Antarapata: ಅಮಲಾಗೆ ಬುದ್ಧಿ ಹೇಳಿದ ಮೂರ್ತಿ: ಹಣ ಕಳೆದುಕೊಂಡು ಸುಶಾಂತ್ ಪರದಾಟ

By ಶೃತಿ ಹರೀಶ್ ಗೌಡ

ಆರಾಧನಾ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಶ್ರದ್ದೆಯಿಂದ ತನ್ನ ಕೆಲಸ ಮಾಡುತ್ತಿದ್ದಾಳೆ. ಪ್ರತಿಯೊಂದು ಶರ್ಟ್ ಕಾಲರನ್ನು ಸರಿಯಾದ ರೀತಿಯಲ್ಲಿ ಹೊಲಿಗೆ ಹಾಕಿ ಜಯಾಗೆ ಕೊಟ್ಟಿದ್ದಾಳೆ. ಇನ್ನೇನು ಕೆಲಸ ಮುಗಿಯಿತು ಎಂದಾಗ ಜಯಾ ನೀನು ಬೇಗ ಕೆಲಸ ಮುಗಿಸಿದೆ ಎಂದ ಮಾತ್ರಕ್ಕೆ ಮನೆಗೆ ಕಳುಹಿಸುವುದಿಲ್ಲ, ಬೇರೆ ಕೆಲಸ ಏನಾದರೂ ಇದ್ದರೆ ಹೋಗಿ ಸೂಪರ್‌ವೈಸರ್ ಬಳಿ ಕೇಳು ಅಂದಿದ್ದಾಳೆ.

ಸೂಪರ್‌ವೈಸರ್ ಬಳಿ ಬಂದಂತಹ ಆರಾಧನಾ ನನ್ನ ಎಲ್ಲಾ ಕೆಲಸ ಮುಗಿಯಿತು ಎಂದು ಹೇಳಿದ್ದಾಳೆ. ಇದಕ್ಕೆ ಆತ ಮೊದಲು ಕೊಂಕಾಡಿದ್ದಾನೆ. ನಂತರ ಆರಾಧನಾಳ ಮುಖವನ್ನ ನೋಡಿ ನಿನಗೆ ಅಕೌಂಟ್‌ ಬಗ್ಗೆ ಗೊತ್ತು ಎಂದೆ ತಾನೇ, ಹೋಗಿ ಅಕೌಂಟ್ ಸೆಕ್ಷನ್‌ನಲ್ಲಿ ಕೆಲಸ ಖಾಲಿ ಇದ್ದರೆ ಕೇಳಿ ಅದನ್ನು ಮಾಡಿಕೊಡು ಎಂದಿದ್ದಾನೆ. ಆರಾಧನಾ ಅಕೌಂಟ್‌ ಸೆಕ್ಷನ್ ಬಳಿ ಬಂದಿದ್ದಾಳೆ. ಈಗ ಎಲ್ಲರ ಕಣ್ಣು ಆರಾಧನಾ ಮೇಲೆ ಇದೆ.

Colors Kannada Antarapata serial written update on June 26th episode

ಜೊತೆಯಲ್ಲಿ ಬಟ್ಟೆ ಒಲೆಯುವವರು ಆರಾಧನಾ ಮೇಲೆ ಕಣ್ಣಿಟ್ಟಿದ್ದಾರೆ. ಏಕೆಂದರೆ ಮೊದಲ ದಿನವೇ ಬಂದು ಈ ರೀತಿಯಾಗಿ ಕೆಲಸವನ್ನ ಮಾಡಿದ್ರೆ ಜೊತೆಯಲ್ಲಿ ಇರುವವರಿಗೆ ತೊಂದರೆ ಎಂದು ಬೇಸರ ಮಾಡಿಕೊಂಡಿದ್ದಾರೆ. ಜಯಾ ಯಾವ ರೀತಿ ಆರಾಧನಾ ಸ್ಟಿಚ್ ಹಾಕಿದ್ದಾಳೆ ಎಂಬುದನ್ನ ನೋಡಿದ್ದಾಳೆ. ತುಂಬಾ ನೀಟಾಗಿ ಹಾಕಿದ್ದಾಳೆ ಎಂದುಕೊಂಡು ಹುಡುಗಿಗೆ ಕೆಲಸ ಗೊತ್ತಿಲ್ಲದಿದ್ದರೂ ಚೆನ್ನಾಗಿ ಮಾಡಿದ್ದಾಳೆ ಎಂದುಕೊಂಡಿದ್ದಾಳೆ.

ಮೂರ್ತಿ - ಅಮಲಾ ನಡುವೆ ಗುದ್ದಾಟ

ಇತ್ತ ಅಮಲಾ ಹಾಗೂ ಮೂರ್ತಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಮತ್ತೆ ಮೂರ್ತಿ ಮೇಲೆ ಅಮಲಾ ಕಿಡಿಕಾರಿದ್ದಾಳೆ. ಇದೇ ವೇಳೆ ಅಮಲಾ ಡೈರೆಕ್ಟಾಗಿ ನಮ್ಮ ಅತ್ತೆಯನ್ನು ಯಾಕೆ ಈ ಮನೆಗೆ ಬರಲು ಹೇಳಿದ್ದೀರಿ ಎಂದು ಮೂರ್ತಿ ಬಳಿ ಕೇಳಿದ್ದಾಳೆ. ನಿಮ್ಮ ಮಗು ಆ ಮನೆಯ ಸಂಬಂಧ ಚೆನ್ನಾಗಿ ಇರಲಿ ಎಂದು ನಿಮ್ಮ ಅತ್ತೆ ಬಂದಿದ್ದರು ಎಂದು ಹೇಳಿದ್ದಾನೆ.

ಇದೇ ವೇಳೆ ಮೂರ್ತಿಗೆ ಅಮಲಾ ಒಂದು ಮಾತನ್ನ ಹೇಳಿದ್ದಾಳೆ. ಅದು ಏನೆಂದರೆ ನಾನು ಎಲ್ಲಿಗೆ ಹೋಗಲಿ ನನ್ನ ಕಣ್ಣಿಲ್ಲಾ ಇದೆ ಮನೆಯಲ್ಲಿ ಇರುತ್ತದೆ. ನಾನು ಎಲ್ಲೇ ಇದ್ದರೂ ಸಹ ರಾಣಿಯಂತೆ ಇರುತ್ತೇನೆ. ಅಲ್ಲಿಂದಲೇ ಏನು ಬೇಕು ಅದನ್ನ ನಾನು ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾಳೆ. ಇದಕ್ಕೆ ಮೂರ್ತಿ ಸಹ ನನ್ನ ದಾಟಿ ಏನು ಆಗುತ್ತದೆ ಎಂಬುದನ್ನ ನಾನು ನೋಡುತ್ತೇನೆ ಎಂದು ಹೇಳಿದ್ದಾನೆ.

Colors Kannada Antarapata serial written update on June 26th episode

ಕೊಂಕು ಮಾತು ಕೇಳಿದ ಆರಾಧನಾ

ಆರಾಧನಾ ಮೊದಲನೆಯ ದಿನವೇ ಸಹದ್ಯೋಗಿಗಳಿಂದ ಕೊಂಕು ಮಾತು ಕೇಳಿದ್ದಾಳೆ. ಬಂದ ಹುಮ್ಮಸ್ಸಿನಲ್ಲಿ ಎಲ್ಲಾ ಕೆಲಸವನ್ನು ಮುಗಿಸಿ ಬಿಟ್ಟಿದ್ದೀಯಲ್ಲ, ನಾಳೆ ನಮಗೂ ಸಹ ಇವಳಷ್ಟೇ ಕೆಲಸವನ್ನ ಮಾಡಿ ಎಂದು ಕೇಳುತ್ತಾರೆ, ನಮ್ಮ ಕೈಯಲ್ಲಿ ಅದೆಲ್ಲ ಆಗುವುದಿಲ್ಲ. ನೀನು ನಾವು ಹೇಳಿದಂತೆ ಕೇಳಬೇಕು ಎಂದು ಆರಾಧನಾಗೆ ಅಲ್ಲಿ ಕೆಲಸ ಮಾಡುವ ಮಹಿಳೆಯರು ಹೇಳಿದ್ದಾರೆ. ನಾಳೆಯಿಂದ ನಿಧಾನವಾಗಿ ಕೆಲಸ ಮಾಡು, ಬೇಕಾದರೆ ಓವರ್ ಟೈಮ್ ಮಾಡು ನಾಲ್ಕು ಕಾಸಾದರೂ ಸಿಗುತ್ತದೆ. ಈ ರೀತಿ ಮಾಡಿದರೆ ಏನು ಪ್ರಯೋಜನವಿಲ್ಲ ಎಂದು ಆರಾಧನೆಗೆ ಬುದ್ಧಿ ಹೇಳಿದ್ದಾರೆ.

ಹಣ‌ ಕಳೆದುಕೊಂಡು ಬಂದ ಸುಶಾಂತ್

ನಾನೇ ಕರೆಂಟ್‌ ಬಿಲ್ ಕಟ್ಟಿ ಬರುತ್ತೇನೆ ಎಂದು ಸುಶಾಂತ್ ಹಣವನ್ನು ವಠಾರದವರಿಂದ ತೆಗೆದುಕೊಂಡಿದ್ದನು. ಅಂಗಡಿಯ ಬಳಿ ಹೋದಾಗ ಹಿಂಬದಿಯ ಬೇಬಿನಿಂದ ಹಣ ಬಿದ್ದುಹೋಗಿದೆ. ಅದನ್ನ ಸುಶಾಂತ್ ನೋಡಿಕೊಂಡಿಲ್ಲ. ನಂತರ ಕರೆಂಟ್ ಬಿಲ್ ಕಟ್ಟಲು ಹೋದಾಗ ಹಣ ಕಳೆದುಕೊಂಡಿದ್ದೇನೆ ಎಂದು ಗೊತ್ತಾಗಿದೆ. ಓಡೋಡಿ ಬಂದು ತಾನು ಅಂಗಡಿಯ ಮುಂದೆ ನಿಂತಿದ್ದವರನ್ನು ವಿಚಾರಿಸಿದ್ದಾನೆ. ಆದರೆ ಅವರ್ಯಾರು ನಮಗೆ ಹಣ ಸಿಗಲಿಲ್ಲ ಎಂದಿದ್ದಾರೆ.

ವಠಾರಕ್ಕೆ ಬಂದ ಸುಶಾಂತ್ ನಾನು ಹಣವನ್ನ ಕಳೆದುಕೊಂಡು ಬಂದಿದ್ದೇನೆ ಎಂದಿದ್ದಾನೆ. ಇದಕ್ಕೆ ವಠಾರದವರೆಲ್ಲರೂ ಸೇರಿ ಸುಶಾಂತ್‌ಗೆ ಬೈಯುತ್ತಿದ್ದಾರೆ. ಮಧ್ಯ ಪ್ರವೇಶ ಮಾಡಿದ ಅಜ್ಜಿ ಮಾತ್ರ ಸುಶಾಂತ್‌ನನ್ನು ಯಾಕೆ ಬೈಯುತ್ತಿದ್ದೀರಾ. ನೀವೇ ಹೋಗಿ ನಿಮ್ಮ ಕೆಲಸವನ್ನು ಮಾಡಿಕೊಳ್ಳಬಹುದು ಅಲ್ಲವೇ ಎಂದು ಹೇಳಿದ್ದಾಳೆ.

More from Filmibeat

English summary
Colors Kannada Antarapata serial written update on June 26th episode. here details about Murty discuss with Amala about her life , but amala warn to Him. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X