Lakshmi Baramma: ಲಕ್ಷ್ಮಿಗೆ ಗೊತ್ತಾಯ್ತು ವೈಷ್ಣವ್- ಕೀರ್ತಿ ಪ್ರೀತಿ ವಿಷಯ: ಕಾವೇರಿ ನಡೆ ಏನು?

ಪೂಜಾ ಹನ್ನೊಂದು ಸಬ್ಜೆಕ್ಟ್ ಬಾಕಿ ಉಳಿಸಿಕೊಂಡಿರುವುದಕ್ಕೆ ಹಾಗೂ ಕಾಲೇಜಿಗೆ ಹೋಗದೆ ಅಲೆಯುತ್ತಿರುವುದಕ್ಕೆ ಲಕ್ಷ್ಮಿ ಒಳ್ಳೆ ಪಾಠ ಕಲಿಸಬೇಕು ಎಂದುಕೊಂಡಿದ್ದಾಳೆ. ಇದಕ್ಕೆ ಲಕ್ಷ್ಮಿ ಅಂಗಡಿಯಲ್ಲಿ ಇನ್ನು ಮುಂದೆ ನೀನೇ ಕುಳಿತುಕೊಳ್ಳಬೇಕು ಎಂದು ಹೇಳಿದ್ದಾಳೆ. ಪೂಜಾಗೆ ಅಂಗಡಿಯಲ್ಲಿ ಕುಳಿತುಕೊಳ್ಳುವುದು ಸ್ವಲ್ಪವೂ ಇಷ್ಟವಿಲ್ಲ. ತಂದೆ ಬಳಿ ಹೋಗಿ ಪೂಜಾ ಮಾಡಿರುವ ಘನಂದಾರಿ ಕೆಲಸದ ಬಗ್ಗೆ ಲಕ್ಷ್ಮಿ ಹೇಳಿದ್ದಾಳೆ.

ಇನ್ಮುಂದೆ ಅಂಗಡಿಯಲ್ಲಿ ಪೂಜಾ ಕುಳಿತುಕೊಳ್ಳುತ್ತಾಳೆ ಎಂದು ಹೇಳಿದ್ದಾಳೆ. ಅವಳು ಹನ್ನೊಂದು ಸಬ್ಜೆಕ್ಟ್‌ನಲ್ಲಿ ಫೇಲ್ ಆಗಿದ್ದು ಲಾಭ ಯಾವ ರೀತಿ ಮಾಡಬೇಕು,ನಾನು ಲಾಭ ಮಾಡಿ ಏನು ಮಾಡುತ್ತಿದ್ದೆ ಎಂಬುದನ್ನು ಅವಳು ಕಲಿತುಕೊಳ್ಳಲಿ ಎಂದು ಲಕ್ಷ್ಮಿ ಮುಖಕ್ಕೆ ಹೊಡೆದ ರೀತಿ ಹೇಳಿದ್ದಕ್ಕೆ ಪೂಜಾಗೆ ಶಾಕ್ ಆಗಿದೆ.

colors kannada Lakshmi Baramma serial Written Update on June 24th episode

ಲಕ್ಷ್ಮಿ ತೆಗೆದುಕೊಂಡ ನಿರ್ಧಾರವನ್ನ ಕೇಳಿ ಕಾವೇರಿಗೆ ಮಾತ್ರ ಸಿಕ್ಕಾಪಟ್ಟೆ ಖುಷಿಯಾಗಿದೆ. ನನ್ನ ಸೊಸೆ ಹೇಗೋ ಮನೆಯಲ್ಲಿ ಉಳಿದುಕೊಳ್ಳುತ್ತಾಳೆ ಎಂದು ಖುಷಿ ಪಟ್ಟಿದ್ದಾಳೆ. ಆದರೆ ಪೂಜಾ ಅದಕ್ಕೂ ಕೊಕ್ಕೆಯನ್ನ ಹಾಕಿದ್ದಾಳೆ. ಕೆಂದರೆ ಅಂಗಡಿಯ ಓನರ್ ಲಕ್ಷ್ಮಿ ಕುಳಿತುಕೊಂಡರೆ ಮಾತ್ರ ಅಂಗಡಿ ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದ್ದರು. ಈ ಮಾತನ್ನ ಲಕ್ಷ್ಮಿ ಬಳಿ ಹೇಳಿ ಅಡ್ಡ ಕತ್ತರಿಗೆ ಸಿಲುಕಿಸಿದ್ದಾಳೆ.

colors kannada Lakshmi Baramma serial Written Update on June 24th episode

ಲಕ್ಷ್ಮಿಗೆ ಐಡಿಯಾ ಕೊಟ್ಟ ಕಾವೇರಿ

ಯಾವಾಗ ಪೂಜಾ ನೀನೆ ಅಂಗಡಿಯಲ್ಲಿ ಕುಳಿತುಕೊಳ್ಳಬೇಕು ಎಂದಳೋ ಆ ವೇ ಕಾವೇರಿಗೆ ಆ ಕ್ಷಣವೇ ಒಂದು ಉಪಾಯ ಹೊಳೆದಿದೆ. ಅಂಗಡಿ ಮಾಲೀಕರನ್ನು ಮನೆಗೆ ಬರ ಹೇಳುವಂತೆ ತಿಳಿಸಿದ್ದಾಳೆ. ಮನೆಗೆ ಬಂದ ಅಂಗಡಿಯ ಮಾಲೀಕರ ಮಗನಿಗೆ ನಾನು ನಿಮ್ಮ ಅಂಗಡಿಯನ್ನ ಖರೀದಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಇದೇ ವೇಳೆ ಅಡ್ಡಬಾಯಿ ಹಾಕಿದ ಪೂಜಾ, ಲಕ್ಷ್ಮಿ ಮಹಾನ್ ಸ್ವಾಭಿಮಾನಿ ಎಂದು ಹೇಳಿದ್ದಾಳೆ.

ಕಾವೇರಿ, ಲಕ್ಷ್ಮಿಯ ಬಳಿ ನೀನು ನನ್ನ ಬಳಿ ಸಾಲವನ್ನ ತೆಗೆದುಕೋ ನಿನಗೆ ನಿನ್ನ ಅಪ್ಪನ ಅಂಗಡಿ ಉಳಿದುಕೊಳ್ಳುತ್ತದೆ. ಅಂಗಡಿಯ ಮೇಲೆ ಯಾರು ಬೇಕಾದರೂ ಕುಳಿತುಕೊಳ್ಳಬಹುದು, ಹಾಗೆ ಬುದ್ಧಿ ಕಲಿಸಬಹುದು ಎಂದು ಹೇಳಿದ್ದಾಳೆ. ಅತ್ತೆಯ ಮಾತಿಗೆ ಲಕ್ಷ್ಮಿ ತಲೆ ಆಡಿಸಿದ್ದಾಳೆ. ಇದು ಪೂಜಾಗೆ ನುಂಗಲಾಗದ ತುತ್ತಾಗಿದೆ. ಪೂಜಾ ಮಾತ್ರ ಲಕ್ಷ್ಮಿ ಹಾಗೂ ಕಾವೇರಿಯ ವಿರುದ್ಧ ಹರಿಹಾಯ್ದಿದ್ದಾಳೆ.

ಗೊಂದಲದ ನಡುವೆ ವೈಷ್ಣವ್

ವೈಷ್ಣವ್‌ನ ಮನಸ್ಸು ಗೊಂದಲದ ಗೂಡಾಗಿದೆ. ಕೀರ್ತಿ ಯಾಕೆ ಪದೇ ಪದೇ ಅಮ್ಮನ ಹೆಸರನ್ನು ತರುತ್ತಿದ್ದಾಳೆ, ಎಂಬುದನ್ನು ನಾನು ತಿಳಿದುಕೊಳ್ಳಬೇಕು ಎಂದುಕೊಂಡಿದ್ದಾನೆ. ಮನೆಗೆ ಬಂದ ವೈಷ್ಣವ್ ತನ್ನ ಅಮ್ಮನ ಬಗ್ಗೆ ಕೇಳಿದ್ದಾನೆ. ಇದಕ್ಕೆ ಅಮ್ಮ ಮನೆಯಲ್ಲಿ ಇಲ್ಲ, ಲಕ್ಷ್ಮಿ ಹಾಗೂ ಕಾವೇರಿ ಇಬ್ಬರೂ ಹೊರಗಡೆ ಹೋಗಿದ್ದಾರೆ ಎಂಬುದನ್ನು ಮನೆಯವರು ತಿಳಿಸಿದ್ದಾರೆ.

ಅಮ್ಮ ಬಂದ ತಕ್ಷಣವೇ ವಿಷಯ ತಿಳಿದುಕೊಳ್ಳಬೇಕು ಎಂದು ವೈಷ್ಣವ್‌ ಹಂಬಲಿಸುತ್ತಿದ್ದಾನೆ. ನನ್ನ ಮದುವೆಯ ಹಿಂದೆ ಎಷ್ಟೆಲ್ಲ ಸತ್ಯಗಳು ಅಡಗಿವೆ ಎಂಬುವುದು ನನಗೆ ಗೊತ್ತಾಗಬೇಕು ಎಂದು ವೈಷ್ಣವ್ ಅಂದುಕೊಂಡಿದ್ದಾನೆ. ಪದೇ ಪದೇ ಕೀರ್ತಿ ಯಾಕೆ ಎಲ್ಲಾ ನಿಮ್ಮಮ್ಮನಿಗೆ ಗೊತ್ತು ಎಂದು ಹೇಳುತ್ತಾಳೆ, ಅದರ ಹಿಂದಿರುವ ಸತ್ಯ ಏನು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ವೈಷ್ಣವ್ ಅಂದುಕೊಂಡಿದ್ದಾನೆ.

ಲಕ್ಷ್ಮಿಗೆ ವೈಷ್ಣವ್ - ಕೀರ್ತಿ ಪ್ರೀತಿ ಗೊತ್ತಾಯ್ತು

ಯಾವಾಗ ಕಾವೇರಿ ಅಂಗಡಿಯನ್ನು ಖರೀದಿ ಮಾಡುತ್ತಿದ್ದಾಳೆ ಎಂದು ತಿಳಿಯುತ್ತೋ ಆಗಲೇ ಪೂಜಾ ಪಿತ್ತ ನೆಟ್ಟಿಗೇರಿದೆ. ಇದಕ್ಕೆ ಕಾವೇರಿ ಮೇಲೆ ವಾಗ್ದಾಳಿ ನಡೆಸಿದ್ದಾಳೆ. ನಿಮ್ಮ ತಪ್ಪನ್ನ ಮುಚ್ಚಿಕೊಳ್ಳಲು ಈ ದಡ್ಡಿ ಲಕ್ಷ್ಮಿಯನ್ನು ಮದುವೆ ಮಾಡಿಕೊಂಡ್ರಿ ಅಂದಿದ್ದಾಳೆ. ಅಷ್ಟೇ ಅಲ್ಲದೇ ನಮ್ಮಂತ ಬಡವರ ಮನೆ ಕಡೆ ನೀವು ತಿರುಗಿ ಸಹ ನೋಡಲ್ಲ, ಆದರೂ ಈ ಲಕ್ಷ್ಮಿನ ಮದುವೆ ಮಾಡಿಕೊಂಡು ವೈಷ್ಣವ್ ಮಾಡುತ್ತಿರುವ ವಿಚಾರವನ್ನು ಮುಚ್ಚಿ ಇಟ್ಟಿರಿ ಎಂದು ಹೇಳಿದ್ದಾಳೆ.

ವೈಷ್ಣವ್‌ ತನ್ನ ಮಾಜಿ ಪ್ರೇಯಸಿ ಕೀರ್ತಿ ಜೊತೆಯಲ್ಲಿ ಓಡಾಡುತ್ತಿದ್ದಾನೆ ಎಂದು ಹೇಳಿದ್ದಾಳೆ. ಈ ಮಾತುಗಳನ್ನೆಲ್ಲ ಕೇಳುತ್ತಿರುವ ಲಕ್ಷ್ಮಿಗೆ ಮುಜುಗರವಾಗಿದೆ. ನೀನು ಬಾಯಿಗೆ ಬಂದಂತೆ ಏನೇನೋ ಮಾತನಾಡಬೇಡ ಎಂದು ಹೇಳಿದ್ದಾಳೆ. ನನ್ನ ಅತ್ತೆಯ ಬಗ್ಗೆ ಮಾತನಾಡಬೇಡ ಎಂದಾಗ, ನಿನ್ನ ಅತ್ತೆ ಮಾಡಿರುವ ಕೆಲಸವನ್ನು ನೀನು ತಿಳಿದುಕೊಂಡರೆ ಅವರಿಗೂ ಸರಿಯಾಗಿ ಬೈಯುತ್ತಿಯಾ ಎಂದು ಹೇಳಿದ್ದಾಳೆ.

ಕೊನೆಗೂ ವೈಷ್ಣವ್ ಹಾಗೂ ಕೀರ್ತಿ ಇಬ್ಬರೂ ಪ್ರೀತಿ ಮಾಡುತ್ತಿದ್ದರು ಎಂಬ ವಿಷಯ ಲಕ್ಷ್ಮಿಗೆ ಗೊತ್ತಾಗಿದೆ. ವೈಷ್ಣವ್ ಮದುವೆ ಮಂಟಪದಿಂದ ಓಡಿ ಹೋಗಿದ್ದರು, ಅವರನ್ನು ವಾಪಸ್ ಕರೆದುಕೊಂಡು ಬಂದು ನಿನಗೆ ಮದುವೆ ಮಾಡಿದ್ದಾರೆ ಎಂದು ಪೂಜಾ, ಲಕ್ಷ್ಮೀಗೆ ಹೇಳಿದ್ದಾಳೆ.

More from Filmibeat

English summary
colors kannada Lakshmi Baramma serial Written Update on June 24th episode. Here detials about Lakshmi accepted kaveri offer for pooja, pooja tells the truth to Lakshmi, kaveri shocked. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X