Ramachari: ರಾಮಾಚಾರಿ ಪಾಲಿಗೆ ಶಾಶ್ವತವಾಗಿ ಮುಚ್ಚಿ ಹೋದ ಮನೆ ಬಾಗಿಲು: ಚಾರು ಪ್ಲ್ಯಾನ್ ಏನು?
ರಾಮಾಚಾರಿ ಕಲ್ಯಾಣ ಮಂಟಪದಿಂದ ಮನೆಗೆ ಬಂದಿದ್ದಾನೆ ಏಕೆಂದರೆ ಮನೆಯಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ನಾರಾಯಣ ಆಚಾರ್ಯರು ಮನೆಗೆ ಬಂದವರೇ ಬಿಂದಿಗೆಯಲ್ಲಿದ್ದ ನೀರನ್ನೆಲ್ಲ ಸುರಿದುಕೊಂಡು ನನ್ನ ಪಾಲಿಗೆ ನನ್ನ ಮಗ ಸತ್ತು ಹೋಗಿದ್ದಾನೆ ಎಂದು ಬಿಂದಿಗೆಯಲ್ಲಿದ್ದ ನೀರನ್ನೆಲ್ಲ ಸುರಿದುಕೊಂಡಿದ್ದಾರೆ. ಇದನ್ನೆಲ್ಲಾ ನೋಡುತ್ತಿರುವ ಜಾನಕಿಗೆ ತನ್ನ ಹೃದಯವೇ ಕಿತ್ತು ಬಂದಂತಾಗಿದೆ.
ಈ ಕಡೆ ನಾರಾಯಣ ಆಚಾರ್ಯರು ಕೋದಂಡನಿಗೆ ನೀನೇ ಎಲ್ಲಾ ನಿನ್ನನ್ನ ನಾನು ತಪ್ಪಾಗಿ ತಿಳಿದುಕೊಂಡಿದ್ದೆ ದಯವಿಟ್ಟು ನನ್ನನ್ನು ಇನ್ನು ಮುಂದೆ ನೀನೇ ಉದ್ಧಾರ ಮಾಡಬೇಕು ಎಂದು ಅಂದಿದ್ದಾರೆ. ಇದೆಲ್ಲವನ್ನು ಕೇಳಿಸಿಕೊಳ್ಳುತ್ತಿರುವ ವೈಶಾಖಾಗೆ ಮಾತ್ರ ತುಂಬಾನೇ ಖುಷಿಯಾಗಿದೆ. ಇನ್ನು ವೈಶಾಖ ಬಳಿ ಬಂದ ನಾರಾಯಣ ಆಚಾರ್ಯರು ಕೈಮುಗಿದು ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಮ್ಮ ಎಂದಿದ್ದಾರೆ.

ನಿಮ್ಮನ್ನೆಲ್ಲ ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ ಈಗ ನನ್ನ ಕಣ್ಣಿಗೆ ಕಟ್ಟಿದ್ದ ಪೊರೆಯಲ್ಲ ಕಳಚಿ ಬಿದ್ದಿದೆ ಅದರಂತೆ ಮಗ ಎಂದುಕೊಂಡಿದ್ದ ಮಾಡಿದ್ದ ಘನಂದಾರಿ ಕೆಲಸ ಸಹ ತಿಳಿದಿದೆ ಎಂದು ಕೈ ಮುಗಿದಿದ್ದಾರೆ. ನಾನು ಸತ್ತು ಹೋದಾಗ ಅವನೇನಾದರೂ ಬಂದರೆ ಅಲ್ಲಿಂದ ಮೊದಲು ಓಡಿಸಿ ನಂತರ ನನ್ನ ಜೊತೆಗೆ ನೀನು ಬೆಂಕಿಯನ್ನು ಇಡಬೇಕು ಎಂದು ನಾರಾಯಣ ಆಚಾರ್ಯರು ಕೋದಂಡನ ಬಳಿ ಹೇಳುತ್ತಿದ್ದಾರೆ ಇದೆಲ್ಲವನ್ನು ಕೇಳಿಸಿಕೊಳ್ಳುತ್ತಿರುವ ಮನೆಯವರಿಗೆ ಕಣ್ಣೀರು ಬರುತ್ತಿದೆ.
ರಾಮಾಚಾರಿಯ ಪಾಲಿಗೆ ಈಗ ಮನೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಅಪ್ಪ ಎಂದು ಕರೆದಿದ್ದಕ್ಕೆ ನಾರಾಯಣ ಆಚಾರ್ಯರು ಈ ದೆವ್ವವನ್ನ ಮನೆಯೊಳಗೆ ಬಿಟ್ಟು ಕೊಳ್ಳಬೇಡ ಮೊದಲು ಬಾಗಿಲನ್ನು ಮುಚ್ಚು ಎಂದು ಕೋದಂಡನಿಗೆ ಹೇಳಿದ್ದಾರೆ. ಕೋದಂಡನಿಗೆ ಹೇಳಿ ಅಲ್ಲಿಂದ ತೆರಳಿದ್ದಾರೆ ದ್ರವೀನ ಆಚಾರ್ಯರು ಈ ಮಾತನ್ನ ಹೇಳಲಿ ಎಂದು ಕಾದಿದ್ದ ವೈಶಾಖ ಓಡಿಹೋಗಿ ರಾಮಾಚಾರಿಯ ಮುಖಕ್ಕೆ ಹೊಡೆದಂತೆ ಬಾಗಿಲನ್ನು ಹಾಕಿಕೊಂಡು ಬಂದಿದ್ದಾಳೆ.
ಇನ್ನು ರಾಮಾಚಾರಿ ಏನೂ ತಿಂದಿಲ್ಲ ಎಂಬುದನ್ನ ತಿಳಿದುಕೊಂಡ ಜಾನಕಿ ಮಗನಿಗೆ ಊಟವನ್ನು ಹಾಕಿ ಕೊಡಬೇಕು ಎಂದು ಹೇಳುತ್ತಿದ್ದಾಳೆ. ಅಲ್ಲಿಗೆ ಬಂದಂತಹ ವೈಶಾಖ ಮಾವನವರು ಹೇಳಿದ್ದು ನಿಮಗೆ ಕೇಳಿಸಲಿಲ್ವಾ ನಮ್ಮ ಮನೆಗೆ ಅನ್ಯಾಯ ಮಾಡಿದವನಿಗೆ ಊಟವನ್ನು ಹಾಕಿ ಕೊಡಬೇಕು ಎನ್ನುತ್ತಿದ್ದೀರಾ ಎಂದು ಬೈದಿದ್ದಾಳೆ. ನಾಳೆ ದೀಪಾ ಮನೆಯವರು ಬಂದು ಕೇಳಿದರೆ ಏನು ಹೇಳುವುದು ಎಂಬುದನ್ನು ಅಜ್ಜಿ ಜಾನಕಿ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಎಲ್ಲವನ್ನು ನೆನೆಸಿಕೊಂಡ ಜಾನಕಿಗೆ ಬೆಟ್ಟವೇ ತಲೆಯ ಮೇಲೆ ಬಿದ್ದಂತಾಗಿದೆ.
ಮಗಳು ಮಾಡಿದ ಕೆಲಸದಿಂದಾಗಿ ತಲೆ ತಗ್ಗಿಸುವ ಪರಿಸ್ಥಿತಿ ಜೈ ಶಂಕರ್ ಗೆ ಬಂದಿದ್ದು ಕುಡಿಯುತ್ತಾ ಕುಳಿತಿದ್ದಾನೆ. ಅಲ್ಲಿಗೆ ಬಂದಂತಹ ಮಾನ್ಯತಾ ಕುಡಿಯುವುದನ್ನು ನಿಲ್ಲಿಸಿ ಪ್ರಕಾಶ್ ಬಾನೇರಿಯ ಮನವೊಲಿಸು ಎಂದು ಕೇಳಿದ್ದಾಳೆ. ಇದಕ್ಕೆ ಜಯಶಂಕರ್ ಕೋಪ ಮಾಡಿಕೊಂಡು ಎಲ್ಲರ ಮುಂದೆ ಮಾನ ಮರ್ಯಾದೆ ಹೋಯಿತು ಅವನು ಮತ್ತೆ ಒಪ್ಪಿಕೊಳ್ಳುತ್ತಾನ ಎಂದು ಗುಡುಗಿದ್ದಾನೆ.
ಈ ವೇಳೆ ಚಾರು ಹಾಗೂ ರಾಮಾಚಾರಿಯ ಮೇಲೆ ಸಂಶಯ ಬಂದು ನಾನೇ ಜಯಶಂಕರ್ ಗೆ ಮದುವೆಯನ್ನೇ ಮಾಡಿಕೊಳ್ಳಿ ಎಂದು ಹೇಳಿದೆ ಎಂಬುದನ್ನು ಮಾನ್ಯತಾ ಹೇಳಿದ್ದಾಳೆ. ಹಾಗಾದರೆ ಅಲ್ಲಿ ನಡೆದ ಘಟನೆಗಳಿಗೆ ನೀನೇ ಕಾರಣ ನೀನು ನನ್ನ ಬಳಿ ಹೇಳಿದ್ದರೆ ನಾನು ಹೇಗಾದರೂ ಮಾಡಿ ಎಂಗೇಜ್ಮೆಂಟನ್ನ ನಿಲ್ಲಿಸುತ್ತಿದ್ದೆ ಹೋಗುವ ಮಾನವಾದರೂ ಉಳಿಯುತ್ತಿತ್ತು ಎಂದು ಹೇಳಿ ಚಾರುವನ್ನ ಮೊದಲು ನಾರಾಯಣ ಆಚಾರ್ಯರ ಮನೆಗೆ ಬಿಟ್ಟು ಬರಬೇಕು ಎಂದು ಜೈ ಶಂಕರ್ ಹೇಳಿದ್ದಾರೆ.
ಎಲ್ಲರಿಗೂ ಮದುವೆಯಾಗಿರುವ ವಿಷಯ ತಿಳಿದುಹೋಗಿದೆ ವೈಶಾಖ ಒಂದು ರೀತಿಯಲ್ಲಿ ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ್ದು ಒಳ್ಳೆಯದೇ ಆಗಿದೆ ಎಂದು ಚಾರು ಖುಷಿಯಾಗಿ ಸಾನ್ವಿ ಬಳಿಯಲ್ಲಿ ಹೇಳುತ್ತಿದ್ದಾಳೆ. ಇನ್ಮುಂದೆ ಏನಿದ್ದರೂ ನಾನು ಆ ಮನೆಯ ಸೊಸೆ ಎಂದು ಸಾನ್ವಿ ಬಳಿ ಹೇಳುತ್ತಿದ್ದಾಳೆ ಆದರೆ ಅಲ್ಲಿ ರಾಮಾಚಾರಿ ನೋವಿನಿಂದ ನೆರಳಾಡುತ್ತಿದ್ದಾನೆ.


Click it and Unblock the Notifications











