Antarapata: ಆರಾಧನಾ ಬಗ್ಗೆ ಚಿಂತೆ ಮಾಡುತ್ತಿರುವ ರೇವತಿ: ಆರಾಧನಾಗೆ ಸಿಗಲೇಯಿಲ್ಲ ಕೆಲಸ

By ಶೃತಿ ಹರೀಶ್ ಗೌಡ

ಮಗಳು ಆರಾಧನಾ ಬಗ್ಗೆ ರೇವತಿ ಚಿಂತೆ ಮಾಡುತ್ತಿದ್ದಾಳೆ, ಅವಳು ಮನೆಯಲ್ಲಿ ಇರಲಿಲ್ಲ ಎಂದರೆ ನನಗೆ ನರಕದಲ್ಲಿ ಇದ್ದಂತೆ ಭಾಸವಾಗುತ್ತದೆ ಎಂದು ವಠಾರದಲ್ಲಿರುವ ಪಕ್ಕದ ಮನೆಯವರ ಜೊತೆ ಹೇಳಿಕೊಳ್ಳುತ್ತಿದ್ದಾಳೆ. ಆರಾಧನಾ ಮನೆಯಲ್ಲಿ ಇದ್ದರೆ ಅವಳು ಮತ್ತು ನಿನಗೆ ಇಬ್ಬರಿಗೂ ಸಹ ನರಕದರ್ಶನ ಖಂಡಿತ ಎಂದು ಅವರು ಹೇಳಿದ್ದಾರೆ. ಮಗಳಿಗೆ ಕೆಲಸ ಸಿಗದೇ ಇದ್ದರೆ ಮಹೇಶ್ ಸುಮ್ಮನೆ ಬಿಡಲ್ಲ ಎಂದು ಆರಾಧನಾ ಬಗ್ಗೆ ರೇವತಿ ಚಿಂತೆ ಮಾಡುತ್ತಿದ್ದಾಳೆ.

ಈ ಕಡೆ ಮನೆಗೆ ಬಂದಿರುವ ಮಹೇಶ್ ಫ್ರೆಂಡ್, ಆತನ ತಲೆಗೆ ಏನೇನೋ ತುಂಬುತ್ತಿದ್ದಾನೆ. ನಿನಗೆ ಹಣ ಬೇಕು ಎಂದರೆ ಆರಾಧನಾಗೆ ಸಂಬಳ ಬರುತ್ತದೆ ತಗೋ ಎಂದೆಲ್ಲ ಹೇಳುತ್ತಿದ್ದಾನೆ. ಇವರಿಬ್ಬರ ಮಾತನ್ನು ಕೇಳಿಸಿಕೊಳ್ಳುತ್ತಿರುವ ರೇವತಿಗೆ ಕೋಪ ಬಂದಿದೆ. ಆದರೂ ಸಹ ಏನನ್ನು ಮಾತನಾಡಲಾಗದ ಪರಿಸ್ಥಿತಿಯಲ್ಲಿ ಆಕೆ ಇದ್ದಾಳೆ.

Colors Kannada Antarapata serial written update on 19th episode

ಅಜ್ಜಿ ಜೊತೆ ದೇವಸ್ಥಾನಕ್ಕೆ ಬಂದಿರುವ ಸುಶಾಂತ್ ದೇವರಿಗೆ ನಿಂಬೆಹಣ್ಣಿನ ಆರತಿಯನ್ನು ಏಕೆ ಮಾಡುತ್ತಾರೆ ಎಂದು ತಿಳಿದುಕೊಂಡಿದ್ದಾನೆ. ನೂರು ರೂಪಾಯಿ ಸಾಲ ತೆಗೆದುಕೊಂಡು ತಾನು ಸಹ ನಿಂಬೆಹಣ್ಣಿನ ಆರತಿಯನ್ನು ಮಾಡಿ ಬೆಳಗುತ್ತೇನೆ ಎಂದು ಅಜ್ಜಿ ಬಳಿ ನೂರು ರೂಪಾಯಿ ತೆಗೆದುಕೊಂಡಿದ್ದಾನೆ. ಅಂಗಡಿಗೆ ಬಂದವನೇ ನಿಂಬೆಹಣ್ಣು ಆರತಿಗೆ ಬೇಕಾದಂತಹ ಸಾಮಾಗ್ರಿಗಳನ್ನ ತೆಗೆದುಕೊಂಡಿದ್ದಾನೆ.

ಕೆಲಸ ಖಾಲಿ ಇಲ್ಲ ಎಂದ ಚಾಂದಿನಿ

ಚಾಂದಿನಿ ಆರಾಧನಾ ಬಳಿ ಬಂದಿದ್ದಾಳೆ, ಕಲ್ಯಾಣ ಮಸ್ತುವಿನಲ್ಲಿ ಯಾವುದಾದರೂ ಕಾಂಟ್ರಾಕ್ಟ್ ಇದ್ದರೆ ಕೊಡಿ ಎಂದು ಕೇಳುತ್ತಿದ್ದಾಳೆ. ಆದರೆ ಚಾಂದಿನಿ ಇಲ್ಲಿ ಯಾವುದೇ ಕಾಂಟ್ರಾಕ್ಟ್ ಇಲ್ಲ ಎಂದು ಹೇಳಿದ್ದಾಳೆ.‌ ಆದರೂ ಸಹ ಆಟ ಬಿಡಿದ ಆರಾಧನಾ ಚಾಂದಿನಿ ಬಳಿ ದಯವಿಟ್ಟು ಇಲ್ಲ ಎನ್ನಬೇಡಿ ಇದು ನನ್ನ ಜೀವನದ ಗುರಿ ಅಷ್ಟೇ ಅಲ್ಲದೆ ನನ್ನ ಅಪ್ಪನ ಗುರಿಯು ಕೂಡ ಹೌದು. ನೀವು ಈಗ ಕೈ ಬಿಟ್ಟು ಬಿಟ್ಟರೆ ಹೇಗೆ ಎಂದು ಪರಿಪರಿಯಾಗಿ ಚಾಂದಿನಿಗೆ ಕನ್ವಿನ್ಸ್ ಮಾಡಿದ್ದಾಳೆ.

ಚಾಂದಿನಿ ಆರಾಧನಾ ಮಾತಿಗೆ ಕನ್ವಿನ್ಸ್ ಆಗಿಲ್ಲ. ಜೊತೆಗೆ ಇಲ್ಲಿ ಯಾವುದೇ ಕಾಂಟ್ರಾಕ್ಟ್ ಇಲ್ಲ ನನ್ನಲ್ಲಿ ಕೆಲಸವಿಲ್ಲ ಅದನ್ನು ಈಗಾಗಲೇ ಬೇರೆಯವರಿಗೆ ಕೊಟ್ಟು ಬಿಟ್ಟೆ ಎಂದಿದ್ದಾಳೆ.‌ ನಿನಗೆ ನಾನು ಒಂದು ಆಫರ್ ನೀಡಿದೆ ನೀನು ಅದನ್ನ ತಿರಸ್ಕಾರ ಮಾಡಿಬಿಟ್ಟೆ. ಈ ಜಾಗಕ್ಕೆ ಬರೋದಕ್ಕೆ ನಾನು ಎಷ್ಟು ಕಷ್ಟಪಟ್ಟಿದ್ದೇನೆ ಗೊತ್ತಾ? ಎಂದು ತಾನು ಬೆಳೆದು ಬಂದ ಬಗ್ಗೆ ಆರಾಧನಾ ಮುಂದೆ ಚಾಂದಿನಿ ಹೇಳಿದ್ದಾಳೆ.

Colors Kannada Antarapata serial written update on 19th episode

ನೀನು ಒಬ್ಬಂಟಿ ಎಂದ ಚಾಂದಿನಿ

ಈ ಆಟ ಬಿಟ್ಟು ಯಾವುದಾದರೂ ಒಳ್ಳೆಯ ಕಂಪನಿಗೆ ಸೇರಿಕೊಂಡು ಕೆಲಸವನ್ನ ಮಾಡು ಎಂದು ಚಾಂದಿನಿ ಹೇಳಿದ್ದಾಳೆ. ಜೊತೆಗೆ ನನಗೆ ಫ್ಯಾಮಿಲಿ ಬ್ಯಾಗ್ರೌಂಡ್ ಇದೆ. ನನ್ನ ತಂದೆ ತಾಯಿ ಕೂಡ ನಾನು ಮಾಡುತ್ತಿರುವ ಕೆಲಸಕ್ಕೆ ಸಾಥ್ ನೀಡಿದರು. ನಿನಗೆ ಯಾರಿದ್ದಾರೆ ನೀನು ಏಕಾಂಗಿ ಎಂದು ಆರಾಧನಾಗೆ ಚಾಂದಿನಿ ಹೇಳಿದ್ದಾಳೆ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಆರಾಧನಾ ಪರಿಪರಿಯಾಗಿ ಚಾಂದಿನಿಗೆ ಮನವರಿಕೆ ಮಾಡಿಸಲು ಹಠ ತೊಟ್ಟಿದ್ದಾಳೆ.

ಚಾಂದಿನಿ ಈ ಫೀಲ್ಡ್ ಅಲ್ಲಿ ಬರಬೇಕು ಬದುಕಬೇಕು ಎಂದರೆ ತುಂಬಾ ಕಷ್ಟವಿದೆ. ನಿನಗೆ ಯಾವುದೇ ರೀತಿಯ ಸಪ್ಪೋರ್ಟ್ ಇಲ್ಲ, ನೀನು ಬರೀ ವನ್ ಮ್ಯಾನ್ ಆರ್ಮಿ ಇದ್ದಂತೆ ಎಂದು ಹೇಳಿದ್ದಾಳೆ. ಒಮ್ಮೆ ಇಲ್ಲಿ ಸಂಚಾರ ಮಾಡೋದು ತುಂಬಾ ಕಷ್ಟ. ನಾನು ದಯವಿಟ್ಟು ನಿನಗೆ ಬೇಸರ ಮಾಡುತ್ತಿಲ್ಲ, ನನ್ನ ಮಾತನ್ನ ಕೇಳಿ ಜೀವನ ರೂಪಿಸಿಕೋ ಎಂದು ಚಾಂದಿನಿ ಬುದ್ಧಿ ಹೇಳಿ ಅಲ್ಲಿಂದ ಕಳುಹಿಸಿದ್ದಾಳೆ.

ಗಾರ್ಮೆಂಟ್ಸ್‌ಗೆ ಹೋಗ್ತಳಾ ಆರಾಧನಾ?

ಆರಾಧನಾ ಕನಸು ಮಣ್ಣು ಪಾಲಾಗಿದೆ. ಯಾಕೆಂದರೆ ಕಾಂಟ್ರಾಕ್ಟ್ ಸಿಗುತ್ತದೆ ನಾನು ಪರ್ಮನೆಂಟ್ ಕೆಲಸ ಸಿಗುತ್ತೆ. ಮಹೇಶ್‌ಗೆ ಉತ್ತರ ನೀಡುತ್ತೇನೆ ಎಂದುಕೊಂಡಿದ್ದಳು. ಆದರೆ ಅದು ಯಾವುದು ಸಹ ಆರಾಧನಾ ಬಾಳಿನಲ್ಲಿ ಆಗಿಲ್ಲ. ಕೊನೆಯದಾಗಿ ತನ್ನೆಲ್ಲ ಆಸೆ ಕನಸುಗಳನ್ನು ಗಂಟುಮೂಟೆ ಕಟ್ಟಿಟ್ಟು ಈಗ ಮಹೇಶ್ ಹೇಳಿದಂತೆ ಗಾರ್ಮೆಂಟ್ಸ್‌ಗೆ ಹೋಗುವುದೊಂದೇ ಆಕೆಯ ಮುಂದಿರುವ ಆಯ್ಕೆಯಾಗಿದೆ.

More from Filmibeat

English summary
Colors Kannada Antarapata serial written update on 19th episode. here is details about Aradana fail to get the job, Revathi thinking about Aradana future. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X