ವೈಶಾಖ ಬಳಿ ಚಾಲೆಂಜ್ ಹಾಕಿದ ಚಾರು: ಮನೆಯವರನ್ನು ನೆನೆದು ರಾಮಾಚಾರಿ ಕಣ್ಣೀರು

By ಶೃತಿ ಹರೀಶ್ ಗೌಡ

ವೈಶಾಖ ಮನೆಯವರನ್ನೆಲ್ಲಾ ಮರಳು ಮಾಡಿ ಈಗ ಬುಟ್ಟಿಗೆ ಹಾಕಿಕೊಳ್ಳಲು ನೋಡಿದ್ದಾಳೆ. ಅವಳು ಅಂದುಕೊಂಡ ಕೆಲಸ ಸಕ್ಸಸ್ ಆಗಿದೆ ನಾವೆಲ್ಲರೂ ಒಗ್ಗಟ್ಟಿನಿಂದ ಇರೋಣ ಎಂದಿದ್ದಾಳೆ. ವೈಶಾಖ ಮಾತು ಜಾನಕಿಗೆ ಬಹಳಷ್ಟು ಖುಷಿಯನ್ನು ತಂದಿದೆ. ಯಾಕೆಂದರೆ ಮನೆಯಲ್ಲಿ ಕೊಂಕಾಡಿಕೊಂಡು ಇದ್ದಂತಹ ವೈಶಾಖ ಈಗ ಒಗ್ಗಟ್ಟಿನ ಮಾತನ್ನು ಆಡುತ್ತಿದ್ದಾಳೆ. ನಾರಾಯಣ ಆಚಾರ್ಯರ ಮನಸ್ಸಿನಲ್ಲಿ ಚಾರು ಹಾಗೂ ರಾಮಾಚಾರಿ ಯ ಬಗ್ಗೆ ವಿಷವನ್ನು ಬಿತ್ತಿದ್ದಾಳೆ.

ಮಾವ ಅವರು ಇನ್ನೂ ಮನೆಯ ಹೊರಗಡೆ ಇದ್ದಾರೆ ನೀವು ಮನಸ್ಸನ್ನು ಕರಗಿಸಿಕೊಳ್ಳಬೇಡಿ ಎಂದಿಲ್ಲ ಹೇಳಿದ್ದಾಳೆ. ಇದಕ್ಕೆ ನಾರಾಯಣ ಆಚಾರ್ಯರು ಇರುವ ತನಕ ಇರುತ್ತಾರೆ. ಹೊಟ್ಟೆ ಚೂರ್ ಎಂದ ಮೇಲೆ ಅವರೇ ಹೋಗುತ್ತಾರೆ ಎಂದು ಹೇಳಿದ್ದಾರೆ. ಇನ್ನು ವೈಶಾಖ ಗೆ ತುಂಬಾ ಖುಷಿಯಾಗಿದೆ ಹೇಗೋ ನಾನು ಅಂದುಕೊಂಡಂತಹ ಕೆಲಸ ಸಕ್ಸಸ್ ಆಗಿದೆ. ಚಾರು ಯಾವ ರೀತಿ ಇದ್ದಾಳೆ ಎಂಬುದನ್ನು ನೋಡಿಕೊಂಡು ಬರೋಣ ಎಂದು ಮನೆಯಿಂದ ಹೊರಗೆ ಬಂದಿದ್ದಾಳೆ.

ramachari-written-update

ಈ ಕಡೆ ರಾಮಾಚಾರಿ ದೇವರ ಬಳಿ ಹೋಗಿ ದೇವರೇ ನನಗ್ಯಾಕೆ ಈ ರೀತಿ ಅಗ್ನಿಪರೀಕ್ಷೆಯನ್ನು ತಂದೆ‌. ನಾನು ಈಗ ನನ್ನ ತಂದೆ ತಾಯಿಗೆ ಬೇಡವಾಗಿದ್ದೇನೆ. ಮನೆಯಿಂದ ದೂರ ಹಾಕಿದ್ದಾರೆ ಎಂದು ಅಳುತ್ತಾ ಪ್ರಶ್ನೆಯನ್ನ ಮಾಡಿದ್ದಾನೆ. ನಾನೇನು ಚಾರುವನ್ನ ಇಷ್ಟಪಟ್ಟು ಮದುವೆಯಾಗಲಿಲ್ಲ ದೀಪಾ ಮೇಲು ಅಂತಹ ಭಾವನೆ ಇರಲಿಲ್ಲ ಎಂದೆಲ್ಲಾ ಕಣ್ಣೀರನ್ನು ಹಾಕಿದ್ದಾನೆ. ಇದೇ ವೇಳೆ ಅಲ್ಲಿಗೆ ಬಂದಂತಹ ಮುರಾರಿ ರಾಮಾಚಾರಿಗೆ ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದಾನೆ. ಈಗ ನೀನು ಒಬ್ಬನಲ್ಲ ಇಬ್ಬರು ನಿನಗೆ ಸಂಸಾರವಿದೆ ತಗೋ ಊಟ ತೆಗೆದುಕೊಂಡು ಹೋಗಿ ಚಾರುಗೆ ಕೊಡು ಎಂದು ಹೇಳಿದ್ದಾನೆ.

ಚಾರು ಮೊದಲೇ ಖಡಕ್ ಹುಡುಗಿ ವೈಶಾಖಳ ಮಾತು ಚಾರು ಮುಂದೆ ನಡೆಯೋದಿಲ್ಲ. ವೈಶಾಖ ಚಾರುವನ್ನು ಕೆಣಕಲು ಬಂದಿದ್ದಾಳೆ, ಕಣಿ ಹೇಳ್ತೀನಿ ಎಂದು ಚಾರು ಬಳಿ ಬಂದು. ನಿಮ್ಮಿಬ್ಬರ ಗುಟ್ಟು ರಟ್ಟಾಗುವಂತೆ ಮಾಡಿದ್ದು ನಾನೇ ನಿಮ್ಮಿಬ್ಬರ ಮದುವೆಯ ವಿಡಿಯೋ ಇವಳೇ ಎಂದು ಜೋರಾಗಿ ನಗಲು ಶುರು ಮಾಡಿದ್ದಾಳೆ. ರಾಮಾಚಾರಿಯನ್ನ ಮನೆಯಿಂದ ಹೊರಹಾಕಲು ನಾನು ಈ ರೀತಿಯೆಲ್ಲ ಮಾಡಿದೆ ನೀನು ಬಲಿಕ ಬಕ್ರಾ ಆದೆ ಎಂದಿದ್ದಾಳೆ. ವೈಶಾಖ ರಾಮಾಚಾರಿ ಬಗ್ಗೆ ಮಾತನಾಡಿದ್ದೆ ತಡ ಚಾರು ಚಾಲೆಂಜ್ ಹಾಕಿದ್ದಾಳೆ.

ಇನ್ನು 24 ಗಂಟೆಯಲ್ಲಿ ನಾನು ಮನೆಯ ಒಳಗೆ ಇರುತ್ತೇನೆ. ನೀನು ಆರತಿಯನ್ನು ಮಾಡಿ ಮನೆಯ ಒಳಗೆ ಕರೆದುಕೊಂಡು ಹೋಗಬೇಕು. ಆ ರೀತಿ ನಾನು ಮಾಡುತ್ತೇನೆ ಎಂದು ವೈಶಾಖ ಮುಂದೆ ಚಾಲೆಂಜ್ ಅನ್ನು ಚಾರು ಮಾಡಿದ್ದಾಳೆ. ಹೇಗಿದ್ದರೂ ನೀನು ನಮಗೆ ಒಳ್ಳೆಯದನ್ನೇ ಮಾಡಿದ್ದೀಯ ನನ್ನ ಗಂಡ ಮದುವೆಯಾಗಿರುವ ವಿಷಯವನ್ನ ಮನೆಯವರ ಮುಂದೆ ಹೇಳುತ್ತಿರಲಿಲ್ಲ ಇದಕ್ಕೆಲ್ಲ ನೀನೇ ಸೂತ್ರದಾರಿ ನಾನು ಒಳಗಡೆ ಬಂದ ಮೇಲೆ ಅಲ್ಲಿ ಆಗುವ ಕಥೆಯೇ ಬೇರೆ ಎಂದು ಚಾರು ಹೇಳಿದ್ದಾಳೆ. ಚಾರು ಈ ರೀತಿ ಮಾತನಾಡಿದ್ದನ್ನು ವೈಶಾಖ ಮೆಲುಕು ಹಾಕುತ್ತಿದ್ದಾಳೆ .ಇನ್ನೂ 24 ಗಂಟೆಯೊಳಗೆ ಇವಳು ಹೇಗೆ ಮನೆಯೊಳಗೆ ಬರುತ್ತಾಳೆ. ನಾನು ಸಹ ನೋಡೇ ಬಿಡುತ್ತೇನೆ ಎಂದುಕೊಂಡಿದ್ದಾಳೆ.

ಮೇಡಂ ಮುರಾರಿ ಊಟವನ್ನು ತೆಗೆದುಕೊಂಡು ಬಂದಿದ್ದಾನೆ . ದಯವಿಟ್ಟು ಊಟವನ್ನು ಮಾಡಿದ್ದ ನಂತರ ನೀವು ನಿಮ್ಮ ತವರು ಮನೆಗೆ ಹೋಗಿ ಎಂದು ರಾಮಾಚಾರಿ ಚಾರುಗೆ ಹೇಳಿದ್ದಾನೆ. ಇದಕ್ಕೆ ಚಾರು ನಾನು ಈಗಷ್ಟೇ ಒಬ್ಬರ ಮೇಲೆ ಚಾಲೆಂಜ್ ಮಾಡಿದ್ದೇನೆ. 24 ಗಂಟೆ ಒಳಗಾಗಿ ಆ ಮನೆಯ ಒಳಗಡೆ ಇರುತ್ತೇನೆ ಎಂದು ಹೇಳಿದ್ದಾಳೆ. ಏನು ಮೇಡಂ ಯಾರ ಬಳಿ ಚಾಲೆಂಜ್ ಮಾಡಿದ್ರಿ, ಈ ರೀತಿಯೆಲ್ಲ ಮಾಡಬೇಡಿ ಅದು ತಪ್ಪು. ತಪ್ಪು ಮಾಡಿರುವವರು ನಾವು ಅವರ ಮನಸ್ಸನ್ನು ಗೆದ್ದು ನಾವು ಆ ಮನೆಯ ಒಳಗೆ ಹೋಗಬೇಕು ಎಂದು ರಾಮಾಚಾರಿ ಚಾರುಗೆ ಹೇಳಿದ್ದಾನೆ.

ಇದಕ್ಕೆ ಚಾರು ನಾನು ಎಲ್ಲೂ ಸಹ ಹೋಗುವುದಿಲ್ಲ, ಎಷ್ಟೇ ಕಠಿಣವಾದರೂ ಸಹ ನಿನ್ನ ಜೊತೆಗೆ ನಿಲ್ಲುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ತಾನು ವಿಷ ಕುಡಿದ ದಿನ ಈ ಮಾತು ಕೊಟ್ಟಿದ್ದನ್ನ ರಾಮಾಚಾರಿಗೆ ಚಾರು ನೆನಪಿಸಿದ್ದಾಳೆ. ಮೇಡಂ ನೀವು ಒಬ್ಬರು ಹುಡುಗಿ ಇಲ್ಲಿ ಬಟ್ಟೆ ಬದಲಿಸಲು ಸ್ನಾನ ಮಾಡಲು ವ್ಯವಸ್ಥೆ ಇಲ್ಲ . ಇಲ್ಲಿ ಹೇಗೆ ಇರುತ್ತೀರ ಎಂದು ಚಾರು ಬಳಿ ರಾಮಾಚಾರಿ ಕೇಳಿದ್ದಾನೆ. ಹೇಗೋ ನಡೆಯುತ್ತದೆ ಈ ಕಷ್ಟಕಾಲದಲ್ಲಿ ನಿನ್ನನ್ನ ಬಿಟ್ಟು ನಾನು ಎಲ್ಲೂ ಹೋಗೋದಿಲ್ಲ ಎಂದು ಚಾರು ಖಡಖಂಡಿತವಾಗಿ ರಾಮಾಚಾರಿಯ ಬಳಿಯಲ್ಲಿ ಹೇಳಿದ್ದಾಳೆ

More from Filmibeat

English summary
Colors Kannada serial Ramachari here details about charu challenges to vaishaka I will come to home , vaishaka in tension
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X