Don't Miss!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- News ಅರವಿಂದ್ ಕೇಜ್ರಿವಾಲ್ ಹತ್ಯೆ ಮಾಡಲು ಸಂಚು ನಡೆಯುತ್ತಿದೆ: ಎಎಪಿ ಗಂಭೀರ ಆರೋಪ
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಭಾವನೆ ವಿಚಾರಕ್ಕೆ ಯಶ್ ಸಿನಿಮಾ ನಿರಾಕರಿಸಿದ್ದ ಚಿಕ್ಕಣ್ಣ
Recommended Video
ನಾವು ನಮ್ಮ ಪಾಡಿಗೆ, ಕೆಲಸ ಮಾಡುತ್ತಿದ್ದರೆ ಒಂದಲ್ಲ ಒಂದು ದಿನ ಅವಕಾಶಗಳು ತಾವೇ ಹುಡುಕಿಕೊಂಡು ಬರುತ್ತದೆ. ಈ ವಿಷಯ ನಟ ಚಿಕ್ಕಣ್ಣ ಅವರ ಬದುಕಿನಲ್ಲಿಯೂ ನಿಜ ಆಗಿದೆ.
ಹಾಸ್ಯ ನಟ ಚಿಕ್ಕಣ್ಣನಿಗೆ ಮೊದಲ ಅವಕಾಶ ಸಿಕ್ಕ ಕಥೆ ಬಲು ರೋಚಕವಾಗಿದೆ. ನಟ ಯಶ್ ಒಂದು ಕಾರ್ಯಕ್ರಮದಲ್ಲಿ ಅವರ ನಟನೆ ನೋಡಿ ಇಷ್ಟ ಪಟ್ಟು, 'ಕಿರಾತಕ' ಸಿನಿಮಾಗೆ ಆಫರ್ ನೀಡುತ್ತಾರೆ.
ಚಿಕ್ಕಣ್ಣನನ್ನು ಹೀರೋ ಮಾಡ್ತಿದ್ದಾರೆ 'ಮಾಸ್ಟರ್ ಪೀಸ್' ಡೈರೆಕ್ಟರ್
ಆದರೆ, ಇನ್ನು ಚಿತ್ರರಂಗಕ್ಕೆ ಕಾಲಿಡದ ಚಿಕ್ಕಣ್ಣಗೆ ಸಂಭಾವನೆ ಬಗ್ಗೆ ಏನು ಗೊತ್ತಿರಲಿಲ್ಲ. ಎಷ್ಟು ಸಂಭಾವನೆ ಕೇಳಬೇಕು ಎಂದು ತಿಳಿಯದೆ, ಹೆಚ್ಚು ಹಣ ಕೇಳಿ ಕೊನೆಗೆ ಆ ಸಿನಿಮಾವನ್ನೇ ನಿರಾಕರಿಸಿದ್ದರಂತೆ.
ಹೀಗೆ ಮೊದಲ ಸಿನಿಮಾದ ಅವಕಾಶದ ಬಗ್ಗೆ ತಮ್ಮದೆ ಕಾಮಿಡಿ ಸ್ಟೈಲ್ ನಲ್ಲಿ ಚಿಕ್ಕಣ್ಣ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಮುಂದೆ ಓದಿ...
'ಕಿರಾತಕ' ಚಿತ್ರಕ್ಕೆ ಆಫರ್ ನೀಡಿದ ಯಶ್
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹಾಗೂ ಕುರಿ ಪ್ರತಾಪ್ ಒಂದು ಸಣ್ಣ ಸ್ಕಿಟ್ ಮಾಡಿದ್ದರು. ಆ ಕಾರ್ಯಕ್ರಮದಲ್ಲಿಯೇ ಮೊದಲ ಬಾರಿಗೆ ಚಿಕ್ಕಣ್ಣರನ್ನು ಯಶ್ ನೋಡಿದ್ದು. ಚಿಕ್ಕಣ್ಣ ತುಂಬ ನ್ಯಾಚುಲರ್ ಆಗಿ ನಟನೆ ಮಾಡುತ್ತಾರೆ ಎಂದು ಇಷ್ಟ ಪಟ್ಟು ಅವರಿಗೆ 'ಕಿರಾತಕ' ಸಿನಿಮಾಗೆ ಆಫರ್ ನೀಡಿದರು.
ಸಂಭಾವನೆ ಎಷ್ಟು ಕೇಳಬೇಕು ಗೊತ್ತಿಲ್ಲ
ಆ ಸಮಯಕ್ಕೆ ಚಿಕ್ಕಣ್ಣಗೆ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಕೇಳಬೇಕು ಎನ್ನುವ ಜ್ಞಾನ ಇರಲಿಲ್ಲ. ನಿರ್ದೇಶಕರ ಬಳಿ ದೊಡ್ಡ ಮೊತ್ತ ಕೇಳಿದ ಚಿಕ್ಕಣ್ಣ ಅದನ್ನು ನಿರಾಕರಿಸಿದ್ದಕ್ಕೆ ಸಿನಿಮಾ ಮಾಡಲ್ಲ ಎಂದಿದ್ದರಂತೆ. ಹೀಗೆ ತಮ್ಮ ಮೊದಲ ಎಡವಟ್ಟಿನ ಬಗ್ಗೆ ಫನ್ನಿಯಾಗಿ ಹೇಳಿಕೊಂಡರು ಚಿಕ್ಕಣ್ಣ.
'ವೀಕೆಂಡ್ ವಿತ್ ರಮೇಶ್'ನಲ್ಲಿ ಹಾಸ್ಯ ನಟ ಚಿಕ್ಕಣ್ಣ
ನಾನೇ ದುಡ್ಡು ನೀಡುತ್ತೇನೆ ಎಂದ ಯಶ್
ಸಂಭಾವನೆ ಬಗ್ಗೆ ಮಾತನಾಡಿದ ಚಿಕ್ಕಣ್ಣಗೆ ಯಶ್ ಸಮಾಧಾನ ಮಾಡಿದರು. ನೀನು ಸಿನಿಮಾದಲ್ಲಿ ಮಾಡು, ಉಳಿದ ಸಂಭಾವನೆ ನಾನೇ ನೀಡುತ್ತೇನೆ ಎಂದರಂತೆ. ಒಬ್ಬ ನಟನೇ ಈ ರೀತಿ ಹೇಳುವುದು ಕೇಳಿ ಚಿಕ್ಕಣ್ಣ ಸಿನಿಮಾದಲ್ಲಿ ನಟಿಸಲು ಓಕೆ ಎಂದರಂತೆ. ಇದನ್ನು ಈಗ ನೆನೆಪು ಮಾಡಿಕೊಂಡರೆ ನಗು ಬರುತ್ತದೆ ಎಂದರು ಚಿಕ್ಕಣ್ಣ.
ಕೆಲವರು ಚಿಕ್ಕಣ್ಣ ಐರನ್ ಲೆಗ್ ಎಂದಿದ್ದರು
'ಕಿರಾತಕ' ಸಿನಿಮಾಗೆ ಚಿಕ್ಕಣ್ಣರನ್ನು ಆಯ್ಕೆ ಮಾಡಿದಾಗ, ಕೆಲವರು ಅವನನ್ನು ಹಾಕಿಕೊಳ್ಳಬೇಡಿ, ಅವನು ಐರನ್ ಲೆಗ್ ಎಂದಿದ್ದರಂತೆ. ಆದರೆ, ಯಶ್ ಯಾವುದೇ ಮಾತಿಗೂ ತಲೆ ಕೆಡಿಸಿಕೊಳ್ಳದೆ ಚಿಕ್ಕಣ್ಣರನ್ನೇ ಸಿನಿಮಾದಲ್ಲಿ ಮುಂದುವರೆಸಿದರಂತೆ. ಸಿನಿಮಾ ನೂರು ದಿನ ಓಡಿ, ಹಿಟ್ ಆದ ಮೇಲೆ ಅವರಿಗೆ ಫೋನ್ ಮಾಡಿ ನಾನು ಐರಾನ್ ಲೆಗ್ ಅಲ್ಲ ಎಂದು ಹೇಳು ಎಂದಿದ್ದರಂತೆ.
ಕಾರ್ಯಕ್ರಮದಲ್ಲಿ ಫೋನ್ ಮಾಡಿದ ಯಶ್
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಚಿಕ್ಕಣ್ಣಗೆ ಯಸ್ ಕರೆ ಮಾಡಿದ್ದು, ಅವರಿಗೆ ಅಚ್ಚರಿ ಆಗುವಂತೆ ಮಾಡಿತು. ಚಿಕ್ಕಣ್ಣ ಒಳ್ಳೆಯ ಹುಡುಗ. ನನಗೆ ಬಹಳ ಇಷ್ಟ. ಎಲ್ಲ ಸಂಬಂಧಗಳಿಗೆ ಬೆಲೆ ನೀಡುತ್ತಾನೆ. ಚಿಕ್ಕ ಇದ್ದರೆ ಆ ಜಾಗದ ಕಳೆ ಬದಲಾಗುತ್ತದೆ.'' ಎಂದು ರಾಕಿ ಬಾಯ್ ಹೊಗಳಿದರು. ಯಶ್ ಮಾಡಿದ ಸಹಾಯವನ್ನು ಚಿಕ್ಕಣ್ಣ ನೆನೆದರು.