Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಫೈನಲ್ ಮಿಸ್ ಮಾಡಿಕೊಂಡ ಚಂದ್ರಿಕಾ
ಈ ಮನೆಯಲ್ಲಿ ಕೆಚ್ಚಿದೆ, ಹುಚ್ಚಿದೆ ಮನಸ್ಸಲ್ಲೇ ಮಡಗಿರುವ ಮಚ್ಚಿದೆ, ಕಾಳ್ಗಿಚ್ಚಿದೆ. ಇದ್ದದ್ದನ್ನು ಇದ್ದಂಗೆ ತೋರಿಸುವ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಬಿಗ್ ಬಾಸ್ ಎಂದು ಕಿಚ್ಚ ಸುದೀಪ್ ಪ್ರತಿವಾರ ನಡೆಸಿಕೊಡುತ್ತಿರುವ 'ವಾರದ ಕಥೆ ಕಿಚ್ಚನ ಜೊತೆ'ಯ ಈ ವಾರದ ಹೈಲೈಟ್ಸ್ ಹೀಗಿವೆ.
ಈ ಬಾರಿ ನಾಲ್ಕು ಮಂದಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಅವರಲ್ಲಿ ಚಂದ್ರಿಕಾ, ನಿಕಿತಾ, ವಿಜಯ್ ರಾಘವೇಂದ್ರ ಹಾಗೂ ನರೇಂದ್ರ ಬಾಬು ಶರ್ಮಾ. ಮನೆಯಿಂದ ಯಾರು ಈ ಬಾರಿ ಹೊರಗೆ ಹೋಗುತ್ತಾರೆ, ಇನ್ಯಾರು ಫೈನಲ್ ತಲುಪುತ್ತಾರೆ ಎಂಬ ಬಗ್ಗೆ ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ.
ಕನ್ನಡದ ಹೊಚ್ಚ ಹೊಸ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿ ಇದೇ ಭಾನುವಾರಕ್ಕೆ (ಜೂನ್ 23) ಮೂರು ತಿಂಗಳು ತುಂಬುತ್ತಿದೆ. ಈ ತೊಂಬತ್ತು ದಿನಗಳಲ್ಲಿ ಸಾಕಷ್ಟು ವಾದ ವಿವಾದ, ಚರ್ಚೆಗೆ ಈ ಶೋ ಒಳಗಾಗಿದೆ. ಈ ವಾರ ಸುದೀಪ್ ನೇರವಾಗಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು.
ಚಂದ್ರಿಕಾ ಅವರ ಪುನರಾಗಮನದ ಬಗ್ಗೆ ಎಲ್ಲರ ಅಭಿಪ್ರಾಯ ಕೇಳಿದರು. ಬ್ರಹ್ಮಾಂಡ ಶರ್ಮಾ ಮಾತನಾಡುತ್ತಾ, ಅವರು ಹಾಕಿದ್ದ ಬ್ಲೂ ಕಲರ್ ಡ್ರೆಸ್ ಕಣ್ಣಿಗೆ ರಾಚುತ್ತಿತ್ತು. ಮೇಕಪ್ ಮುಖಕ್ಕೆ ಹೊಡೆದಂತಿತ್ತು. ಮೇಕಪ್ ಚೆನ್ನಾಗಿರಲಿಲ್ಲ. ಇಷ್ಟು ದಿನ ಪ್ರಶಾಂತವಾಗಿದ್ದ ಮನೆಯಲ್ಲಿ ಇನ್ನೇನು ಕಾದಿದೆಯೋ ಎಂಬ ಅಳುಕು ಒಂದು ಕಡೆ ಕಾಡುತ್ತಿತ್ತು ಎಂದರು ಶರ್ಮಾ.