Antarapata: ಸುಶಾಂತ್ ನೋಡಲು ಪೊಲೀಸರ ಕಾಟ: ಮೂರ್ತಿಗೆ ಸಿಕ್ಕೇ ಬಿಡ್ತು ಸುಳಿವು!?

By ಶೃತಿ ಹರೀಶ್ ಗೌಡ

ಸಾವಿತ್ರಿ ಗೆ ತನ್ನ ಮಗನನ್ನು ನೋಡಲು ಹೋಗುತ್ತಿದ್ದೇನೆ ಎಂಬುದೇ ತುಂಬಾ ಖುಷಿಯಾಗಿದೆ. ಮೂರ್ತಿ ಸುಶಾಂತ್ ನನ್ನು ಭೇಟಿಯಾಗುತ್ತಿರುವ ವಿಷಯವನ್ನು ಯಾರೂ ಹೇಳಬಾರದು ಎಂದು ಹೇಳಿದ್ದಾನೆ. ಆದರೆ ಖುಷಿಯಲ್ಲಿ ಸಾವಿತ್ರಿ ಅಮಲಾ ಬಳಿ ಸುಶಾಂತನನ್ನು ಎಲ್ಲಿ ಭೇಟಿಯಾಗುತ್ತಿದ್ದೇನೆ ಎಂಬ ಬಗ್ಗೆ ಹೇಳಿಬಿಟ್ಟಿದ್ದಾಳೆ. ಅಮ್ಮನ ಬಳಿ ವಿಷಯ ತಿಳಿದುಕೊಂಡ ಅಮಲಾ ಪೊಲೀಸರಿಗೆ ವಿಷಯವನ್ನು ತಿಳಿಸಿ ಬಿಟ್ಟಿದ್ದಾಳೆ.‌

ಸುಶಾಂತ್ ಆರಾಧನಾ ಗೆ ಒಂದು ಗಿಫ್ಟನ್ನ ಕೊಡಬೇಕು ಎಂದುಕೊಂಡಿದ್ದಾನೆ ಇದಕ್ಕಾಗಿ ಫ್ಯಾನ್ಸಿ ಸ್ಟೋರ್ ನಲ್ಲಿ ತುಂಬಾ ಹುಡುಕಾಟವನ್ನು ನಡೆಸಿದ್ದಾನೆ. ಕೊನೆಗೆ ಒಂದು ಬಳೆಯನ್ನ ತೆಗೆದುಕೊಂಡು ಇದು ಆರಾಧನೆಗೆ ಇಷ್ಟವಾಗಬಹುದು ಎಂದು ಕೊಂಡಿದ್ದಾನೆ. ಇದೇ ವೇಳೆ ಅಂಗಡಿ ಮಾಲೀಕನ ಬಳಿ ಈ ಬಳೆ ಎಷ್ಟು ಎಂದು ಕೇಳಿದ್ದಾನೆ ಇದು 200 ರೂಪಾಯಿ ಎಂದು ಹೇಳಿದ್ದಾನೆ.

Colors Kannada Antarapata serial written update on july 4th episode

ಯಾವ ಸೈಜ್ ನಲ್ಲಿ ಬಳೆ ಬೇಕು ಎಂದು ಕೇಳಿದ್ದಕ್ಕೆ. ಸುಶಾಂತ್ ನನಗೆ ಅದೆಲ್ಲ ಗೊತ್ತಿಲ್ಲ, ನಾನು ಚಿಕ್ಕದು ತೆಗೆದುಕೊಂಡು ಬಿಟ್ಟರೆ ಏನು ಮಾಡೋದು ಎಂದು ಅಂದುಕೊಂಡಿದ್ದಾನೆ. ತನ್ನ ಕೈಯಲ್ಲಿ ಸ್ವಲ್ಪ ಎಂದೆಲ್ಲ ಅಳತೆಯನ್ನ ಮಾಡಿ ಕೊನೆಗೂ ಸಹ ಬಳೆಯನ್ನು ತೆಗೆದುಕೊಂಡಿದ್ದಾನೆ. ಇದು ಆರಾಧನಾಳಿಗೆ ಸುಶಾಂತ್ ಕೊಡುತ್ತಿರುವ ಸರ್ಪ್ರೈಸ್ ಗಿಫ್ಟಾಗಿದೆ. ಈ ಕಡೆ ಸುಶಾಂತ್ ಗೆ ತಾನು ತನ್ನ ತಾಯಿಯನ್ನ ಭೇಟಿಯಾಗುತ್ತೇನೆ ಎಂಬ ಯಾವ ಸುಳಿವು ಸಹ ಗೊತ್ತಿಲ್ಲ.

ಆರಾಧನಾ ತನ್ನ ಕೆಲಸವನ್ನ ಬೇಗ ಮುಗಿಸಿ ಅಕೌಂಟನ್ನ ನೋಡಿಕೊಳ್ಳಲು ಹೋಗುತ್ತಿದ್ದಾಗ ಅಲ್ಲಿದ್ದ ಮಹಿಳೆಯರು ಆರಾಧನಾ ಬಳಿ ಕ್ಯಾತೆಯನ್ನು ತೆಗೆದಿದ್ದಾರೆ. ನಮ್ಮ ಜೊತೆಗೆ ನೀನು ಕೆಲಸವನ್ನ ಮಾಡಿಕೊಂಡು ಹೋದರೆ ನಿನಗೆ ಇಲ್ಲಿ ಜಾಗ ಇರುತ್ತದೆ. ಆದರೆ ನೀನು ಬಂದ ದಿನವೇ ಇಷ್ಟೆಲ್ಲಾ ಮಾಡಿದರೆ ಚೆನ್ನಾಗಿರುವುದಿಲ್ಲ ಎಂದು ಮಹಿಳೆಯರು ಹೇಳಿದ್ದಾರೆ. ಆರಾಧನಾ ನನ್ನ ಕೆಲಸ ಬೇಗ ಮುಗಿದಿದೆ ಅದಕ್ಕಾಗಿ ನಾನು ಅಕೌಂಟ್ಸ್ ನೋಡಿಕೊಳ್ಳಲು ಹೋಗುತ್ತಿದ್ದೇನೆ. ಇದರಿಂದ ನಿಮಗೇನು ತೊಂದರೆ ಎಂದು ಆರಾಧನಾ ಕೇಳಿದ್ದಾಳೆ. ನಾವು ಹೇಳಿದಂತೆ ಕೇಳಬೇಕು ಎಂದು ಮಹಿಳೆಯರು ಬೆದರಿಕೆ ಹಾಕಿದ್ದಾರೆ.

ಇನ್ನು ಆರಾಧನಾ ಗಾರ್ಮೆಂಟ್ಸ್ ಕೆಲಸವನ್ನ ಮುಗಿಸಿ ಹೊರಗಡೆ ಬಂದಾಗ ಸೇಠ್ ಜೀ ಕಾಯುತ್ತಾ ನಿಂತಿದ್ದಾರೆ. ಸೇಠ್ ಜೀ ನೋಡಿದ ಆರಾಧನಾ ಅವರ ಬಳಿ ಬಂದು ಸಾರ್ ನೀವು ಇಲ್ಲಿ ಎಂದು ಕೇಳಿದ್ದಾಳೆ. ಇದಕ್ಕೆ ಸೇಠ್ ಜೀ ನೀನು ಕೇಳಿರುವ ದಿನದಲ್ಲಿ ಈಗಾಗಲೇ ಇನ್ನೆರಡು ದಿನ ಬಾಕಿ ಇದೆ. ನಿನ್ನ ಅಪ್ಪ ಮಾಡಿರುವ ಸಾಲಕ್ಕೆ ನೀನೇ ಹೊಣೆಗಾರಳಾಗಿದ್ದೀಯ ಎಂದು ಹೇಳಿದ್ದಾರೆ. ನನಗೆ ತಿಳಿದಿದೆ ನಾನು ಹಣವನ್ನ ಹಿಂತಿರುಗಿಸುತ್ತೇನೆ ಎಂದು ಆರಾಧನಾ ಹೇಳಿದ್ದಾಳೆ. ಆರಾಧನಾ ಹಾಗೂ ಸೇಠು ಮಾತನಾಡುತ್ತಿರುವುದನ್ನ ಗಾರ್ಮೆಂಟ್ಸ್‌ನ ಎಲ್ಲಾ ಮಹಿಳೆಯರು ನೋಡಿದ್ದಾರೆ.

ಸುಶಾಂತ್ ನೋಡಲು ಸಾವಿತ್ರಿ ಮೂರ್ತಿಯ ಜೊತೆ ಬಂದಿದ್ದಾಳೆ. ಇದೇ ವೇಳೆ ತನ್ನ ಮಗನನ್ನು ನಾನು ನೋಡುತ್ತೇನೆ ಎಂಬ ಖುಷಿಯಲ್ಲಿ ಇದ್ದಾಳೆ. ಇನ್ನು ಇದೇ ವೇಳೆ ಸಾವಿತ್ರಿ ಹೇಗಿದ್ದರೂ ನಾವು ಸುಶಾಂತ್ ಬಳಿ ಹೋಗುತ್ತಿದ್ದೇವೆ. ಸುಶಾಂತ್‌ನನ್ನು ಹತ್ತಿರದಿಂದ ಮಾತನಾಡಿಸಲು ಸಾಧ್ಯವಾ ಎಂದು ಮೂರ್ತಿ ಬಳಿ ಕೇಳಿದ್ದಾಳೆ. ಇದಕ್ಕೆ ಮೂರ್ತಿ ನಾನು ಮನೆಯಲ್ಲೇ ಹೇಳಿದ್ದೇನೆ ಅವನನ್ನ ದೂರದಿಂದ ಮಾತ್ರ ನೋಡಲು ಸಾಧ್ಯ ಎಂದು ನೀವು ಈ ರೀತಿ ಹಠ ಮಾಡಿದರೆ ವಾಪಸ್ ನಾವು ಮನೆಗೆ ಹೋಗೋಣ ಎಂದಿದ್ದಾನೆ.

ಮೂರ್ತಿಯ ಮಾತಿಗೆ ಕಟ್ಟು ಬಿದ್ದ ಸಾವಿತ್ರಿ ಆಯ್ತು ನಾನು ದೂರದಿಂದಲೇ ನನ್ನ ಮಗನನ್ನ ನೋಡಿ ಕಣ್ತುಂಬಿ ಕೊಳ್ಳುತ್ತೇನೆ ಎಂದಿದ್ದಾಳೆ. ಈ ಕಡೆ ಮಹೇಶ್ ಸುಶಾಂತ್ ನನ್ನು ಮೂರ್ತಿ ಹೇಳಿದ ಜಾಗಕ್ಕೆ ಕರೆದುಕೊಂಡು ಬಂದಿದ್ದಾನೆ ಮೊಬೈಲ್ ಫೋನ್‌ನನ್ನು ಸುಶಾಂತ್ ಕೈಗೆ ಕೊಟ್ಟಿದ್ದಾನೆ. ಮೂರ್ತಿ ಕರೆ ಮಾಡುವವರೆಗೂ ಸಹ ಸುಶಾಂತ್ ಗೆ ತಾನು ತನ್ನ ತಾಯಿಯನ್ನು ನೋಡಲು ಬಂದಿದ್ದೇನೆ ಎಂಬುದು ಮಾತ್ರ ತಿಳಿಯುವುದಿಲ್ಲ. ಸುಶಾಂತ್ ತಾಯಿ ಸುಶಾಂತ್ ಅನ್ನು ನೋಡಲು ಬರುತ್ತಿದ್ದಾರೆ ಎಂಬ ವಿಷಯ ಹೇಗೋ ಪೊಲೀಸರಿಗೆ ತಿಳಿದು ಹೋಗಿದೆ.

More from Filmibeat

English summary
Colors Kannada Antarapata serial written update on july 4th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X