Bhagyalakshmi: ಕಾಂಟ್ರಾಕ್ಟ್ ಢಮಾರ್; ಭಾಗ್ಯ ಕನಸಿಗೆ ಕಲ್ಲು ಹಾಕಿದ ದುರಹಂಕಾರಿ ತಾಂಡವ್
'ಭಾಗ್ಯಲಕ್ಷ್ಮಿ' ಧಾರಾವಾಹಿಯು ದಿನದಿಂದ ದಿನಕ್ಕೆ ದೊಡ್ಡ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಧ್ಯಮ ವರ್ಗದ ಭಾಗ್ಯ ಮತ್ತು ಅಹಂಕಾರಿ ಶ್ರೇಷ್ಠಾ ಜೀವನದ ಸುತ್ತ ಹೆಣೆದಿರುವ ಈ ಕಥೆಯು ಕನ್ನಡಿಗರ ಮನೆಮಾತಾಗಿದೆ. ಇತ್ತೀಚೆಗೆ ಭಾಗ್ಯಳ ಜೀವನದಲ್ಲಿ ಹೊಸ ಕನಸುಗಳು ಮೂಡಿಬರುತ್ತಿದ್ದು, ತನ್ನದೇ ಆದ ಒಂದು ಸ್ಥಾನವನ್ನು ಗಳಿಸಲು ಅವಳು ಹೆಣಗುತ್ತಿದ್ದಾಳೆ.
ಧಾರಾವಾಹಿಯ ಕಥಾವಸ್ತುವು ಈಗ ಒಂದು ಭಯಂಕರ ತಿರುವನ್ನು ಪಡೆದಿದೆ. ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ ಹೊಸ ಪ್ರೋಮೋ ಒಂದು ಸದ್ಯಕ್ಕೆ ಎಲ್ಲೆಡೆ ಸದ್ದು ಮಾಡುತ್ತಿದೆ. ಭಾಗ್ಯಳಿಗೆ ಎದುರಾದ ಮತ್ತೊಂದು ದೊಡ್ಡ ಸಂಕಷ್ಟವನ್ನು ಈ ಪ್ರೋಮೋ ಬಿಚ್ಚಿಟ್ಟಿದೆ.

ಒಂದೆಡೆ ಭಾಗ್ಯ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದಾಳೆ. ಮತ್ತೊಂದೆಡೆ ಆಕೆಗೆ ಸದಾ ಅಡ್ಡಗಾಲು ಹಾಕಲು ಒಬ್ಬ ವ್ಯಕ್ತಿ ಸಿದ್ಧನಾಗಿದ್ದಾನೆ. ಹಾಗಾದರೆ ಭಾಗ್ಯ ಕನಸು ಕಂಡಿದ್ದ ಆ ಕಾಂಟ್ರಾಕ್ಟ್ನ ಕಥೆಯೇನು? ಆ ಕೆಲಸ ನಿಜಕ್ಕೂ ಡಮಾರ್ ಆಯಿತಾ? ಎಂಬ ಪ್ರಶ್ನೆ ಈಗ ಎಲ್ಲರ ಮನಸ್ಸಿನಲ್ಲಿದೆ.
ಭಾಗ್ಯ ಕನಸಿಗೆ ಕಲ್ಲು
ಹೌದು ಪ್ರೋಮೋದಲ್ಲಿ ಕಂಡಂತೆ ಭಾಗ್ಯಗೆ ಸಿಕ್ಕಿದ್ದ ಪ್ರಮುಖ ಕೆಲಸಕ್ಕೆ ಅಡ್ಡಗಾಲು ಹಾಕಿದವನು ಬೇರೆ ಯಾರೂ ಅಲ್ಲ, ಅದು ತಾಂಡವ. ಭಾಗ್ಯಳ ಪ್ರಗತಿಯನ್ನು ಕಂಡ ತಾಂಡವನಿಗೆ ಒಳಗೊಳಗೆ ಅಸೂಯೆ ಶುರುವಾಗಿದೆ. ಈ ಅಸೂಯೆಯು ಈಗ ಕ್ರೂರ ರೂಪ ತಾಳಿದೆ. ಭಾಗ್ಯಗೆ ಸಿಗಬೇಕಿದ್ದ ಕಾಂಟ್ರಾಕ್ಟ್ ಅನ್ನು ತಾಂಡವ ತಡೆ ಹಿಡಿದಿದ್ದಾನೆ.
ಕಾಂಟ್ರಾಕ್ಟ್ ಢಮಾರ್
ತಾಂಡವ್ನ ಸಂಸ್ಥೆಯ ಸಿಬ್ಬಂದಿಯೊಬ್ಬರು ಭಾಗ್ಯಳನ್ನು ಉದ್ದೇಶಿಸಿ ಮಾತನಾಡಿ "ಈ ಕಾಂಟ್ರಾಕ್ಟ್ನಾ ನಿಮಗೆ ಕೊಡೋಕೆ ಆಗೋಲ್ಲ.." ಎಂದು ನೇರವಾಗಿ ಹೇಳಿದ್ದಾರೆ. ತಾಂಡವ್ನ ಈ ನಿರ್ಧಾರದಿಂದ ಭಾಗ್ಯಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಅವಳು ಸಂಪಾದಿಸಲು ಹೊರಟಿದ್ದ ಅವಕಾಶವನ್ನು ತಾಂಡವ್ನ ಅಸೂಯೆ ಕಸಿದುಕೊಂಡಿದೆ. ಇಂತಹ ನಾಟಕೀಯ ತಿರುವು ನೋಡುಗರಿಗೆ ಆಘಾತ ನೀಡಿದೆ.
ತಾಂಡವ್ ಕ್ರೂರ ಮಾತುಗಳು...
ತಾಂಡವ ಇಲ್ಲಿ ಕೇವಲ ಕಾಂಟ್ರಾಕ್ಟ್ ಅನ್ನು ರದ್ದುಗೊಳಿಸಿಲ್ಲ. ಭಾಗ್ಯಳ ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನೂ ಆಡಿದ್ದಾನೆ. "ನಿಮಗೆ ನಾಚಿಕೆ, ಮಾನ, ಮರ್ಯಾದೆ ಏನು ಇಲ್ವಾ..." ಎಂದು ಅಸಹನೆಯಿಂದ ಆತ ಪ್ರಶ್ನಿಸಿದ್ದಾನೆ. ಭಾಗ್ಯಳ ಶ್ರಮ ಮತ್ತು ಪ್ರಾಮಾಣಿಕತೆಯನ್ನು ತಾಂಡವ ಪ್ರಶ್ನಿಸಿರುವುದು ಈ ಸಂಬಂಧದಲ್ಲಿನ ಬಿರುಕನ್ನು ಮತ್ತಷ್ಟು ದೊಡ್ಡದಾಗಿಸಿದೆ.
ತಾಂಡವನ ಅಹಂಕಾರ
ಕಷ್ಟಪಟ್ಟು ಮೇಲೆ ಬರುತ್ತಿರುವ ಹೆಣ್ಣೊಬ್ಬಳಿಗೆ ಈ ರೀತಿ ಸಾರ್ವಜನಿಕವಾಗಿ ಅವಮಾನ ಮಾಡುವುದು ತಾಂಡವನ ಅಹಂಕಾರ ಮತ್ತು ಅಸೂಯೆಗೆ ಹಿಡಿದ ಕೈಗನ್ನಡಿ. ಅವನು ಅಸೂಯೆಯಿಂದ ಅಲ್ಲಿ ಉರಿಯೋಕೆ ಶುರು ಮಾಡಿದ್ದಾನೆ. ಭಾಗ್ಯಳ ಯಶಸ್ಸನ್ನು ಕಂಡು ಅವನಿಗೆ ಸುಮ್ಮನೆ ಇರಲಾಗುತ್ತಿಲ್ಲ.
ಇಬ್ಬರ ಮಧ್ಯೆ ಪೈಪೋಟಿ
ಭಾಗ್ಯಲಕ್ಷ್ಮಿ ಮತ್ತು ತಾಂಡವನ ನಡುವೆ ನಡೆದಿರುವ ಈ ತೀವ್ರ ಪೈಪೋಟಿ ಈಗ ಧಾರಾವಾಹಿಯ ಕಥೆಯನ್ನು ಸಂಪೂರ್ಣವಾಗಿ ರಂಗೇರಿಸಿದೆ. ತಾಂಡವನ ಈ ಅಟ್ಟಹಾಸದಿಂದ ಭಾಗ್ಯ ಹೇಗೆ ಹೊರಬರುತ್ತಾಳೆ? ಈ ಸಮಸ್ಯೆಯನ್ನು ಭಾಗ್ಯ ಹೇಗೆ ಎದುರಿಸುತ್ತಾಳೆ? ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿದುಬರಲಿದೆ.
ಮುಂದೇನಾಗಬಹುದು?
ಭಾಗ್ಯಳ ಕನಸಿನ ಕೆಲಸವು ನಿಜವಾಗಿಯೂ ಕಳೆದುಕೊಂಡಂತಾಗಿದೆ. ಅಥವಾ ಈ ಸಂಕಷ್ಟದಿಂದ ಭಾಗ್ಯ ಯಾವುದಾದರೂ ಹೊಸ ದಾರಿಯನ್ನು ಕಂಡುಕೊಳ್ಳುತ್ತಾಳೆಯೇ? ತಾಂಡವನ ಈ ಕೆಟ್ಟ ನಡವಳಿಕೆಗೆ ಯಾರಾದರೂ ಪ್ರತ್ಯುತ್ತರ ನೀಡುತ್ತಾರೆಯೇ? "ಏನ್ ನಡೀತಿದೆ ನಿಮ್ಮ ಇಬ್ಬರ ಮಧ್ಯ..." ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಎಲ್ಲಾ ಉತ್ತರಗಳಿಗಾಗಿ 'ಭಾಗ್ಯಲಕ್ಷ್ಮಿ' ಧಾರಾವಾಹಿಯನ್ನು ತಪ್ಪದೇ ವೀಕ್ಷಿಸಿ.


Click it and Unblock the Notifications











