kendasampige: ಅಬ್ಬಬ್ಬಾ ಚೇಂಜ್ ಆಗಿಬಿಟ್ರಾ ಸಾಧನಾ!? ಏನಿದು ಹೊಸ ವರಸೆ

By ಶೃತಿ ಹರೀಶ್ ಗೌಡ

ಹೂ ಮಾರುವ ಹುಡುಗಿಗೆ ಮನೆ ಜವಾಬ್ದಾರಿ ಮಾವ ವಹಿಸಿಬಿಟ್ಟರು ಎಂಬ ಕೋಪಕ್ಕೆ ಸಾಧನಾ ಮಹಡಿಯ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ನಂತರ ಸುಮನಾ ಹೋಗಿ ಬೇಡ ಅಕ್ಕ ದಯವಿಟ್ಟು ಕೆಳಗೆ ಇಳಿದು ಬನ್ನಿ ಎಂದಾಗ ಸಾಧನ ಕೇಳದೇ ಮಹಡಿಯಿಂದ ಜಿಗಿಯಲು ಹೋಗಿದ್ದಳು. ಕೊನೆಗೆ ಧೈರ್ಯ ಮಾಡಿದ ಸುಮನಾ ಜೋರಾಗಿ ಸಾಧನಾಳನ್ನು ಎಳೆದುಕೊಂಡು ಬಂದಿದ್ದಾಳೆ.

ನಿಮ್ಮ ಮಗಳ ಮುಖವನ್ನು ನೋಡಿ ಎಂದು ಸುಮನಾ, ಸಾಧನಾಗೆ ಹೇಳಿದ್ದಾಳೆ. ಈ ವೇಳೆ ಸಾಧನಾ ಸಾಯುವ ಯೋಚನೆ ಬದಲಾಯಿಸಿದ್ದಾಳೆ. ಮನೆ ಒಳಗೆ ಬಂದಂತಹ ಸಾಧನಾ ಮನೆಯವರೆಲ್ಲರ ಬಳಿ ಕ್ಷಮೆ ಕೇಳಿದ್ದಾಳೆ. ನಾನು ದುಡುಕಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಾರದಿತ್ತು, ಇದರಿಂದಾಗಿ ಮಾವನವರಿಗೆ ತುಂಬಾ ನೋವಾಗಿದೆ ಎಂದು ಬೆಣ್ಣೆಯಲ್ಲಿ ಕೂದಲು ತೆಗೆದ ರೀತಿ ಮಾತನಾಡಿದ್ದಾಳೆ.

Colors Kannada kendasampige serial Written Update on july 8th episode

ಇದಕ್ಕೆ ದೊಡ್ಡಣ್ಣ ನನಗೆ ಏನು ನೋವಾಗಲಿಲ್ಲ, ದಯವಿಟ್ಟು ನೀನು ಇಂತಹ ನಿರ್ಧಾರವನ್ನೆಲ್ಲ ತೆಗೆದುಕೊಳ್ಳಬೇಡ ಎಂದು ಸೊಸೆಗೆ ಹೇಳಿದ್ದಾರೆ. ನಂತರ ಸಾಧನಾ ಮನೆಯವರೆಲ್ಲರ ಬಳಿ ಕ್ಷಮೆ ಕೇಳಿ. ತೀರ್ಥ ಹೇಳಿದಂತೆ ನಾನು ಈ ವಿಷಯವನ್ನು ಲೈಟಾಗಿ ತೆಗೆದುಕೊಳ್ಳಬೇಕಾಗಿತ್ತು. ನಾನೇ ದೊಡ್ಡದು ಮಾಡಿ ನಿಮ್ಮೆಲ್ಲರಿಗೂ ನೋವು ಮಾಡಿಬಿಟ್ಟೆ. ನಾನು ಇನ್ನು ಒಂದು ಮುಖ್ಯವಾದ ಕೆಲಸವನ್ನು ಮಾಡಬೇಕು ಎಂದಿದ್ದಾಳೆ.

ಸುಮನಾಗೆ ಡಾಬು ನೀಡದ ಸಾಧನಾ

ಸಾಧನಾ ಮನೆಯವರೆಲ್ಲರೂ ಸಹ ಇಷ್ಟ ಪಡುವ ಕೆಲಸವನ್ನು ಮಾಡಿದ್ದಾಳೆ. ಡಾಬನ್ನು ತಂದು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಿದ್ದಾಳೆ. ‌ನಂತರ ಸುಮನಾಗೆ ಅರಿಶಿಣ ಕುಂಕುಮವನ್ನು ಹಚ್ಚಿದ್ದಾಳೆ. ನಂತರ ಹೂ ಮುಡಿಸಿ ಡಾಬನ್ನ ಸುಮನಾಳಿಗೆ ನೀಡಿದ್ದಾಳೆ. ಈ ವೇಳೆ ಸಾಧನಾ ಸುಮನಾಳ ಹಣೆಗೆ ಮುತ್ತನ್ನು ಇಟ್ಟಿದ್ದಾಳೆ.

Colors Kannada kendasampige serial Written Update on july 8th episode

ಇದೆಲ್ಲವನ್ನೂ ನೋಡುತ್ತಿರುವ ಮನೆಯವರಿಗೆ ಇದು ಕನಸೋ ಅಥವಾ ಭ್ರಮೆ ಎನೋ ಅನಿಸುತ್ತಿದೆ. ಇನ್ನೂ ಸುಮನಾ ಅಳುವಾಗ ನೀನು ಅಳಬಾರದು ನಗುತ್ತಾ ಇರಬೇಕು.‌ ನೀನು ನಗುತ್ತಾ ಇದ್ದರೆ ಇಡೀ ಮನೆಯೇ ನಗುತ್ತಾ ಇರುತ್ತದೆ ಎಂದು ಸುಮನಾಗೆ ಸಾಧನಾ ಹೇಳಿದ್ದಾಳೆ. ಈ ವೇಳೆ ತೀರ್ಥ ಇನ್ನೂ ಈ ಮನೆಯಲ್ಲಿ ಯಾವುದೇ ಸಮಸ್ಯೆ ಇರೋದಿಲ್ಲ ಎಂದಿದ್ದಾನೆ. ಸಾಧನಾ ಗಂಡನ ಕೈಯಲ್ಲೂ ಸಹ ಸಾಧನಾ ಬದಲಾಗಿರುವ ವಿಚಾರ ನಂಬಲು‌ ಆಗುತ್ತಿಲ್ಲ.

ಸಾಧನಾಳದ್ದು ನಾಟಕ ಎಂದ ವೀಕ್ಷಕರು

ಸುಮನಾ ಮದುವೆಯಾಗಿ ಮನೆಗೆ ಬಂದಾಗಿನಿಂದಲೂ ಸಹ ಸಾಧನ ಏನಾದರೂ ಒಂದು ಮಾಡಿ ಅವಳಿಗೆ ಅವಮಾನ ಮಾಡಬೇಕು ಎಂದು ಕಾಯುತ್ತಾ ಇದ್ದಳು.‌ ಇದರ ಜೊತೆಗೆ ಅವಳನ್ನು ಮನೆ ಬಿಟ್ಟು ಹೊರಗೆ ಕಳುಹಿಸಬೇಕು ಎಂದು ಹಠ ತೊಟ್ಟು ಎಷ್ಟೋ ಬಾರಿ ಮನೆಯಿಂದ ಹೊರಗೆ ಸಹ ಕಳುಹಿಸಿದ್ದಳು.‌ ಈಗ ಇದ್ದಕ್ಕಿದ್ದಂತೆ ಬದಲಾವಣೆ ಆಗಿರುವುದು ನಾಟಕ ಎಂದು ಧಾರಾವಾಹಿ ನೋಡುವ ವೀಕ್ಷಕರು ಹೇಳುತ್ತಿದ್ದಾರೆ.‌

ಸಾಧನಾ ಮನೆಯವರ ವಿಶ್ವಾಸ ಗಳಿಸಿದ ನಂತರ ಏನೋ ಒಂದು ಪ್ಲ್ಯಾನ್ ಮಾಡಿದ್ದಾಳೆ. ನಿಜವಾಗಿಯೂ ಸಾಧನಾ ಬದಲಾಗಿಲ್ಲ ಎಂದೆಲ್ಲಾ ಕಾಮೆಂಟ್ ಮಾಡಿ ತಮ್ಮ ಮನದಲ್ಲಿರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಯಾವಾಗಲೂ ದ್ವೇಷ ಮಾಡುವ ಸಾಧನಾ ನಿಜವಾಗಲೂ ಬದಲಾಗೋದಿಲ್ಲ ಎಂದೆಲ್ಲಾ ಹೇಳಿದ್ದಾರೆ. ಆದರೆ ಸಾಧನಾ ಮಾತ್ರ ತಾನು ಬದಲಾಗಿದ್ದೇನೆ ಎಂದು ಎಲ್ಲರನ್ನೂ ನಂಬಿಸುವ ನಾಟಕವನ್ನು ಅತ್ತೆ, ಮಾವ, ತೀರ್ಥ, ಸುಭಾಷ್ ಮುಂದೆ ಮಾಡಿದ್ದಾಳೆ.

ಸಾಧನಾ ಮೇಲೆ ಅನುಮಾನ

ಸಾಧನಾ ಜೊತೆಗೆ ಹುಷಾರಾಗಿ ನಡೆದುಕೊಳ್ಳುವಂತೆ ಸುಮನಾಗೆ ಅತ್ತೆ ತಿಳಿಸಿದ್ದಾರೆ. ನೀನು ಹುಷಾರಾಗಿ ಇರು ಸಾಧನಾ ಇಷ್ಟು ಬೇಗ ಬದಲಾಗುವ ಹುಡುಗಿ ಅಲ್ಲ ಇದರಲ್ಲಿ ಏನೋ‌ ಒಂದು ಸಂಚು ಅಡಗಿದೆ ಎಂದು ಸುಮನಾ ಬಳಿ ಅತ್ತೆ ಹೇಳಿದ್ದಾರೆ. ಅತ್ತೆಗೆ ಸಾಧನಾ ಮೇಲೆ ಯಾವುದೇ ನಂಬಿಕೆ ಇಲ್ಲ. ಸುಮನಾ ಸಹ ಅತ್ತೆ ಹೇಳಿದ್ದರ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ.

More from Filmibeat

English summary
Colors Kannada kendasampige serial Written Update on july 8th episode. here is details about Sadana's new plan. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X