Antarapata: ಗಾರ್ಮೆಂಟ್ಸ್ ಕೆಲಸಕ್ಕೆ ಹೊರಟ ಆರಾಧನಾ: ಸುಶಾಂತ್ ಧ್ಯಾನದಲ್ಲಿ ಕುಟುಂಬ
ತಾಯಿ ರೇವತಿ ಮನೆ ಬಿಟ್ಟು ಹೋಗು, ನಿನ್ನ ಗುರಿ ಸಾಧಿಸು ಎಂದರೂ ಸಹ ಅಮ್ಮನಿಗೋಸ್ಕರ ಆರಾಧನಾ ಮನೆ ಬಿಟ್ಟು ಹೋಗಿಲ್ಲ. ಬೆಳಗಾಗುವವರೆಗೂ ಮನೆಯ ಹೊರಗಡೆ ಕುಳಿತು ಅಲ್ಲೇ ನಿದ್ದೆ ಹೋಗಿದ್ದಾಳೆ. ಬೆಳಿಗ್ಗೆ ಎದ್ದು ಮನೆಯ ಮುಂದೆ ರಂಗೋಲಿ ಹಾಕಲು ಬಂದ ರೇವತಿ ಮಗಳು ಅಲ್ಲೇ ಇರುವುದನ್ನು ನೋಡಿ ಗಾಬರಿಯಾಗಿದ್ದಾಳೆ. ನಂತರ ಆರಾಧನಾಳನ್ನು ಎಬ್ಬಿಸಿದ್ದಾಳೆ.
ಅಮ್ಮನ ಧ್ವನಿಯನ್ನು ಕೇಳಿದ ಆರಾಧನಾ ಕಣ್ಣು ಬಿಟ್ಟಿದ್ದಾಳೆ. ಯಾಕೆ ನೀನು ಹೋಗಲಿಲ್ವಾ? ಈಗಲೂ ಸಹ ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ ನೀನು ಹೊರಡು ಎಂದು ರೇವತಿ ಮಗಳ ಬಳಿ ಬೇಡಿಕೊಂಡಿದ್ದಾಳೆ. ಆದರೆ ಆರಾಧನಾಗೆ ರೇವತಿಯನ್ನು ಬಿಟ್ಟು ಹೋಗಲು ಸ್ವಲ್ಪವೂ ಇಷ್ಟವಿಲ್ಲ. ಇದಕ್ಕಾಗಿ ಮಹೇಶ್ ಸಾರ್ ಹೇಳಿದಂತೆ ನಾನು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಇಲ್ಲಿಯೇ ನಿನ್ನ ಜೊತೆ ಇರುತ್ತೇನೆ ಎಂದು ಹೇಳಿದ್ದಾಳೆ.

ಆರಾಧನಾ ಒಳಗೆ ಎದ್ದು ಹೋಗಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಲು ರೆಡಿಯಾಗಿದ್ದಾಳೆ. ಇದೇ ವೇಳೆ ತನ್ನ ತಂದೆಯ ಫೋಟೋ ಮುಂದೆ ನಿಂತು ಪ್ರಾರ್ಥನೆ ಮಾಡಿ ಕಣ್ಣೀರು ಹಾಕಿದ್ದಾಳೆ. ನನ್ನ ಎಲ್ಲ ಕನಸುಗಳನ್ನು ನಾನು ಮೂಟೆ ಕಟ್ಟಿ ಇಟ್ಟಿದ್ದೇನೆ, ಈಗ ನಾನು ಸ್ವಂತ ಫ್ಯಾಕ್ಟರಿಯನ್ನ ಓಪನ್ ಮಾಡುತ್ತಿಲ್ಲ ಬದಲಾಗಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ. ನನಗೆ ಆಶೀರ್ವಾದ ಮಾಡಿ ಕಳಿಸಿ ಎಂದು ಪ್ರಾರ್ಥಿಸಿದ್ದಾಳೆ.
ಕೆಲಸಕ್ಕೆ ಹೊರಟಾಗ ಮಹೇಶ್ ಕೊಂಕು
ಆರಾಧನಾ ಕೆಲಸಕ್ಕೆ ಹೋಗುವ ವೇಳೆಯೂ ಸಹ ಮಹೇಶ್ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ. ಕೆಲಸಕ್ಕೆ ಹೋಗಿ ಬಾ ಬೆಳಿಗ್ಗೆ 9:30ಗೆ ಕರೆಕ್ಟಾಗಿ ಫ್ಯಾಕ್ಟರಿಗೆ ಹೋಗಿ ನಂತರ ಸಂಜೆಗೆ ಫ್ಯಾಕ್ಟರಿ ಬಿಟ್ಟ ಮೇಲೆ ತಲೆ ತಗ್ಗಿಸಿಕೊಂಡು ಮನೆಗೆ ಬರಬೇಕು ಎಂದು ಆರಾಧನಾಗೆ ಹೇಳಿದ್ದಾನೆ. ಬಾರದಿದ್ದರೆ ನನಗೇನು ಚಿಂತೆ ಇಲ್ಲ ಎಂದು ಕೊಂಕು ನುಡಿದಿದ್ದಾನೆ. ಇದಕ್ಕೆ ರೇವತಿ ಯಾಕೆ ಈ ರೀತಿ ಮಾತನಾಡುತ್ತಿದ್ದೀರಾ ಎಂದು ಕೇಳಿದ್ದಾಳೆ.
ಆರಾಧನಾಗೆ ಎದುರಾದ ಸುಶಾಂತ್
ತಿಂಗಳಿಗೆ ಸರಿಯಾಗಿ 12,000 ರೂ. ಸಂಬಳ ತಂದು ಕೊಡಬೇಕು, ಇದರಲ್ಲಿ ಕಮಿಷನ್ ಸಹ ನಾನು ಬೇರೆಯವರಿಗೆ ಕೊಡಬೇಕಾಗಿದೆ ಎಂದು ಹೇಳಿದ್ದಾನೆ. ಸರಿ ಎಂದು ಆರಾಧನಾ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೊರಟಿದ್ದಾಳೆ. ಈ ವೇಳೆ ಸುಶಾಂತ್ ಎದುರುಗೆ ಸಿಕ್ಕಿ ಕೆಲಸಕ್ಕೆ ಹೋಗುತ್ತಿದ್ದೀರಾ ಎಂದು ಕೇಳಿದ್ದಾನೆ. ಹೌದು ಎಂದು ಹೇಳಿರುವ ಆರಾಧನಾ ನಾನು ಗಾರ್ಮೆಂಟ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದೇನೆ, ಇವತ್ತು ಬೇಗನೆ ಹೋಗಬೇಕು ಸಂಜೆ ಬಂದು ಮಾತನಾಡುತ್ತೇನೆ ಎಂದು ಹೇಳಿದ್ದಾಳೆ.

ಮನೆಯವರಿಗೆಲ್ಲಾ ಸುಶಾಂತ್ ಧ್ಯಾನ
ಸುಶಾಂತ್ ಮನೆ ಬಿಟ್ಟು ಹೋಗಿ ತುಂಬಾ ದಿನಗಳಾಗಿದ್ದರಿಂದ ಧರ್ಮೇಂದ್ರ ಹಾಗೂ ಸಾವಿತ್ರಿಗೆ ಅವನ ಬಗ್ಗೆ ಚಿಂತೆ ಹೆಚ್ಚಾಗಿದೆ. ಇದೇ ವೇಳೆ ಮನೆಗೆ ಬಂದ ದಾಕ್ಷಾಯಿಣಿ ಹಾಗೂ ಅಮರ್ ಇಬ್ಬರೂ ಸಹ ಸುಶಾಂತ್ ಹೆಸರಲ್ಲಿ ಪೂಜೆ ಮಾಡಿಸಿರುವುದಾಗಿ ಸಾವಿತ್ರಿ ಬಳಿ ಹೇಳಿದ್ದಾರೆ. ಸಾವಿತ್ರಿ ತನ್ನ ಮಗ ಹೇಗಿರುವನು ಎಲ್ಲಿರುವನೋ ಎಂದು ಚಿಂತೆ ಮಾಡುತ್ತಿದ್ದು ಅದನ್ನು ದಾಕ್ಷಾಯಿಣಿ ಹಾಗೂ ಅಮರ್ ಮುಂದೆ ವ್ಯಕ್ತಪಡಿಸಿದ್ದಾಳೆ. ಇದೇ ವೇಳೆ ದಾಕ್ಷಾಯಿಣಿ ತನ್ನ ಅಣ್ಣ ಧರ್ಮೇಂದ್ರನನ್ನು ಕೇಳಿದ್ದಾಳೆ.
ಧೈರ್ಯ ತುಂಬಿದ ಅಮರ್
ಮಲಗಿದ್ದಾರೆ ಎಂದು ಸಾವಿತ್ರಿ ಹೇಳಿದ್ದಕ್ಕೆ ಆಕೆ ರೂಮಿಗೆ ಹೋಗಿ ಅಣ್ಣನ ಕ್ಷೇಮ ವಿಚಾರಿಸಿದ್ದಾಳೆ. ಇದೇ ವೇಳೆ ಭಾವನಿಗೆ ಅಮರ್ ದಯವಿಟ್ಟು ನೀವು ಯೋಚನೆಯನ್ನು ಮಾಡಬೇಡಿ ಸುಶಾಂತ್ ತುಂಬಾ ಚೆನ್ನಾಗಿ ಇದ್ದಾನೆ ಯಾಕೆಂದರೆ ಅವನನ್ನ ನೋಡಿಕೊಳ್ಳುತ್ತಿರುವುದು ಮೂರ್ತಿ ಎಂದು ಧೈರ್ಯ ತುಂಬಿದ್ದಾನೆ. ಅಲ್ಲಿ ಸುರಕ್ಷಿತವಾಗಿ ಇರುವುದಕ್ಕೆ ಅವನು ಇನ್ನೂ ಮನೆಗೆ ಬಂದಿಲ್ಲ ಅವನು ಏನು ಸಾಧಿಸಬೇಕು ಎಂದುಕೊಂಡಿದ್ದನೋ ಅದನ್ನ ಸಾಧಿಸಲಿ ಎಂದು ಧರ್ಮೇಂದ್ರಗೆ ಹೇಳಿದ್ದಾನೆ.


Click it and Unblock the Notifications











