Don't Miss!
- Automobiles Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದಯ ಸಿಂಗರ್ ವೇದಿಕೆಯಲ್ಲಿ ಚೇತನ್: ಭಾವುಕರಾದ LN ಶಾಸ್ತ್ರಿ ಪತ್ನಿ
'ಉದಯ ಸಿಂಗರ್ ಜೂನಿಯರ್ಸ್' ವಾರದಿಂದ ವಾರಕ್ಕೆ ಸಂಗೀತದ ಕಂಪು ನೀಡುತ್ತಿದೆ. ಅಂತೆಯೇ ಚಿತ್ರರಂಗದ ಸ್ಟಾರ್ ಕಲಾವಿದರು ಆಗಮಿಸಿ ಮಕ್ಕಳಿಗೆ ಹಾರೈಸುತ್ತಿದ್ದಾರೆ. ಈ ವಾರದ ಸಂಚಿಕೆಯಲ್ಲಿ 'ಆ ದಿನಗಳು' ಖ್ಯಾತಿಯ ನಟ ಚೇತನ್ ಆಗಮಿಸಿ ವೇದಿಕೆಯನ್ನ ಮತ್ತಷ್ಟು ರಂಗೇರಿಸಿದರು.
'ಅತಿರಥ' ಚಿತ್ರದ ಪ್ರಮೋಶನ್ ಗಾಗಿ ಬಂದಿದ್ದ ಚೇತನ್ ಮತ್ತು ನಿರ್ದೇಶಕ ಮಹೇಶಬಾಬು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಇದೇ ವೇಳೆ ಉದಯ ಸಿಂಗರ್ ಜೂನಿಯರ್ಸ್ ಕಾರ್ಯಕ್ರಮದಲ್ಲಿರುವ 5 ವರ್ಷದ ಮೈಸೂರಿನ ಪುಟ್ಟ ಪ್ರತಿಭೆ ಶಿಖಾ ಜೊತೆ ನಟ ಚೇತನ್ ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದಾರೆ.
ಮತ್ತೆ ಒಂದಾದ ರವಿಚಂದ್ರನ್-ಪ್ರೇಮಾ: ಜಾದು ಮಾಡಿದ 'ಕನಸುಗಾರ' ಜೋಡಿ
ಇಷ್ಟೆಲ್ಲಾ ಮನರಂಜನೆಯ ಮದ್ಧೆ ಸುಮಾ ಶಾಸ್ತ್ರಿಯವರು ಭಾವುಕರಾದ ಘಟನೆ ನಡೆದಿದೆ. ಸುಮಾ ಶಾಸ್ತ್ರಿ ದಿವಂಗತ ಎಲ್.ಎನ್ ಶಾಸ್ತ್ರಿಯವರ ಪತ್ನಿ. ಉದಯ ಸಿಂಗರ್ ಜೂನಿಯರ್ಸ್ ನಲ್ಲಿ ಮಕ್ಕಳಿಗೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಕ್ಷೀತ್ ಭಟ್ ಎಂಬ ಸ್ಪರ್ಧಿ 'ಲವ್ ಇನ್ ಮಂಡ್ಯಾ' ಚಿತ್ರದ ಹಾಡನ್ನು ಹಾಡಿದ. ಆ ಹಾಡು ಮೂಲತವಾಗಿ ದಿವಂಗತ ಎಲ್ ಎನ್ ಶಾಸ್ತ್ರಿಯವರು ಹಾಡಿದ್ದು.
ಕ್ಯಾನ್ಸರ್ ವಿರುದ್ಧ ಹೋರಾಡಿ ಸೋತ ಗಾಯಕ ಎಲ್ ಎನ್ ಶಾಸ್ತ್ರಿ
ಇದೇ ಸಂದರ್ಭದಲ್ಲಿ ಸುಮಾ ಶಾಸ್ತ್ರಿಯವರು ವೇದಿಕೆಗೆ ಆಗಮಿಸಿ ತಮ್ಮ ಪತಿಯ ಬಗೆಗೆ ಮಾತನಾಡುತ್ತಾ ಈ ಹಾಡಿನ ಕೊನೆಯ ಸಾಲಾದ "ನಿಂತು ಹೋಯಿತೆ ಜೀವಗಾನ" ಕೇಳಿ ಭಾವುಕರಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಶಾಸ್ತ್ರಿಯವರಿಗೆ ತಾವು ಈ ಹಾಡನ್ನು ಹಾಡ ಬೇಡಿ ಎಂದು ಎಷ್ಟೇ ಹೇಳಿದರು "ಇಲ್ಲಾ ಇದು ನಂದೆ ಹಾಡು" ಎಂದು ಹೇಳಿದ್ದರು. ಹಾಗೆ ಅದೇ ಅವರ ಕೊನೆಯ ಹಾಡು ಆಗಿ ಹೋಯಿತು ಎಂದು ಸುಮಾ ಶಾಸ್ತ್ರಿಯವರು ಭಾವುಕರಾಗಿ ಕಣ್ಣಿರನ್ನು ಹಾಕಿದರು.
ಮರೆಯಾದ ಗಾನ ಚೈತನ್ಯ ಎಲ್.ಎನ್.ಶಾಸ್ತ್ರಿ
ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.