Ramachari: ಇವತ್ತಾದರೂ ಊಟಕ್ಕೆ ಮಗ-ಸೊಸೆಯನ್ನು ಕರೆಯುತ್ತಾರಾ ಆಚಾರ್ಯರು?

By ಶೃತಿ ಹರೀಶ್ ಗೌಡ

ರಾಮಾಚಾರಿ ತನ್ನ ತಂದೆಯ ಕ್ಷಮೆಗಾಗಿ ಊಟವನ್ನು ಬಿಟ್ಟು ಉಪವಾಸವನ್ನು ಮಾಡುತ್ತಿದ್ದಾನೆ. ಮಗ ಹಸುವಿನಿಂದ ಇರುವುದನ್ನು ನೋಡಿದ ಜಾನಕಿ ಚಾರು ಕೈಯಲ್ಲಿ ಊಟವನ್ನು ಕೊಟ್ಟು ಇಬ್ಬರು ಊಟ ಮಾಡಿ ಎಂದಿದ್ದಾಳೆ. ಈ ವಿಷಯವನ್ನು ವೈಶಾಖ ನಾರಾಯಣ ಆಚಾರ್ಯರ ಬಳಿ ಹೇಳಿದ್ದಾಳೆ . ಇದಕ್ಕಾಗಿ ಜಾನಕಿ ಮೇಲು ನಾರಾಯಣ ಆಚಾರ್ಯರು ಬೇಸರವನ್ನ ಮಾಡಿಕೊಂಡಿದ್ದಾರೆ.

ಚಾರು ಸಹ ತನ್ನ ಗಂಡ ಊಟ ಮಾಡಿಲ್ಲ ಎಂದು ತಾನು ಊಟ ಮಾಡಿಲ್ಲ ಹಸುವಿನಿಂದ ಒದ್ದಾಡುತ್ತಿದ್ದಾಳೆ. ಹೇಗಾದರೂ ಮಾಡಿ ನನ್ನ ಗಂಡ ಮನೆಯಲ್ಲಿ ಊಟ ಮಾಡುವ ರೀತಿ ಮಾಡಬೇಕು ಇಲ್ಲದೆ ಇದ್ದರೆ ನಾವಿಬ್ಬರು ಉಪವಾಸದಿಂದಲೇ ಇರಬೇಕಾಗುತ್ತದೆ ಎಂದು ಪ್ಲಾನ್ ಮಾಡುತ್ತಿದ್ದಾಳೆ. ಜಾನಕಿ ಮಾತ್ರ ತನ್ನ ಮಗ ಊಟವನ್ನು ಮಾಡದೆ ಉಪವಾಸದಿಂದ ಇದ್ದಾನೆ ಎಂದು ಕೊರಗುತ್ತಾ ಇದ್ದಾಳೆ.

Colors Kannada Ramachari serial Written Update on july 13th episode

ಅಜ್ಜಿಯು ಸಹ ನನ್ನ ಮೊಮ್ಮಗ ತಂದೆಗೆ ಪ್ರೀತಿಯನ್ನ ತೋರಿಸುತ್ತಾ ಇದ್ದನು. ಈಗ ನೋಡಿದರೆ ನನ್ನ ಮೊಮ್ಮಗ ಯಾರನ್ನು ಕಟ್ಟಿಕೊಂಡು ಬಂದು ಅವನು ಸಹ ಕಷ್ಟವನ್ನು ಅನುಭವಿಸುತ್ತಾ ಇದ್ದಾನೆ ಎಂದು ಕೊರಗುತ್ತಿದ್ದಾರೆ. ಯಾವಾಗ ಎಲ್ಲಾ ಸರಿ ಹೋಗಿ ರಾಮಾಚಾರಿ ಊಟ ಮಾಡುತ್ತಾನೋ ಎಂದು ಕಾಯುತ್ತಾ ಇದ್ದಾರೆ. ಆದರೆ ವೈಶಾಖ ಮಾತ್ರ ಇವರಿಗೆ ಸರಿಯಾಗಿ ಆಗಿದೆ ಎಂದು ಖುಷಿ ಪಡುತ್ತಾ ಇದ್ದಾಳೆ.

ಶಾವಿಗೆ ಪಾಯಸವನ್ನು ಮಾಡಿರುವ ವೈಶಾಖ ಅದನ್ನ ಚಾರು ಮುಂದೆ ತಂದು ತಿನ್ನುತ್ತಾ ಇದ್ದಾಳೆ. ಮೊದಲೇ ಹೊಟ್ಟೆ ಹಸುವಿನಿಂದ ಬಳಲುತ್ತಿರುವ ಚಾರುಗೆ ವೈಶಾಖ ಪಾಯಸವನ್ನು ತಿನ್ನುತ್ತಿದ್ದರೆ ಬಾಯಿ ನೀರು ಬಂದಿದೆ. ನೋಡೇ ಪಾಯಸ ಎಷ್ಟು ಚೆನ್ನಾಗಿ ಇದೆ ಗಮಗಮ ಎಂದು ವಾಸನೆ ಬರುತ್ತಿದೆ ಎಂದು ವೈಶಾಖ ಚಾರುಗೆ ವಿವರಣೆ ನೀಡುತ್ತಾ ತಿನ್ನುತ್ತಾ ಇದ್ದಾಳೆ. ನಿಮಗಂತೂ ಈ ಪಾಯಸವನ್ನು ತಿನ್ನುವ ಅದೃಷ್ಟ ಇಲ್ಲ ಯಾಕೆಂದರೆ ಮಾವ ಹೇಳಿದ್ದಾರಲ್ಲ.

ನಿಮಗೆ ಈ ಮನೆಯಲ್ಲಿ ಊಟ ಮಾಡುವ ಯೋಗ್ಯತೆ ಇಲ್ಲ ಎಂದು ನಿಮಗೆ ಹಸಿವೆಯಿಂದ ಸಾಯುವುದೇ ಗಟ್ಟಿ ಎಂದಿದ್ದಾಳೆ. ಹೇಗಾದರೂ ವಾಸನೆಯನ್ನು ಕುಡಿದುಕೋ ಅಪ್ಪಿ ತಪ್ಪಿ ಅಡುಗೆ ಮನೆಗೆ ಹೋಗಿ ಕದ್ದಿ ಪಾಯಸವನ್ನು ತಿಂದು ಬಿಟ್ಟಿಯಾ ಎಂದೆಲ್ಲ ಚಾರುಗೆ ವೈಶಾಖ ಅವಮಾನ ಮಾಡಿದ್ದಾಳೆ.ಈ ಮಾತನ್ನು ಕೇಳಿದ ಚಾರುಗೆ ತುಂಬಾ ಹಠ ಬಂದಿದ್ದು ಮಾವನವರ ಬಳಿ ಮಾತನಾಡಲೇಬೇಕು ಎಂದು ನಿರ್ಧಾರ ಮಾಡಿದ್ದಾಳೆ.

ಚಾರುಗೆ ಸಾನ್ವಿ ಕರೆಯನ್ನು ಮಾಡಿದ್ದಾಳೆ ಈ ವೇಳೆ ಮನೆಯಲ್ಲಿ ರಾಮಾಚಾರಿ ಹಾಗೂ ನಾನು ಇಬ್ಬರೂ ಸಹ ಉಪವಾಸ ಇದ್ದೇವೆ ಎಂದು ಸಾನ್ವಿಯ ಬಳಿ ಚಾರು ಹೇಳಿದ್ದಾಳೆ. ಏನು ನೀನು ಉಪವಾಸ ಇದ್ದೀಯ ಅದೆಷ್ಟು ರೆಸ್ಟೋರೆಂಟ್ ಗಳಲ್ಲಿ ಅಡಂಬರವಾಗಿ ಊಟ ಮಾಡುತ್ತಿದ್ದೆ. ನಿಜವಾಗಿಯೂ ನಿನಗೆ ಏನಾಗಿದೆ ಎಂದೆಲ್ಲ ಕೇಳಿದ್ದಾಳೆ.

ಈ ವೇಳೆ ಜಾರು ನಾನು ಮನೆಯ ಒಳಗೆ ಬರಲು ನ್ಯಾಯ ಪಂಚಾಯಿತಿ ಮಾಡಿಸಿದೆ ಎಂದು ಮಾವ ರಾಮಾಚಾರಿ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂದು ಸಾನ್ವಿಯಾ ಬಳಿ ಹೇಳಿದ್ದಾಳೆ. ಇದೇ ವೇಳೆ ಮಾತನಾಡುತ್ತಾ ಇರು ನನಗೆ ಒಂದು ಮುಖ್ಯವಾದ ಕೆಲಸವಿದೆ ಎಂದು ನಾರಾಯಣ್ ಆಚಾರ್ಯರ ಮುಂದೆ ಹೋಗಿ ಚಾರು ನಿಂತಿದ್ದಾಳೆ.

ಮಾವನ ಬಳಿ ಹೋದ ಚಾರು ಮನೆಯಲ್ಲಿರುವವರು ಉಪವಾಸ ಇದ್ದಾರೆ ನೀವು ಹೊರಗಿನ ಜನಕ್ಕೆ ಊಟ ಹಾಕುತ್ತಿದ್ದೀರಾ. ನಾವು ಉಪವಾಸ ಇದ್ದರೆ ನಿಮಗೆ ಇಷ್ಟನಾ ಮಾವ ನಮ್ಮ ಉಪವಾಸದಿಂದ ನಿಮಗೆ ನೋವಾಗುತ್ತದೆ ಎಂದು ಕಣ್ಣೀರು ಹಾಕಿದ್ದಾಳೆ. ಚಾರು ಮಾತನಾಡಿದ ನಾರಾಯಣ ಆಚಾರ್ಯರಿಗೆ ನನ್ನಿಂದ ಯಾಕೆ ಇವರಿಬ್ಬರೂ ಉಪವಾಸ ಇರಬೇಕು ಎಂದು ತಮ್ಮ ಮನಸ್ಸನ್ನ ಬದಲಾಯಿಸಿಕೊಂಡಿದ್ದಾರೆ.

ಎಲ್ಲರೂ ಊಟಕ್ಕೆ ಕುಳಿತ ವೇಳೆ ಜಾನಕಿಗೆ ರಾಮಾಚಾರಿ ಹಾಗೂ ಚಾರುವನ್ನು ಊಟಕ್ಕೆ ಕರೆಯುವಂತೆ ಹೇಳಿದ್ದಾರೆ. ನಾರಾಯಣ ಆಚಾರ್ಯರ ಮಾತುಗಳನ್ನು ಕೇಳಿದ ಜಾನಕಿಗೆ ತುಂಬಾ ಖುಷಿಯಾದರೆ, ವೈಶಾಖಗೆ ಮಾತ್ರ ಮಾವನ ಬದಲಾದ ವರ್ತನೆ ನೋಡಿ ಶಾಕ್ ಆಗಿದೆ. ಮನೆಯಲ್ಲಿ ನಾವು ಊಟ ಮಾಡಿ ಅವರಿಬ್ಬರು ಉಪವಾಸವಿರುವುದು ಯಾಕೋ ಸರಿ ಕಾಣೋದಿಲ್ಲ ಎಂದು ಆಚಾರ್ಯರು ಜಾನಕಿ ಬಳಿ ಹೇಳಿದ್ದಾರೆ.

More from Filmibeat

English summary
Colors Kannada serial Ramachari here details about charu decided to talking narayana achar, vaishaka insulting charu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X