Ramachari: ಅಪ್ಪನ ಮನೆ ಬಿಟ್ಟು ಗಂಡನ ಮನೆಗೆ ಹೊರಡಲು ಸಿದ್ದಳಾದ ಚಾರು!

By ಶೃತಿ ಹರೀಶ್ ಗೌಡ
Colors Kannada Ramachari serial Written Update on june 23rd episode

ಪದ್ಮನಾಭನ ಕುಟುಂಬದವರಿಗೆ ಈಗ ರಾಮಾಚಾರಿ ಚಾರುವನ್ನು ಮದುವೆಯಾಗಿರುವ ವಿಚಾರ ಗೊತ್ತಾಗಿದೆ. ನಾಳೆ ನಾವು ಬರುವ ನೆಂಟರ ಮುಂದೆ ಯಾವ ರೀತಿ ಉತ್ತರವನ್ನು ನೀಡಬೇಕು, ಎಂಬುದನ್ನು ನೀವೇ ಹೇಳಿ ಎಂದು ನಾರಾಯಣ ಆಚಾರ್ಯರ ಬಳಿ ಪದ್ಮನಾಭ ಕೇಳಿದ್ದಾನೆ. ಇದಕ್ಕೆ ಆಚಾರ್ಯರು ನನಗೆ ತಿಳಿಯದಂತೆ ಅವನು ಮಿತ್ರದ್ರೋಹವನ್ನ ಮಾಡಿದ್ದಾನೆ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.

ದೀಪ ಯಾರ ಮಾತನ್ನು ನಂಬುತ್ತಿಲ್ಲ ರಾಮಾಚಾರಿ ಮಾವ ಆಗಿಲ್ಲ ಮಾಡೋದಿಲ್ಲ ಎಂದು ಹೇಳಿದ್ದಾಳೆ. ದೀಪಾ ಜೋರಾಗಿ ಅಳಲು ಶುರು ಮಾಡಿದಾಗ ವೈಶಾಖ ನೀನು ನಂಬದಿದ್ದರೆ ಏನು. ಇಲ್ಲಿದೆ ನೋಡು ಅದಕ್ಕೆ ಸಾಕ್ಷಿ ಎಂದು ಚಾರು ಹಾಗೂ ರಾಮಾಚಾರಿ ಇಬ್ಬರು ಸಪ್ತಪದಿ ತುಳಿದಿರುವ ವಿಡಿಯೋವನ್ನು ದೀಪಾವಳಿಗೆ ತೋರಿಸಿದ್ದಾಳೆ. ವಿಡಿಯೋವನ್ನು ನೋಡಿದ ತಕ್ಷಣವೇ ದೀಪಾವಳಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗಿದ್ದು ನಾನು ಈ ಮನೆಯ ಸೊಸೆಯಾಗುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ.‌

ಈ ವೇಳೆ ಜೋರಾಗಿ ಅಳುತ್ತಿರುವ ದೀಪ ನಾರಾಯಣ ಆಚಾರ್ಯರ ಬಳಿ ಹೋಗಿ ಯಾರು ಏನೇ ಅಂದರೂ ಸಹ ನೀನು ಈ ಮನೆಯ ಸೊಸೆ ಎಂದು ಹೇಳುತ್ತಿದ್ದೀರಿ ಈಗ ನೋಡಿದರೆ ಈ ರೀತಿ ಆಗಿದೆ ಎಂದು ಜೋರಾಗಿ ಅತ್ತಿದ್ದಾಳೆ. ಪದ್ಮನಾಭನ ಹೆಂಡತಿ ಸಹ ನಾರಾಯಣ ಆಚಾರ್ಯರನ್ನ ಈ ರೀತಿ ಮೋಸ ಮಾಡಿಬಿಟ್ಟಲ್ಲ ಅಣ್ಣ ಎಂದು ಕೇಳಿದ್ದಾಳೆ. ಇದಕ್ಕೆ ಮಧ್ಯ ಪ್ರವೇಶ ಮಾಡಿದ ವೈಶಾಖ ನಾವೇನು ಮೋಸ ಮಾಡಿಲ್ಲ ಮೋಸ ಮಾಡಿದವನು ಹೊರಗೆ ನಿಂತಿದ್ದಾನೆ ಅವನನ್ನ ಕೇಳಿ ಎಂದಿದ್ದಾಳೆ.

ಚಾರು ಗಂಡನ ಮನೆಗೆ ಹೊರಡಲು ಸಿದ್ದಳಾಗಿದ್ದಾಳೆ. ಆದರೆ ಮಾನ್ಯತಾಗೆ ರಾಮಾಚಾರಿಯ ಜೊತೆ ಚಾರು ಬಾಳುವುದು ಸ್ವಲ್ಪ ಸಹ ಇಷ್ಟವಿಲ್ಲ ಇದಕ್ಕಾಗಿ ಮಗಳಿಗೆ ಅಲ್ಲಿಗೆ ಹೋಗಬೇಡ ಎಂದು ಹೇಳುತ್ತಿದ್ದಾಳೆ. ನೀನು ಅಲ್ಲಿ ಹೋಗಿ ಏನು ಮಾಡುತ್ತೀಯಾ ರಾಮಾಚಾರಿಯನ್ನ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಮಾನ್ಯತಾ ಚಾರುಬಳಿ ಹೇಳಿದ್ದಾಳೆ. ಆದರೂ ಚಾರು ನಾನು ನನ್ನ ಗಂಡನ ಮನೆಗೆ ಹೋಗುತ್ತೇನೆ ಎಂದು ಹಠವನ್ನು ಮಾಡಿ ಹೊರಟಿದ್ದಾಳೆ.

ಈ ಕಡೆ ಜೈ ಶಂಕರ್ ಸಹ ಮಾನ್ಯತಾಗೆ ಕೆನ್ನೆಗೆ ಬಾರಿಸಿದ್ದಾನೆ. ಯಾಕೆಂದರೆ ರಾಮಾಚಾರಿಗೆ ಡೈವರ್ಸ್‌ನ್ನು ನೀಡಿ ಅವನು ಕಟ್ಟಿರುವ ತಾಳಿಯನ್ನ ಕಿತ್ತುಹಾಕಿ. ಇನ್ನೊಂದು ಮದುವೆ ಮಾಡುತ್ತೇನೆ ಎಂದು ಜೈ ಶಂಕರ್ ಮುಂದೆ ಮಾನ್ಯತಾ ಹೇಳಿದ್ದಾಳೆ . ಇದರಿಂದ ಸಿಟ್ಟಿಗೆದ್ದ ಜೈ ಶಂಕರ್ ಮಾನ್ಯತಾ ಕಪಾಳಕ್ಕೆ ಒಡೆದು ಅವಳು ಅವಳ ಗಂಡನ ಮನೆಗೆ ಹೋಗುವುದೇ ಸೂಕ್ತ ಎಂದು ಬುದ್ಧಿವಾದವನ್ನು ಹೇಳಿದ್ದಾರೆ. ಆದರೆ ಮಾನ್ಯತಾ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ.

ಈ ಕಡೆ ವೈಶಾಖ ಹೇಳಿದ ಮಾತನ್ನ ಕೇಳಿಕೊಂಡು ಬಂದಂತಹ ಪದ್ಮನಾಭನ ಹೆಂಡತಿ ನಾರಾಯಣ ಆಚಾರ್ಯರ ಕುಟುಂಬಕ್ಕೆ ಶಾಪವನ್ನು ಹಾಕಿದ್ದಾಳೆ. ತನ್ನ ತವರುಮನೆ ಎಂಬುದನ್ನು ನೋಡದೆ ಶಾಪ ಹಾಕಿದ್ದಾಳೆ. ರಾಮಾಚಾರಿಯ ಕುತ್ತಿಗೆ ಪಟ್ಟಿಯನ್ನು ಹಿಡಿದು ನೀನು ಯಾಕೆ ಈ ರೀತಿ ಮೋಸ ಮಾಡಿದೆ. ನಮಗೆ ಅನ್ಯಾಯವನ್ನು ಮಾಡಿಬಿಟ್ಟೆ ನನ್ನ ಮಗಳು ನಿನ್ನ ಮೇಲೆ ಜೀವವನ್ನೇ ಇರಿಸಿಕೊಂಡಿದ್ದಳು ಎಂದೆಲ್ಲ ಹೇಳಿದ್ದಾಳೆ.

ನಂತರ ವೈಶಾಖ ನೀನು ಮಾಡಿದ ಕೆಲಸದಿಂದ ತವರು ಮನೆಗೆ ಮಗಳು ಶಾಪವನ್ನು ಹಾಕುವಂತೆ ಆಯಿತು ಎಂದು ಉರಿಯುವ ಬೆಂಕಿಗೆ ತುಪ್ಪ ಸವರುವ ಕೆಲಸವನ್ನು ಮಾಡಿದ್ದಾಳೆ. ನಾರಾಯಣ ಆಚಾರ್ಯರು ಪದ್ಮನಾಭನ ಬಳಿ ಕ್ಷಮೆಯನ್ನು ಕೇಳಿದ್ದಾರೆ. ನಾನು ಕೊಟ್ಟ ಮಾತಿಗೆ ತಪ್ಪಿದ್ದೇನೆ ನೀನು ಏನು ಶಿಕ್ಷೆ ಕೊಟ್ಟರು ಸರಿ ನಾನು ಅನುಭವಿಸಲು ಸಿದ್ದ ಎಂದು ಹೇಳಿದ್ದಾರೆ. ನೀನು ಕಾಲು ತೊಳೆದು ನೀರು ಕುಡಿ ಎಂದರು ಅದನ್ನು ನಾನು ಮಾಡುತ್ತೇನೆ ಎಂದೆಲ್ಲ ಹೇಳಿದ್ದಾರೆ.

More from Filmibeat

English summary
Colors Kannada Ramachari serial Written Update on june 23rd episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X