ ಅತ್ತೆಯ ಪಾತ್ರವನ್ನು ಚಂದ್ರಕಲಾ ಅದ್ಭುತವಾಗಿ ನಿಭಾಯಿಸಿದ್ದರು. ಈ ಧಾರಾವಾಹಿಯಿಂದ ಅರ್ಧಕ್ಕೆ ಹೊರ ನಡೆದು ನಂತರ ಜೀ ಕನ್ನಡದಲ್ಲಿ ಮೂಡಿ ಬಂದ 'ಸೂಪರ್ ಕ್ವೀನ್ಸ್' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಚಂದ್ರಕಲಾ ನಟನೆಯ ಪೌರಾಣಿಕ ಧಾರಾವಾಹೊ ಇದೇ ತಿಂಗಳ 23ರಿಂದ ರಾತಿ 8.30ಗೆ ಪ್ರಸಾರವಾಗಲಿದೆ. 'ಉಧೋ ಉಧೋ ರೇಣುಕಾದೇವಿ ಯಲ್ಲಮ್ಮ' ಧಾರಾವಾಹಿಯಲ್ಲಿ ಮಂಜಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಧಾರಾವಾಹಿಯಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಚಂದ್ರಕಲಾ ಅವರು ಎಲ್ಲರನ್ನು ಧನ್ಯವಾದ ಹೇಳಿದ್ದಾರೆ. ಈ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರಲಿದೆ.