Antarapata: ಬ್ಲಾಕ್ ಮೇಲ್ ಮಾಡಿ ಆರಾಧನಾಳನ್ನು ಮದುವೆಗೆ ಒಪ್ಪಿಸಿಯೇ ಬಿಟ್ನಾ ಮಹೇಶ್..!?
ಆರಾಧನಾ ತನ್ನ ಅಮ್ಮ ತನ್ನ ಬಗ್ಗೆ ಚಿಂತೆ ಮಾಡುತ್ತಿದ್ದಾಳೆ ಎಂದು ತಿಳಿದಿದೆ. ಇದರಿಂದಾಗಿ ಅಮ್ಮನ ಬಳಿ ಬಂದ ಆರಾಧನಾ ನೀನು ನನ್ನ ಬಗ್ಗೆ ಚಿಂತೆಯನ್ನು ಮಾಡಬೇಡ. ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಸಮಾಧಾನ ಮಾಡುತ್ತಿದ್ದಾಳೆ. ಆದರೂ ಸಹ ರೇವತಿಗೆ ಸಮಾಧಾನವಾಗುತ್ತಿಲ್ಲ, ಯಾಕೆಂದರೆ ಗಿಳಿಯನ್ನ ಸಾಕಿ ಗಿಡುಗನ ಕೈಗೆ ಕೊಟ್ಟ ರೀತಿ ಆಗುತ್ತದೆ ಎಂಬುದೇ ಆಕೆಯ ಯೋಚನೆಯಾಗಿದೆ. ಪುರುಷೋತ್ತಮ ನೋಡಿದರೆ ಕುಡಿತಕ್ಕೆ ದಾಸನಾಗಿರುವುದು ರೇವತಿಗೆ ಚಿಂತೆ ಹೆಚ್ಚಿಸಿದೆ.
ಈಗ ಆರಾಧನಾಗೆ ತಾನು ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ಯಾವ ರೀತಿ ಮದುವೆಯನ್ನು ಮುರಿದುಕೊಳ್ಳಬೇಕು ಎಂದು ತೋಚುತ್ತಿಲ್ಲ. ಚಿಂತೆಯ ಕಡಲಲ್ಲೇ ಮುಳುಗಿ ಹೋಗಿದ್ದಾಳೆ. ಈ ಕಡೆ ರೇವತಿಗೆ ತನ್ನ ಮಗಳ ಭವಿಷ್ಯ ಚಿಂತೆಯಾಗಿದ್ದು ಅವಳು ಸಹ ಅನಾರೋಗ್ಯಕ್ಕೆ ಈಡಾಗಿದ್ದಾಳೆ. ಅಕ್ಕ ಪಕ್ಕದ ಮನೆಯವರು ಬಂದು ರೇವತಿಗೆ ಬುದ್ಧಿ ಹೇಳಿದ್ದಾರೆ. ನೀನು ಯಾಕೆ ಚಿಂತೆಯನ್ನ ಮಾಡುತ್ತೀಯಾ ಏನು ಆಗುವುದಿಲ್ಲ ಎಂದು ಸಮಾಧಾನವನ್ನು ಮಾಡಿದ್ದಾರೆ.

ತಾಯಿ ಮಗಳು ಇಬ್ಬರೂ ಸಹ ಕಣ್ಣೀರನ್ನು ಹಾಕುತ್ತಿದ್ದಾರೆ. ನನ್ನ ಜೀವನದಲ್ಲಿ ಏನು ನಡೆಯಬಾರದು ಎಂದುಕೊಂಡಿದ್ದನೋ ಅದೇ ನಡೆಯುತ್ತಿದೆ ಎಂದು ಆರಾಧನಾಗೆ ತುಂಬಾ ಅಳು ಬಂದಿದೆ. ಈಗ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಅಮ್ಮ, ಮಗಳು ಇದ್ದಾರೆ. ಏನಾದರೂ ಮಾಡಲು ಹೋದರೆ ಇವರಿಬ್ಬರು ಮಹೇಶನ ಕೋಪಕ್ಕೆ ತುತ್ತಾಗಿ ಮನೆಯಲ್ಲಿ ಅಲ್ಲೋಲ ಕಲ್ಲೋಲವೇ ನಡೆಯಲಿದೆ.
ಮದುವೆ ಬೇಡ ಎಂದ ಆರಾಧನಾ
ಮನೆಗೆ ಬಂದಿರುವ ಮಹೇಶ್ ಅಮ್ಮ ಮಗಳು ಮಾತುಕತೆಯನ್ನು ನಡೆಸುತ್ತಿದ್ದೀರಾ ಎಂದು ಕೇಳಿದ್ದಾನೆ. ಈ ವೇಳೆ ಪಕ್ಕದಲ್ಲಿ ಕುಳಿತುಕೊಂಡ ಆರಾಧನಾ, ಮಹೇಶ್ ಬಳಿ ನನಗೆ ಈ ಮದುವೆ ಬೇಡ ಎಂದು ಹೇಳಿದ್ದಾಳೆ. ನಂತರ ಮಹೇಶ್, ಆರಾಧನಾ ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ನೀನು ಮದುವೆಯಾದರೆ ಲಕ್ಷಾಂತರ ರೂಪಾಯಿ ನಿನ್ನದಾಗಲಿದೆ. ಚಿನ್ನದಂತಹ ಹುಡುಗನನ್ನ ನಿನಗೆ ಹುಡುಕಿದ್ದೇನೆ ಮಗಳೇ ಎಂದೆಲ್ಲ ನಾಟಕದ ಮಾತನ್ನು ಆಡುತ್ತಿದ್ದಾನೆ. ಆರಾಧನಾ ಮಾತ್ರ ಮಹೇಶ್ ಮುಂದೆ ಗುಬ್ಬಿಮರಿ ಕುಳಿತ ಹಾಗೆ ಕುಳಿತಿದ್ದಾಳೆ.

ನೀನು ನನ್ನ ಮಾತನ್ನ ಕೇಳಲೇಬೇಕು ಎಂದು ಹೇಳಿದ್ದಾನೆ. ನೀನು ತಾಂಬೂಲ ಬದಲಾಯಿಸಿಕೊಳ್ಳುವುದಕ್ಕೂ ಮೊದಲು ನನಗೆ ಈ ಮದುವೆ ಬೇಡ ಎನ್ನಬೇಕಾಗಿತ್ತು. ಆಗ ನಾನು ನನ್ನ ಅಕ್ಕನ ಬಳಿ ಮಾತುಕತೆ ನಡೆಸಿ ತಾಂಬೂಲವನ್ನೇ ಬದಲಾಯಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾನೆ. ನಿನ್ನ ಅಮ್ಮನು ಸಹ ತಾಂಬೂಲ ಬದಲಾಯಿಸಿಕೊಳ್ಳುವ ವೇಳೆ ಸುಮ್ಮನೆ ನಿಂತಿದ್ದಳು. ಅವಳಾದರೂ ಹೇಳಬೇಕಾಗಿತ್ತು, ಈ ಮದುವೆ ಬೇಡ ಎಂದು ಎಂದಿದ್ದಾನೆ. ಅವಳು ಹೇಗೆ ಹೇಳುತ್ತಾಳೆ, ಹೇಳು ಸುಸ್ತಾಗಿದ್ದಳು ಎಂದು ಮಾತನ್ನ ಬದಲಾಯಿಸಿದ್ದಾನೆ.
ಹಗ್ಗ ಹಿಡಿದುಕೊಂಡು ಬ್ಲಾಕ್ ಮೇಲ್
ಇನ್ನು ಮಹೇಶ್, ಆರಾಧನಾ ಯಾವಾಗ ಮದುವೆಗೆ ಒಪ್ಪಿಕೊಳ್ಳಲಿಲ್ಲವೋ ಆಗ ಹಗ್ಗವನ್ನು ತಂದು ಕೊನೆಗೆ ನಮಗೆ ಇರುವುದು ಇದೊಂದೇ ದಾರಿ. ನಿನ್ನ ಅಮ್ಮ ಹಾಗೂ ನಾನು ಇಬ್ಬರು ಸಾಯುತ್ತೇವೆ ಆಗ ನೀನು ಚೆನ್ನಾಗಿ ಇರು ಎಂದೆಲ್ಲ ಹೇಳಿದ್ದಾನೆ. ಈ ಮಾತನ್ನ ಕೇಳಿದ ಆರಾಧನಾಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗಿದೆ. ಏನನ್ನು ಮಾತನಾಡದೆ ಮೌನಕ್ಕೆ ಶರಣಾಗಿದ್ದಾಳೆ. ಆರಾಧನಾ ಮೌನವನ್ನು ಕಂಡ ಮಹೇಶ್ ಅವಳು ಮದುವೆಗೆ ಒಪ್ಪಿಗೆಯನ್ನು ಸೂಚಿಸಿದ್ದಾಳೆ ಎಂದು ಮನೆಯಿಂದ ಹೊರಗೆ ಹೋಗಿದ್ದಾನೆ.
ಅಮ್ಮನಿಗಾಗಿ ದುಡಿಬೇಕು ಎಂದ ಹೀರೋ
ಸುಶಾಂತ್ ತನ್ನ ಅಮ್ಮನನ್ನು ನೋಡಿಕೊಂಡು ಬಂದ ಮೇಲೆ ಮತ್ತಷ್ಟು ಹಣವನ್ನ ಸಂಪಾದನೆ ಮಾಡಿ, ನನ್ನ ತಂದೆ ಹಾಕಿರುವ ಚಾಲೆಂಜ್ನಲ್ಲಿ ಗೆಲ್ಲಬೇಕು ಎಂದು ಹಠ ತೊಟ್ಟಿದ್ದಾನೆ. ಇದಕ್ಕಾಗಿ ಮತ್ತೆ ಬೇರೆ ಏನಾದರೂ ಕೆಲಸವನ್ನು ಮಾಡಬೇಕು ಎಂದುಕೊಂಡಿದ್ದಾನೆ. ಅಮ್ಮನ ಮುಖವನ್ನು ನೋಡುತ್ತಿದ್ದರೆ ನನಗೆ ಅಯ್ಯೋ ಎನಿಸುತ್ತಿದೆ. ನನ್ನ ತಂದೆ ಹಾಕಿರುವ ಚಾಲೆಂಜ್ನಲ್ಲಿ ನಾನು ಗೆದ್ದು ತೋರಿಸಬೇಕು ಎಂದು ಸುಶಾಂತ್ ಅಂದುಕೊಂಡಿದ್ದಾನೆ.


Click it and Unblock the Notifications











