Bhagyalakshmi: ಕ್ಲಾಸ್ ರೂಮಿಗೆ ಅಂಜಿಕೆಯಿಂದಲೇ ಎಂಟ್ರಿ ಕೊಟ್ಟ ಭಾಗ್ಯ: ತಾಂಡವ್ ಪರಿಸ್ಥಿತಿ ಅಯೋಮಯ
ಭಾಗ್ಯ ಈಗ 10ನೇ ತರಗತಿಗೆ ಅಡ್ಮಿಶನ್ ಆಗಿದ್ದಾಳೆ, ಕುಸುಮ ಮಗನ ಬಳಿಗೆ ಹಣವನ್ನ ಹಾಕಿಸಿಕೊಂಡು ಭಾಗ್ಯಳನ್ನ ತನ್ವಿ ಓದುತ್ತಿರುವ ಶಾಲೆಗೆ ಸೇರಿಸಿದ್ದಾಳೆ. ಭಾಗ್ಯ ಮೊದಲೇ ಎದುರು ಕೊಳ್ಳುವ ಸ್ವಭಾವದವಳು ಹೀಗಾಗಿ ಅತ್ತೆ ಬಿಟ್ಟು ಹೋದ ಮೇಲೆ ನಾನು ಇಂತಹ ಪುಟ್ಟ ಮಕ್ಕಳ ಜೊತೆ ಹೇಗೆ ಕುಳಿತುಕೊಳ್ಳಲಿ ಎಂದು ಯೋಚನೆಯನ್ನು ಮಾಡಿದ್ದಾಳೆ. ನನ್ನ ವಯಸ್ಸು ಹಾಗೂ ನನ್ನ ಉಡುಗೆ ತೊಡುಗೆಯಿಂದ ಏನಾದರೂ ಆದರೆ ಏನು ಮಾಡೋದು ಎಂದು ಅಂದುಕೊಂಡಿದ್ದಾಳೆ.
ಕೊನೆಗೆ ಭಾಗಿಯಾಗಿ ತನ್ನ ಅತ್ತೆಯ ಬಗ್ಗೆ ಯೋಚನೆ ಬಂದಿದೆ ಈಗ ನಾನು ಸಮುದ್ರಕ್ಕೆ ಇಳಿದಿದ್ದೇನೆ ಈಜಲೇಬೇಕು ಅದು ಸುಳಿಯಾದರೆ ಏನು ಚಳಿಯಾದರೆ ಏನು ಎಂದು ಕೊಂಡಿದ್ದಾಳೆ. ಸಮುದ್ರವನ್ನು ದಾಟಿ ನಾನು ಜಯಿಸಬೇಕು ಆ ಕಡೆ ನನ್ನ ಅತ್ತೆ ನನಗೋಸ್ಕರ ಕಾಯುತ್ತಾ ಇರುತ್ತಾರೆ ನಾನು ಹಿಂಜರಿಯುವುದು ಬೇಡ ಎಂದುಕೊಂಡಿದ್ದಾಳೆ. ಚೆನ್ನಾಗಿ ಓದಿ ನನ್ನ ಅತ್ತೆಯ ಹೆಸರಿಗೆ ಕೀರ್ತಿಯನ್ನ ತರಬೇಕು ನನ್ನ ಮೇಲೆ ಭರವಸೆಯನ್ನಾಗಿ ಇಟ್ಟು ಶಾಲೆಗೆ ಸೇರಿಸಿದ್ದಾರೆ ಎಂದು ಭಾಗ್ಯ ಯೋಜನೆ ಮಾಡಿದ್ದಾಳೆ.

ಅತ್ತೆಯ ಬಗ್ಗೆ ಯೋಚನೆ ಬಂದಿದ್ದೆ ತಡ ಭಾಗ್ಯ ಧೈರ್ಯವನ್ನ ತೆಗೆದುಕೊಂಡಿದ್ದಾಳೆ. ಇಲ್ಲ ನಾನು ಕ್ಲಾಸ್ ರೂಮಿನ ಒಳಗೆ ಹೋಗಲೇಬೇಕು ಎಂದು ಪಣವನ್ನ ತೊಟ್ಟಿದ್ದಾಳೆ. ಧೈರ್ಯ ತೆಗೆದುಕೊಂಡಿರುವ ಭಾಗ್ಯ ಅಲ್ಲೇ ಓಡಾಡುತ್ತಿರುವ ಮಕ್ಕಳ ಮೇಲೆ ಒಮ್ಮೆ ಕಣ್ಣಾಡಿಸಿದ್ದಾಳೆ. ನಂತರ ಒಂದರ ಮೇಲೊಂದು ಮೆಟ್ಟಿಲುಗಳನ್ನು ಹತ್ತಿಕೊಂಡು ಕ್ಲಾಸ್ ರೂಮಿನ ಬಳಿಗೆ ಬಂದಿದ್ದಾಳೆ. ಒಮ್ಮೆ ಕ್ಲಾಸ್ ರೂಮಿನ ಒಳಗೆಲ್ಲ ಕಣ್ಣಾಡಿಸಿದ ಭಾಗ್ಯ ತರಗತಿಗೆ ಕಾಲಿಟ್ಟಿದ್ದಾಳೆ.
ಭಾಗ್ಯ ತರಗತಿಯೊಳಗೆ ಕಾಲಿಟ್ಟ ತಕ್ಷಣವೇ ಮಕ್ಕಳು ಮೇಡಂ ಎಂದುಕೊಂಡು ಗುಡ್ ಮಾರ್ನಿಂಗ್ ಮೇಡಂ ಎಂದು ಹೇಳಿದ್ದಾರೆ. ಇದರಿಂದ ಕಸಿವಿಸಿಕೊಂಡ ಭಾಗ್ಯ ಹೋಗಿ ಡೆಸ್ಕಿನ ಮೇಲೆ ಕುಳಿತುಕೊಂಡಿದ್ದಾಳೆ. ನಂತರ ಮಕ್ಕಳು ಒಬ್ಬರಿಗೊಬ್ಬರು ನಗುತ್ತಾ ಸುಮ್ಮನೆ ಕುಳಿತುಕೊಂಡಿದ್ದಾರೆ. ಆ ಕ್ಷಣವೇ ಕ್ಲಾಸಿನ ಒಳಗೆ ಟೀಚರ್ ಬಂದಿದ್ದಾರೆ. ಏನು ಇಂದು ತರಗತಿ ಇಷ್ಟೊಂದು ನಿಶಬ್ದವಾಗಿದೆ ಎಂದು ಕೇಳಿದ್ದಾರೆ. ಯಾರೊಬ್ಬರೂ ಸಹ ಮಾತನಾಡಲಿಲ್ಲ.
ಈ ಕಡೆ ಹುಡುಗರು ಇಂದು ಇಬ್ಬರು ಟೀಚರ್ಸ್ ಬಳಿ ಪಾಠವನ್ನು ಕೇಳಬೇಕು ಯಾರ ಬಳಿ ಪಾಠ ಹೇಳಿಸಿಕೊಳ್ಳಬೇಕು ಎಂದು ತಿಳಿಯುತ್ತಿಲ್ಲ ಎಂದು ಗುಸುಗುಸು ಆರಂಭಿಸಿದ್ದಾರೆ. ಇದೇ ವೇಳೆ ಟೀಚರಿಗೆ ಭಾಗ್ಯ ಕ್ಲಾಸ್ ರೂಮಿನಲ್ಲಿ ಇರುವುದು ಗೊತ್ತಾಗಿದೆ. ಇನ್ನು ಭಾಗ್ಯಳನ್ನ ಟೀಚರ್, ಮಕ್ಕಳಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ ಇವರ ಹೆಸರು ಭಾಗ್ಯ ನಿಮ್ಮ ಜೊತೆ ಓದಲು ಬಂದಿದ್ದಾರೆ. ಇವರ ಜೊತೆಗೆ ನಾವೆಲ್ಲರೂ ಇರಬೇಕು ಎಂದು ಹೇಳಿದ್ದಾರೆ.
ಭಾಗ್ಯ ಕ್ಲಾಸ್ ರೂಮಿನ ಬಳಿ ಬಂದವಳೇ ತನ್ನ ಮಗಳು ತನ್ವಿಗಾಗಿ ಹುಡುಕಾಟವನ್ನು ನಡೆಸಿದ್ದಾಳೆ. ಇದೇ ವೇಳೆ ತನ್ವಿ ಅಲ್ಲೆಲ್ಲೆಲ್ಲೂ ಕಾಣಿಸದ ಕಾರಣ ಎಲ್ಲೋ ಹೋಗಿರಬೇಕು ಕ್ಲಾಸ್ ಶುರುವಾದಾಗ ಬರಬಹುದು ಎಂದುಕೊಂಡಿದ್ದಾಳೆ ಭಾಗ್ಯ. ಕ್ಲಾಸ್ ಶುರುವಾದರೂ ಸಹ ತನ್ವಿ ಬರೆದಿದ್ದನ್ನ ಕಂಡು ಭಾಗ್ಯ ಆತಂಕಕ್ಕೆ ಒಳಗಾಗಿದ್ದಾಳೆ.
ಶ್ರೇಷ್ಠ ತಂದೆ ತಾಯಿಯ ಬಳಿ ತಾಂಡವ್ ಲಾಕ್ ಆಗಿ ಹೋಗಿದ್ದಾನೆ. ಶ್ರೇಷ್ಠ ತಂದೆ ತಾಯಿ ನಿಮ್ಮ ತಂದೆ ತಾಯಿಯ ಬಳಿ ನಾವು ಮಾತನಾಡಬೇಕು. ಮದುವೆಯ ದಿನಾಂಕವನ್ನು ನಿಗದಿ ಮಾಡಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ತಾಂಡವ್ ನಮ್ಮ ತಂದೆ ತಾಯಿ ಊರಿನಲ್ಲಿ ಇರೋದಿಲ್ಲ ಎಂದು ಸುಳ್ಳು ಹೇಳಿದ್ದಾನೆ. ಫೋನಿನಲ್ಲಾದರೂ ಮಾತನಾಡಿಸಿ ಎಂದು ತಾಂಡವ್ನನ್ನು ಶ್ರೇಷ್ಠ ತಂದೆ ತಾಯಿ ಕೇಳಿದ್ದಾರೆ.
ಶ್ರೇಷ್ಠ ತಂದೆ ತಾಯಿ ಹೇಳಿದ ಮಾತಿನಂತೆ ತಾಂಡವ್ ತನ್ನ ತಾಯಿಯ ಸ್ವರೂಪವನ್ನ ಇಮ್ಯಾಜಿನ್ ಮಾಡಿಕೊಂಡಿದ್ದಾನೆ. ಈ ವೇಳೆ ಕುಸುಮಾ ತಾಂಡವ್ನನ್ನು ಕತ್ತಿನ ಪಟ್ಟಿ ಹಿಡಿದು ಹೊರಗೆ ತಳ್ಳಿದಂತೆ ದೃಶ್ಯ ಕಣ್ಮುಂದೆ ಬಂದಿದೆ.ಇದೇ ವೇಳೆ ಶ್ರೇಷ್ಠ ತಾಂಡವ್ ಅವರ ತಂದೆ ತಾಯಿಯನ್ನು ತೋರಿಸುತ್ತಾನೆ ಎಂದು ಹೇಳಿದ್ದಾಳೆ.


Click it and Unblock the Notifications











