ಬಿಗ್ ಬಾಸ್ ಶೋ ತಾರಕಕ್ಕೇರಿದ ಚಂದ್ರಿಕಾ ರಂಪಾಟ
ವಿಜಯ್ ರಾಘವೇಂದ್ರ ತಮ್ಮ ಮೈಮೇಲೆ ಕರಡಿ ಆವಾಹನೆಯಾದಂತೆ ರಿಂಗ್ ಮಾಸ್ಟರ್ ಚಂದ್ರಿಕಾ ಮೇಲೆ ಹರಿಹಾಯ್ದರು. ನಿಕಿತಾ ಅವರ ತಲೆಕೂದಲು ಎಳೆದದ್ದು ತಪ್ಪು ಎಂದು ಎಲ್ಲರೂ ಹೇಳಿದರು. ತಾವು ಅಷ್ಟೊಂದು ಒರಟಾಗಿ ನಡೆದುಕೊಳ್ಳಬಾರದಿತ್ತು ಎಂದು ಎಲ್ಲರೂ ಸಲಹೆ ಕೊಡಲು ಮುಂದಾದರು.
ಆದರೆ ಚಂದ್ರಿಕಾ ಅವರು ತಾನು ಮಾಡಿದ್ದೇ ಸರಿ ಎಂದು ವಾದಿಸಿದರು. ಮನೆಯಲ್ಲಿ ಏನಾಯಿತೆಂದರೆ ಎಲ್ಲ ಪ್ರಾಣಿಗಳು ರಿಂಗ್ ಮಾಸ್ಟರ್ ವಿರುದ್ಧ ತಿರುಗಿ ಬಿದ್ದವು. ಇದರಿಂದ ಇನ್ನಷ್ಟು ದೃತಿಗೆಟ್ಟ ಚಂದ್ರಿಕಾ ಕೂಗಾಡಲು ಶುರು ಮಾಡಿದರು.

ಇಷ್ಟೆಲ್ಲಾ ರಾದ್ಧಾಂತ ಆದ ಮೇಲೆ ಎಂಬತ್ತನೇ ದಿನ ರಾತ್ರಿ ನಿಕಿತಾ ಒಬ್ಬರೇ ಕೂತು ತಮ್ಮ ತಾಯಿಯನ್ನು ನೆನೆದು ಬಿಕ್ಕಿಬಿಕ್ಕಿ ಅತ್ತರು. ತನ್ನ ಜಡೆ ಎಳೆದರು ಎಂಬ ಕಾರಣಕ್ಕೆ ಆರಂಭವಾದ ಜಗಳ ಮುಗಿಯುವ ಸೂಚನೆಗಳೇ ಕಾಣಲಿಲ್ಲ. ಇನ್ನೊಂದು ಕಡೆ ಬ್ರಹ್ಮಾಂಡ ಶರ್ಮಾ ಅವರು ಚಂದ್ರಿಕಾ ಮೇಲೆ ಮುನಿಸಿಕೊಂಡು ಕೂತು ಬಿಟ್ಟರು.
ಶ್ವೇತಾ ಅವರ ವಿಚಾರ ಈಗ ಕೆದಕಬಾರದಿತ್ತು ಎಂಬುದು ಅವರ ಅಸಹನೆಗೆ ಕಾರಣವಾಗಿತ್ತು. ಟಾಸ್ಕ್ ನಲ್ಲಿ ನಾನು ಭಾಗವಹಿಸುವುದೇ ಇಲ್ಲ ಎಂದು ಮೌನವಾಗಿ ಕುಳಿತುಬಿಟ್ಟರು. ಚಂದ್ರಿಕಾ ಮಾಡಿದ್ದು ತಪ್ಪು ಎಂದು ವಾದಿಸಿದರು.
ಶರ್ಮಾ ಅವರು ಮತ್ತೆ ಹಳೆ ರಾಗ ಹಾಡಿದರು. ಕಾಲುಗಳೆಲ್ಲಾ ಊದಿಕೊಂಡಿವೆ. ಚೈನ್ ಹಾಕಿಸಿಕೊಂಡು ರಾತ್ರಿಯಲ್ಲಾ ನಿದ್ದೆ ಇಲ್ಲದೆ ಕಳೆಯುವುದು ನನಗೆ ಸಾಧ್ಯವಿಲ್ಲಪ್ಪ. ದಯವಿಟ್ಟು ನನ್ನನ್ನು ಇಲ್ಲಿಂದ ಕಳುಹಿಸಿ ಬಿಡಿ ಎಂದು ಚಿಕ್ಕಮಕ್ಕಳಂತೆ ಬಿಗ್ ಬಾಸ್ ಬಳಿ ವಿನಂತಿಸಿಕೊಂಡರು.


Click it and Unblock the Notifications











