Don't Miss!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- News Realme: ಅಗ್ಗದ 5G ಸ್ಮಾರ್ಟ್ಫೋನ್ ಬಿಡುಗಡೆ ರೆಡಿ; ಇದರ ಬೆಲೆ ಎಷ್ಟು ಗೊತ್ತಾ?
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಧಾರಾವಾಹಿ ಚಿತ್ರೀಕರಣ: ಸೆಟ್ ಮೇಲೆ ಪೊಲೀಸರ ದಾಳಿ
ರಾಜ್ಯದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಹೇರಿದೆ.
ಆದರೆ ಹಲವರು ರಾಜ್ಯ ಸರ್ಕಾರ ವಿಧಿಸಿರುವ ಈ ನಿಯಮಗಳನ್ನು ಗಾಳಿಗೆ ತೂರಿ ವ್ಯವಹರಿಸುತ್ತಿದ್ದಾರೆ. ಇಂಥಹಾ ಜವಾಬ್ದಾರಿ ಹೀನರಲ್ಲಿ ಮನೋರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದವರು ಇದ್ದಾರೆ.
ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಇದ್ದರೂ ಸಹ ತಂಡವೊಂದು ದೊಡ್ಡ ಸಂಖ್ಯೆಯ ಜನರನ್ನು ಗುಡ್ಡೆ ಹಾಕಿಕೊಂಡು ಧಾರಾವಾಹಿ ಚಿತ್ರೀಕರಣ ಮಾಡುತ್ತಿತ್ತು. ಚಿತ್ರೀರಣ ಸೆಟ್ಗೆ ದಾಳಿ ಮಾಡಿದ ಪೊಲೀಸರು ಚಿತ್ರತಂಡದ ಜ್ವರ ಬಿಡಿಸಿದ್ದಾರೆ. ಜೊತೆಗೆ ದಂಡ ಸಹ ಹಾಕಿದ್ದಾರೆ.
''ನಿಮಗೆ ಚಿತ್ರೀಕರಣ ನಡೆಸಲು ಅನುಮತಿ ನೀಡಿದವರು ಯಾರು? ನಾವೇನಾದರೂ ಅನುಮತಿ ನೀಡಿದ್ದೀವಾ? ಯಾರೂ ಮಾಸ್ಕ್ ಹಾಕಿಲ್ಲ. ಕರ್ಫ್ಯೂ ಅಂದರೆ ನಿಮಗೆ ಹುಡುಗಾಟವಾ? ಜವಾಬ್ದಾರಿ ಇದೆಯಾ ನಿಮಗೆಲ್ಲ?'' ಎಂದು ಏಕಾ-ಏಕಿ ಚಿತ್ರತಂಡದ ವಿರುದ್ಧ ವಾಗ್ದಾಳಿ ಆರಂಭಿಸಿದ ಪಿಎಸ್ಐ ಗಾಯತ್ರಿ, ಕೂಡಲೇ ಪ್ಯಾಕಪ್ ಮಾಡಿ ಹೊರಡಲಿಲ್ಲವೆಂದರೆ ಲಾಠಿ ರುಚಿ ತೋರಿಸಬೇಕಾಗುತ್ತದೆ ಎಂದರು. ಪಿಎಸ್ಐ ಗಾಯತ್ರಿ ಆವಾಜ್ಗೆ ಬೆದರಿದ ಚಿತ್ರತಂಡ ಮೌನವಾಗಿ ಜಾಗ ಖಾಲಿ ಮಾಡಿತು.
ಈ ವೇಳೆ ಕೆಲವು ಸ್ಥಳೀಯರು ಸಹ ಸ್ಥಳದಲ್ಲಿ ಹಾಜರಿದ್ದು, ಚಿತ್ರತಂಡದ ಯಾರೂ ಸಹ ಮಾಸ್ಕ್ ಹಾಕದಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ಚಿತ್ರತಂಡಕ್ಕೆ ಸೂಕ್ತವಾಗಿ ಬುದ್ಧಿ ಕಲಿಸಬೇಕು ಚಿತ್ರೀಕರಣ ಸಾಧನಗಳನ್ನು ಸೀಜ್ ಮಾಡಬೇಕೆಂದು ಪೊಲೀಸರ ಬಳಿ ಮನವಿ ಮಾಡಿದರು.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಿಎಸ್ಐ ಗಾಯತ್ರಿ, ''ವೀಕೆಂಡ್ ಕರ್ಫ್ಯೂ ನಡುವೆಯೂ ಧಾರಾವಾಹಿ ಚಿತ್ರಿಕರಣ ನಡೆಸಿರುವುದರಿಂದ ಧಾರಾವಾಹಿ ತಂಡ ಹಾಗೂ ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಚಿತ್ರೀಕರಣ ನಡೆಸದಂತೆ ಸೂಚಿಸಲಾಗಿದೆ'' ಎಂದು ತಿಳಿಸಿದ್ದಾರೆ.