Antarapata: ಆರಾಧನಾ ಪಾಲಿಗೆ ಸತ್ತು ಹೋದ ಭರವಸೆ: ಪೂಜೆ ಮಾಡಿದ ಸುಶಾಂತ್

By ಶೃತಿ ಹರೀಶ್ ಗೌಡ

ಆರಾಧನಾ ಪಾಲಿಗೆ ನಾಳೆಯ ಭರವಸೆಗಳೆಲ್ಲವೂ ಸಹ ಸತ್ತು ಹೋಗಿದೆ . ತನಗೆ ಚಾಂದಿನಿ ಕೆಲಸ ಇಲ್ಲ ಎಂದು ನಿರಾಕರಣೆ ಮಾಡಿದ್ದಕ್ಕೆ ಬಹಳ ಬೇಸರದಿಂದ ದೇವಸ್ಥಾನಕ್ಕೆ ಹೊರಡಲು ಆರಾಧನಾ ರೆಡಿಯಾಗಿದ್ದಳು. ಸುಶಾಂತ್ ತೆಗೆದುಕೊಂಡು ಹೋಗಿದ್ದ ನಿಂಬೆಹಣ್ಣಿನಿಂದ ತುಪ್ಪದ ದೀಪ ಮಾಡಿಕೊಂಡು ದೇವರಿಗೆ ಹಚ್ಚಿದ್ದಾನೆ. ಅಜ್ಜಿ ಮಾತುಕೇಳಿ ಆರಾಧನಾಗೆ ಒಳ್ಳೆಯದಾಗಲಿ ಎಂದು ದೇವರ ಬಳಿ ಬೇಡಿಕೊಂಡಿದ್ದಾನೆ.

ದೀಪ ಹಚ್ಚಿಟ್ಟು ಬೇಡಿಕೊಳ್ಳುವ ವೇಳೆ ಆರಾಧನೆ ದೇವಸ್ಥಾನದ ಒಳಗೆ ಬಂದಿದ್ದಾಳೆ. ಇದೇ ವೇಳೆ ತನ್ನ ಸಂಭ್ರಮವನ್ನು ಆರಾಧನಾ ಬಳಿ ಹಂಚಿಕೊಂಡಿದ್ದಾನೆ. ಅಜ್ಜಿಯ ಬಳಿ ಹಣ ತೆಗೆದುಕೊಂಡು ನಾನು ನಿಂಬೆಹಣ್ಣಿನ ದೀಪವನ್ನು ಬೆಳಗಿದೆ, ಆಗ ನನಗೆ ಆಗ ಪಾಸಿಟಿವ್ ವೈಬ್ಸ್ ಬಂದಿತು ಎಂದು ಆರಾಧನಾ ಬಳಿ ಹೇಳುತ್ತಿದ್ದಾನೆ. ನಾನೇ ದೀಪಕ್ಕೆ ಅಲಂಕಾರ ಮಾಡಿದೆ. ನಿಂಬೆಹಣ್ಣು ಬಿಟ್ಟು ಅದರ ಒಳಗೆ ಬತ್ತಿ ಇಟ್ಟು ತುಪ್ಪವನ್ನು ಹಾಕಿ ದೀಪ ಹಚ್ಚಿದ್ದೇನೆ.

Colors Kannada Antarapata serial written update on 20th episode

ಇದೇ ವೇಳೆ ಆರಾಧನಾ, ಸುಶಾಂತ್‌ಗೆ ಮೊದಲ ಬಾರಿ ದೇವಸ್ಥಾನಕ್ಕೆ ಬಂದಿದ್ದ ಎಂದು ಕೇಳುತ್ತಿದ್ದಾಳೆ. ನಾನು ಅಮ್ಮನ ಜೊತೆ ಬಂದಿದ್ದೆ ಆದರೆ ಈ ರೀತಿ ಪೂಜೆ ಮಾಡಿದ್ದು ಇದೇ ಮೊದಲು ಅದಕ್ಕಾಗಿ ಪಾಸಿಟಿವ್ ವೈಬ್ಸ್ ಬಂದಿದೆ ಎಂದು ಹೇಳುತ್ತಿದ್ದಾನೆ. ನಂತರ ಯಾರಿಗಾಗಿ ಪೂಜೆ ಮಾಡಿದ್ದು ಎಂದು ಕೇಳಿದ್ದಕ್ಕೆ ನಿಮಗೆ ಎಂದು ಹೇಳುವ ವೇಳೆ ಸುಮ್ಮನಾಗಿದ್ದಾನೆ. ಹೀಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿದೆ ಎಂದು ಸುಶಾಂತ್ ಹೇಳಿದ್ದಾನೆ.

ದೇವರ ಬಳಿ ಕಣ್ಣೀರು ಹಾಕಿದ ಆರಾಧನಾ

ದೇವರ ಬಳಿ ಬಂದ ಆರಾಧನಾ ನನಗೆ ಇನ್ನೆಷ್ಟು ಪರೀಕ್ಷೆಗಳನ್ನ ಒಡ್ಡುತ್ತೀಯಾ, ನಾನು ಎಷ್ಟು ಅಂತ ಪಾಸ್ ಮಾಡಲಿ ಎಂದು ಕೇಳಿಕೊಳ್ಳುತ್ತಿದ್ದಾಳೆ. ನನಗೆ ಆಗುತ್ತಿಲ್ಲ ಇಷ್ಟು ಕಷ್ಟಗಳನ್ನು ಸಹಿಸಿಕೊಳ್ಳಲು ನಾನು ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗಬೇಕು ಎಂದಿದ್ದರೆ ಇಷ್ಟೆಲ್ಲಾ ಕಷ್ಟಗಳನ್ನ ಯಾಕೆ ಕೊಡಬೇಕಾಗಿತ್ತು. ನಾನು ಅಂದುಕೊಂಡಂತೆ ಸಕ್ಸಸ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ದೇವರ ಬಳಿ ಮೊರೆ ಇಟ್ಟಿದ್ದಾಳೆ.

ಆರಾಧನಾಗೆ ಧೈರ್ಯ ತುಂಬಿದ ಸುಶಾಂತ್

ಇದೇ ವೇಳೆ ಆರಾಧನಾಗೆ ಸುಶಾಂತ್ ಧೈರ್ಯ ತುಂಬಿದ್ದಾನೆ. ನಿಮಗೆ ಒಳ್ಳೆಯದೇ ಆಗುತ್ತದೆ ನಾನು ನಂಬಿದ್ದೇನೆ, ಈ ದೇವರು ನಿಮ್ಮ ಕೈ ಬಿಡುವುದಿಲ್ಲ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ದೇವರ ಬಳಿಯೂ ಸಹ ಆರಾಧನೆಗೋಸ್ಕರ ಕೇಳಿಕೊಂಡಿದ್ದಾನೆ. ಆರಾಧನಾ ತುಂಬಾ ಹಾರ್ಡ್‌ವರ್ಕರ್, ಅವರು ಕಷ್ಟ ಪಡುತ್ತಿದ್ದಾರೆ. ಅವರ ಕಷ್ಟಕ್ಕೆ ತಕ್ಕ ಪರಿಫಲ ನೀಡು ದೇವರೇ ಎಂದು ಸುಶಾಂತ್ ಬೇಡಿಕೊಂಡಿದ್ದಾನೆ. ನೀನು ಏನೇ ಬೇಡಿಕೊಂಡರೂ ಇಲ್ಲ ಎಂದು ಹೇಳುವುದಿಲ್ಲ ಆರಾಧನಗೆ ಒಳ್ಳೆಯದು ಮಾಡು ಎಂದಿದ್ದಾನೆ.

Colors Kannada Antarapata serial written update on 20th episode

ಸತ್ಯ ತಿಳಿದ ಆರಾಧನಾ

ಜೈಲಿನ ಬಳಿ ಸುಶಾಂತ್ ಬಂದಿದ್ದ ಎಂಬ ಸತ್ಯವನ್ನು ಆರಾಧನಾಗೆ ಅಜ್ಜಿ ಹೇಳಿದ್ದಾರೆ. ಆರಾಧನಾ ಅಜ್ಜಿಯ ಬಳಿ ಹೇಳಿದ್ದಾರೆ, ನನ್ನ ಜೊತೆ ಬರುತ್ತೇನೆ ಎಂದು ಸುಳ್ಳು ಹೇಳಿದವರನ್ನ ನಾನು ನಂಬುವುದಿಲ್ಲ, ಇದಕ್ಕೆ ಸುಳ್ಳು ಹೇಳಿದ್ದು,ಸುಶಾಂತ್ ನಿನ್ನ ಜೊತೆ ಬಂದಿದ್ದ ಹೊರಗಡೆ ಕಾಯುತ್ತಿದ್ದ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಅಜ್ಜಿ ಸುಶಾಂತ್‌ನ ಕರೆದಿದ್ದಾರೆ.

ಸುಳ್ಳು ಹೇಳಿದ ಸುಶಾಂತ್

ಅಜ್ಜಿ ಬಳಿ ಬಂದ ಸುಶಾಂತ್‌ಗೆ ನಿನಗೆ ಯಾವ ಕಾರಣಕ್ಕೆ ಜ್ವರ ಬಂದಿತ್ತು ಹೇಳು ಎಂದು ಕೇಳಿದ್ದಾರೆ. ಇದಕ್ಕೆ ಬಿಸಿಲಿನಲ್ಲಿ ನಿಂತಿದ್ದೆ ಅದಕ್ಕೆ ಜ್ವರ ಬಂದಿತ್ತು ಎಂದು ಸುಶಾಂತ್ ಸುಳ್ಳು ಹೇಳಿದ್ದಾನೆ‌.
ನಂತರ ಆರಾಧನಾಗೆ ಧೈರ್ಯ ಹೇಳಿದ್ದಾನೆ. ನಿಮಗೆ ಖಂಡಿತವಾಗಿಯೂ ಒಳ್ಳೆಯದೇ ಆಗುತ್ತದೆ. ಧೃತಿಗಡಬೇಡಿ ಎಂದೆಲ್ಲ ಹೇಳಿದ್ದಾನೆ. ಆದರೆ ಆರಾಧನಾಗೆ ಮಾತ್ರ ಯಾವುದು ಒಳ್ಳೆಯದು ಆಗುವುದಿಲ್ಲ ಎಂದು ಅನಿಸುತ್ತಿದೆ. ಇದೇ ವೇಳೆ ಅಜ್ಜಿ ಸೂರ್ಯ ಮುಳುಗುವ ವೇಳೆ ಈ ರೀತಿ ಅಪಶಕುನ ಮಾತನಾಡಬಾರದು ಎಂದು ಆರಾಧನಾಗೆ ಹೇಳಿದ್ದಾರೆ.

More from Filmibeat

English summary
Colors Kannada Antarapata serial written update on 20th episode. here is details about Aradana lost her hope, Sushanth doing pooja for Aradana. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X