Ramachari: ದೀಪಾ ಮನೆಯವರಿಗೆ ತಿಳಿಯಿತು ರಾಮಾಚಾರಿ-ಚಾರು ಮದುವೆಯ ಸತ್ಯ
ರಾಮಾಚಾರಿಗೆ ಮುರಾರಿ ಊಟವನ್ನ ತಂದಿದ್ದಾನೆ ಬೆಳಗ್ಗೆಯಿಂದನು ಏನು ಸಹ ತಿಂದಿಲ್ಲ ದಯವಿಟ್ಟು ಸ್ವಲ್ಪ ಊಟವನ್ನ ಮಾಡು ಎಂದು ಕೇಳಿಕೊಳ್ಳುತ್ತಿದ್ದಾನೆ ಆದರೆ ಮುರಾರಿಗೆ ನನ್ನ ಮನೆಯವರು ನನ್ನನ್ನ ಒಪ್ಪಿಕೊಳ್ಳುವ ತನಕ ನಾನು ಊಟವನ್ನು ಮಾಡುವುದಿಲ್ಲ ಎಂದು ರಾಮಾಚಾರಿ ಹೇಳುತ್ತಿದ್ದಾನೆ. ನೀನು ಇದೇ ರೀತಿ ಇದ್ದರೆ ನಿನ್ನ ಆರೋಗ್ಯ ಹಾಳಾಗುತ್ತಿದೆ ಎಂದು ಮುರಾರಿ ಹೇಳಿದರು ಸಹ ರಾಮಾಚಾರಿ ಕೇಳುತ್ತಿಲ್ಲ.
ಇಲ್ಲಿ ಸತ್ಯಕ್ಕೆ ಬೆಲೆ ಇಲ್ಲ ಯಾರು ಸಹ ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಏನಾಯಿತು ಎಂದು ಕೇಳಿಸಿಕೊಂಡರೆ ನಾನು ನಡೆದ ಸತ್ಯವನ್ನು ಮನೆಯವರ ಮುಂದೆ ಹೇಳಬಹುದು ಎಂದು ರಾಮಾಚಾರಿ ಮುರಾರಿ ಬಳಿ ಹೇಳುತ್ತಿದ್ದಾನೆ. ಈ ಕಡೆ ದೀಪ ಮನೆಯವರು ನಾರಾಯಣ ಆಚಾರ್ಯರ ಮನೆಗೆ ಎಂಗೇಜ್ಮೆಂಟ್ ಶಾಸ್ತ್ರವನ್ನ ಮಾಡಿಕೊಡಿ ಎಂದು ಕೇಳಲು ಬರುತ್ತಿದ್ದಾರೆ. ದೀಪಾ ಗೆ ನೂರಾರು ಕನಸುಗಳು ಇದ್ದು ನಾನು ಸಹ ರಾಮಾಚಾರಿ ಮಾವನನ್ನ ನೋಡಲು ಬರುತ್ತೇನೆ ಎಂದು ಹಠ ಮಾಡಿ ತಾನು ಸಹ ಹೊರಡಲು ಸಿದ್ಧವಾಗಿದ್ದಾಳೆ.

ನಾರಾಯಣ ಆಚಾರ್ಯರ ಮನೆಗೆ ಬಂದ ಪದ್ಮನಾಭ ಕುಟುಂಬದವರು ಮೊದಲು ರಾಮಾಚಾರಿಯನ್ನ ನೋಡಿ ಏನು ಮಾಡಲು ಹೋಗುತ್ತಿದ್ದೀಯಾ ಎಂದು ಕೇಳಿದ್ದಾರೆ ದೀಪಾ ಸಹ ಮಾವ ಎಂದು ಪ್ರೀತಿಯಿಂದ ಮಾತನಾಡಿಸಿದ್ದಾಳೆ. ಇನ್ನು ರಾಮಾಚಾರಿಗೆ ದೀಪ ಮನೆಯವರು ಬಂದಿದ್ದಕ್ಕೆ ಒಂದು ರೀತಿಯಲ್ಲಿ ಕಸಿವಿಸಿ ಶುರುವಾಗಿದೆ ಯಾಕೆಂದರೆ ಬರಿ ಗೋಳಾಟ ನೋಡುವುದೇ ನನ್ನ ಕಥೆ ಆಯಿತು ಎಂದು ರಾಮಾಚಾರಿ ಅಂದುಕೊಂಡಿದ್ದಾನೆ.
ನಾನು ರಾಮಾಚಾರಿ ಮಾವನನ್ನ ಮದುವೆಯಾಗಿ ನಾರಾಯಣ ಆಚಾರ್ಯರಮನೆಗೆ ಸೊಸೆಯಾಗಿ ಇರುತ್ತೇನೆ ಎಂದುಕೊಂಡಿದ್ದ ದೀಪಾಗೆ ರಾಮಾಚಾರಿ ಹಾಗೂ ಚಾರು ಇಬ್ಬರು ಮದುವೆಯಾಗಿರುವ ಸತ್ಯ ತಿಳಿದು ಹೋಗಿದೆ. ಈ ಕಡೆ ನಾರಾಯಣ ಆಚಾರ್ಯರಿಗೆ ತಾವು ಪದ್ಮನಾಭನಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಲು ಆಗಲಿಲ್ಲ ಎಂಬ ಆತಂಕ ಕಾಡುತ್ತಿದೆ. ಕೋದಂಡ ಹಾಗೂ ವೈಶಾಖ ಇಬ್ಬರು ದೀಪಾಳಿಗೆ ನೀನು ಈ ಮನೆಯ ಸೊಸೆಯಾಗಬೇಕು ಎಂದುಕೊಂಡಿದ್ದೆ.ಆದರೆ ರಾಮಾಚಾರಿ ನಮಗೆ ತಿಳಿಯದಂತೆ ಚಾರುವನ್ನು ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ.
ಕೋದಂಡ ಹಾಗೂ ವೈಶಾಖ ಮಾತನಾಡಿದ್ದನ್ನು ಕೇಳಿಸಿಕೊಂಡ ಪದ್ಮನಾಭ ಕುಟುಂಬದವರಿಗೆ ಶಾಕ್ ಆಗಿದೆ. ನೀವು ಏನು ಹೇಳುತ್ತಿದ್ದೀರಾ ಎಂದು ಕೇಳಿದ್ದಾರೆ ಇದಕ್ಕೆ ರಾಮಾಚಾರಿ ಮಾಡಿಕೊಂಡು ಬಂದಿರುವ ಮದುವೆಯ ಬಗ್ಗೆ ಹೇಳಿದ್ದಾರೆ. ತನ್ನ ತಂಗಿಗೆ ತಾನು ಕೊಟ್ಟ ಮಾತನ್ನ ಉಳಿಸಿಕೊಳ್ಳಲು ಆಗಲಿಲ್ಲ ನಾರಾಯಣ ಆಚಾರ್ಯರಿಗೆ ಕನಸು ಬಿದ್ದಂತೆ ಚಾರು ಈಗ ನಾರಾಯಣ ಆಚಾರ್ಯರ ಮನೆಯ ಸೊಸೆಯಾಗಿದ್ದಾಳೆ.
ಚಾರು ತನ್ನ ಲಗೇಜ್ನ್ನು ಪ್ಯಾಕ್ ಮಾಡಿಕೊಂಡು ನಾರಾಯಣ ಆಚಾರ್ಯರ ಮನೆಗೆ ಬರಲು ಸಿದ್ದಳಾಗಿದ್ದಳು. ಅಷ್ಟರಲ್ಲಿ ಚಾರು ರೂಮ್ಗೆ ಬಂದಂತಹ ಮಾನ್ಯತಾ ಚಾರುಗೆ ನೈಸ್ ಮಾಡುತ್ತಿದ್ದಾಳೆ. ರಾಮಾಚಾರಿ ಮನೆಗೆ ಹೋದರೆ ಬೆಳಗ್ಗೆ ಎದ್ದು ರಂಗೋಲಿ ಬಿಡಬೇಕು ಬಟ್ಟೆ ಒಗಿಯಬೇಕು ಪಾತ್ರೆ ತೊಳೆಯಬೇಕು ಅವರು ಹೇಳಿದಂತೆ ಕೇಳಬೇಕು ಈ ಜೀವನ ನಡೆಸಲು ನಿನಗೆ ಇಷ್ಟವಿದೆಯಾ ಎಂದು ಕೇಳಿದ್ದಾಳೆ.
ಇದಕ್ಕೆ ಚಾರು ನಾನು ರಾಮಾಚಾರಿಯನ್ನ ಇಷ್ಟಪಟ್ಟು ಮದುವೆಯಾಗಿದ್ದೇನೆ ಅವನ ಮೇಲೆ ನನಗೆ ಸಂಪೂರ್ಣವಾಗಿ ನಂಬಿಕೆ ಇದೆ ನನಗೆ ಅವನ ಪ್ರೀತಿ ಒಂದೇ ಸಾಕು ನಾನು ಅವರ ಮನೆಯಲ್ಲಿಯೇ ಬಾಳುತ್ತೇನೆ ಎಂದು ಹೇಳಿದ್ದಾಳೆ. ಮಾನ್ಯತಾ ನಾನು ನಿನ್ನನ್ನು ರಾಮಾಚಾರಿ ಮನೆಗೆ ಕಳುಹಿಸುವುದಿಲ್ಲ ನಾನು ಹೇಳಿದ ಹುಡುಗನನ್ನ ನೀನು ಮದುವೆಯಾಗಬೇಕು ಎಂದು ಹೇಳಿದ್ದಾಳೆ. ಚಾರು ಮಾತ್ರ ನನ್ನ ಕೈಯಲ್ಲಿ ಇದು ಸಾಧ್ಯವಿಲ್ಲ ನಾನು ರಾಮಾಚಾರಿಯ ಮನೆಗೆ ಹೋಗಿ ರಾಮಾಚಾರಿ ಒಟ್ಟಿಗೆ ಸಂಸಾರವನ್ನು ಮಾಡುತ್ತೇನೆ ಎಂದು ಹೇಳಿದ್ದಾಳೆ.


Click it and Unblock the Notifications











