Antarapata: ಆರಾಧನಾ ಎಂಗೇಜ್ಮೆಂಟ್ ನಿಲ್ಲಿಸ್ತಾನಾ ಸುಶಾಂತ್..?

By ಶೃತಿ ಹರೀಶ್ ಗೌಡ

ಆರಾಧನಾಗೆ ಈಗ ತನ್ನ ಎಂಗೇಜ್ಮೆಂಟ್ ಚಿಂತೆಯಾಗಿದೆ. ಯಾಕೆಂದರೆ ಈ ಕುಡುಕನ ಜೊತೆಗೆ ನಾನು ಮದುವೆಯಾದರೆ ಯಾವ ರೀತಿ ಕಷ್ಟ ಪಡಬೇಕು ಎಂದು ಚಿಂತೆ ಮಾಡುತ್ತಿದ್ದಾಳೆ. ನನ್ನ ಗೆಳೆಯ ರವಿ ಇದ್ದಿದ್ದರೆ ಹೇಗೋ ಅವನನ್ನು ಮದುವೆಯಾಗಬಹುದಿತ್ತು. ಅವನನ್ನು ಸಹ ಆ ವಿಧಿ ಬಲಿ ಪಡೆದುಕೊಂಡಿತು. ನನ್ನಂಥ ನತದೃಷ್ಟವಂತಳು ಯಾರು ಇಲ್ಲ ಎಂದು ಆರಾಧನಾ ಕೊರಗುತ್ತಿದ್ದಾಳೆ.

ರೇವತಿಗೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಇರುವುದರಿಂದ ಸುಮ್ಮನೆ ಮಾಡಬೇಕಾದ ಶಾಸ್ತ್ರಗಳ ಬಗ್ಗೆ ಗಮನ ಹರಿಸಿದ್ದಾಳೆ. ಆರಾಧನಾ ಮಾತ್ರ ಎಲ್ಲವನ್ನು ನೋಡುತ್ತಾ ಸುಮ್ಮನೆ ಗೊಂಬೆಯಂತೆ ಕುಳಿತಿದ್ದಾಳೆ. ಆರಾಧನಾ ಬಗೆಗೆ ವಠಾರದವರಿಗೆ ಕಾಳಜಿ ಇದೆ. ಆದರೆ ಮಹೇಶ ಆಡುವ ಮಾತುಗಳಿಂದ ಅವರಿಗೆ ಬೇಸರವಾಗುತ್ತದೆ. ಇದರಿಂದಾಗಿ ಏನನ್ನು ಹೇಳಲಾಗದ ಪರಿಸ್ಥಿತಿಯಲ್ಲಿ ವಠಾರದ ಜನರು ಇದ್ದಾರೆ.

Antarapata-Serial

ಇನ್ನು ಸುಶಾಂತ್‌ಗೆ ಹಾರ ತರುವ ಕೆಲಸ ಮಹೇಶ್ ವಹಿಸಿದ್ದಾನೆ. ಮನೆಯಲ್ಲಿ ಶಾಸ್ತ್ರಗಳು ನೆಲೆಯುತ್ತಿವೆ. ಸುಶಾಂತ್ ನಾನು ಬರುವಷ್ಟರಲ್ಲಿ ಎಂಗೇಜ್ಮೆಂಟ್ ನಡೆಯುತ್ತಿದೆ ಎಂದು ಕೇಳಿದ್ದಾನೆ. ಇದಕ್ಕೆ ಮಹೇಶ್ ಆ ತರ ಏನೂ ಇಲ್ಲ ಶಾಸ್ತ್ರಗಳನ್ನು ಪುರೋಹಿತರು ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ಇದೇ ವೇಳೆ ಸುಶಾಂತ್ ಆರಾಧನಾಳನ್ನು ಮದುವೆಯಾಗುತ್ತಿರುವವರನ್ನು ನೋಡಿದ್ದಾನೆ.

ಅಜ್ಜಿ ಬಳಿ ಸುಶಾಂತ್ ಮನವಿ

ಆರಾಧನಾ ದೇವರ ಬಳಿ ಬೇಡಿಕೊಳ್ಳುತ್ತಿದ್ದಾಳೆ. ದೇವರೇ ಯಾರಾದರೂ ಬಂದು ಎಂಗೇಜ್ಮೆಂಟ್ ತಡೆಯಬಾರದ ಎಂದು. ಈ ವೇಳೆ ಸುಶಾಂತ್ ಅಲ್ಲಿಗೆ ಬಂದಿದ್ದಾನೆ. ಪುರುಷೋತ್ತಮ್ ತನ್ನ ಮುಚ್ಚಿಕೊಂಡಿದ್ದಾನೆ. ಅವನನ್ನ ನೋಡಿ ಈ ಕಳ್ಳನ ಜೊತೆಯಲ್ಲಿ ಆರಾಧನೆ ಎಂಗೇಜ್‌ಮೆಂಟ್ ನಡೆಯುತ್ತಿದಿಯಾ? ಎಂದು ಅಜ್ಜಿ ಬಳಿ ಕೇಳಿದ್ದಾನೆ. ಅಜ್ಜಿ ಅವನು ಯಾರೆಂದು ಗೊತ್ತಾಯಿತಾ ಎಂದು ಕೇಳಿದ್ದಾಳೆ. ಅದಕ್ಕೆ ಅಜ್ಜಿ ನಿನ್ನ ಹಣವನ್ನು ಕದ್ದುಕೊಂಡು ಹೋಗಿದ್ದನಲ್ಲ ಅವನೇ ಇವನು ಎಂದು ಹೇಳಿದ್ದಾರೆ.

Antarapata-Serial

ಎಂಗೇಜ್ಮೆಂಟ್ ನಿಲ್ಲಿಸೋಣ

ಅಜ್ಜಿಗೆ ಸುಶಾಂತ್ ದಯವಿಟ್ಟು ಎಂಗೇಜ್ಮೆಂಟ್ ನಿಲ್ಲಿಸೋಣ ಎಂದು ಕೇಳಿಕೊಂಡಿದ್ದಾನೆ. ಆದರೆ ಅಜ್ಜಿ ಮಹೇಶ್‌ಗೆ ಬುದ್ಧಿ ಸರಿ ಇಲ್ಲ ಅವನು ನಾವು ಹೇಳಿದಂತೆ ಏನು ಕೇಳುವುದಿಲ್ಲ. ವಠಾರದವರೆಲ್ಲರೂ ಸುಮ್ಮನೆ ಇದ್ದಾರೆ. ನೀನು ಮಧ್ಯ ಬಂದು ಎಂಗೇಜ್ಮೆಂಟ್ ಹಾಳು ಮಾಡಬೇಡ ಎಂದು ಸುಶಾಂತ್‌ಗೆ ಬುದ್ಧಿಯನ್ನ ಹೇಳಿದ್ದಾರೆ. ಅಜ್ಜಿ ಮಾತನ್ನು ಕೇಳದೇ ಎಂಗೇಜ್ಮೆಂಟ್‌ಗೆ ಯಾರಾದರೂ ಕುಡಿದುಕೊಂಡು ಬರುತ್ತಾರಾ? ಎಂದು ಕೇಳಿದ್ದಾನೆ. ಆರಾಧನಾಗೂ ಸಹ ಅವನು ಕುಡುಕ ಎಂದು ಗೊತ್ತಿದೆ. ಆದರೂ ಸಹ ಮಹೇಶ್ ರಂಪ ಮಾಡುತ್ತಾರೆ ಎಂದು ಅವಳು ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾಳೆ ಎಂದು ಅಜ್ಜಿ ಹೇಳಿದ್ದಾರೆ.

ಅಮಲಾಗೆ ಬುದ್ದಿ ಹೇಳಿದ ಮೂರ್ತಿ

ಅಮಲಾಗೆ ಮೂರ್ತಿ ಬುದ್ಧಿ ಹೇಳಿದ್ದಾನೆ. ನಾನು ಫಾರಿನ್‌ನಲ್ಲಿ ಎಂಬಿಎ ಮಾಡಿದ್ದೇನೆ ಏನು ಮಾಡಬೇಕು ಏನು ಮಾಡಬಾರದು ಎಂದು ನನಗೆ ತಿಳಿದಿದೆ ಎಂದು ಮೂರ್ತಿಗೆ ಹೇಳಿದ್ದಾಳೆ. ಇದಕ್ಕೆ ಮೂರ್ತಿ ಓದಿಗಿಂತ ಗುಣ ಮುಖ್ಯ. ನೀನು ಓದಿದರೆ ಒಳ್ಳೆಯವಳು ಎಂದು ತಿಳಿದುಕೊಳ್ಳಬೇಕಾ ಎಂದು ಮೂರ್ತಿ ಪ್ರತ್ಯುತ್ತರ ನೀಡಿದ್ದಾನೆ.

ಅಮಲಾ ಈಗ ಮೂರ್ತಿಯ ಮನೆಗೆ ಹೋಗಿದ್ದಾಳೆ. ಅವನ ಮಗನ ಬಳಿ ಮಾತನಾಡಿದ್ದಾಳೆ. ನಿನ್ನ ಅಪ್ಪ ನನ್ನ ದಾರಿಗೆ ಅಡ್ಡ ಬರುತ್ತಾ ಇದ್ದಾರೆ ಎಂದು ಹೇಳಿದ್ದಾಳೆ. ಅದಕ್ಕೆ ಮೂರ್ತಿ ಮಗ ನಾನು ನಿಮ್ಮಿಬ್ಬರ ನಡುವೆ ದಾಳ ಆಗಿದ್ದೇನಾ ಎಂದು ಕೇಳಿದ್ದಾನೆ. ನಿಮ್ಮ ಅಪ್ಪನಿಗೆ ಗೊತ್ತಾಗಲಿ ಅವರು ಎಲ್ಲೆಲ್ಲೂ ಹೋಗಿ ಟೀ ಕುಡಿಯುತ್ತಾರೆ. ನನಗೆ ಎಷ್ಟು ಸಾಮರ್ಥ್ಯವಿದೆ ಎಂದು ಅದಕ್ಕೆ ನಾನು ಇಲ್ಲಿಗೆ ಬಂದೆ ಎಂದು ಅಮಲಾ, ಮೂರ್ತಿ ಮಗನ ಬಳಿ ಹೇಳಿ ಅಲ್ಲಿಂದ ಹೊರಟಿದ್ದಾಳೆ.

ಎಂಗೇಜ್‌ಮೆಂಟ್ ನಿಲ್ಲಿಸ್ತಾನಾ ಸೇಠು?

ಮಹೇಶ್ ಜೈಲಿಗೆ ಹೋಗಿದ್ದಾಗ ಸೇಠು ಬಳಿ ಆರಾಧನಾ ಹಣ ನಾನು ಕೊಡುತ್ತೇನೆ ಎಂದು ಬಿಡಿಸಿಕೊಂಡು ಬಂದಿದಳು. ಆದರೆ ಹಣವನ್ನು ಇನ್ನೂ ಹಿಂದಿರುಗಿಸಲಿಲ್ಲ. ಇದಕ್ಕಾಗಿ ಸೇಠು ಈಗ ಮನೆ ಮುಂದೆ ಬಂದು ಹಣ ಕೊಡುವಂತೆ ಮಹೇಶನ ಬಳಿ ಕೇಳಿದ್ದಾನೆ. ಆದರೆ ಮಹೇಶ್ ನನ್ನ ಬಳಿ ಹಣ ಇಲ್ಲ ಎಂದಿದ್ದಕ್ಕೆ ಮಗಳನ್ನು ಕರೆಯಲು ಹೇಳಿದ್ದಾನೆ. ಈಗ ಆರಾಧನಾ ಪಾಲಿಗೆ ಸೇಠು ದೇವರಾಗಿ ಬಂದಿದ್ದು ಎಂಗೇಜ್ಮೆಂಟ್ ಮುರಿದು ಬೀಳುತ್ತಾ ನೋಡಬೇಕು.

More from Filmibeat

English summary
Colors Kannada serial Antarapata today episode. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X