twitter
    For Quick Alerts
    ALLOW NOTIFICATIONS  
    For Daily Alerts

    Ramachari Serial: ಮಾನ್ಯತಾ ಕೈಗೆ ಸಿಕ್ಕಿಬಿದ್ದ ಚಾರುಲತಾ!

    By ಶೃತಿ ಹರೀಶ್ ಗೌಡ
    |

    ರಾಮಾಚಾರಿ ಮನೆಯವರೆಲ್ಲರನ್ನು ದೂಷಣೆ ಮಾಡುತ್ತಾ ಇದ್ದಾನೆ ಚಾರುಲತಾ ಗೆ ಶಾಶ್ವತವಾಗಿ ಕಣ್ಣು ಹೋಗಲು ಇಷ್ಟು ದಿನ ನಾನೊಬ್ಬ ಕಾರಣನಾಗಿದ್ದೆ ಆದರೆ ಅದರಲ್ಲಿ ನೀವುಗಳು ಸಹ ಪಾಲನ್ನು ಪಡೆದುಕೊಂಡಿದ್ದೀರಿ ಎಂದು ರಾಮಾಚಾರಿ ಮನೆಯವರ ಬಳಿ ಹೇಳುತ್ತಾನೆ. ಕೋದಂಡನ ಬಳಿ ಬಂದ ರಾಮಾಚಾರಿ ಒಂದು ಹೆಣ್ಣು ಎಂಬುದನ್ನು ನೋಡದೆ ಮಳೆಯಲ್ಲಿ ನೀನು ಚಾರುಲತಾರನ್ನು ನೆನೆಸಿದೆ ಇದರಿಂದಾಗಿ ಅವರಿಗೆ ಶೀತ ಆಯಿತು ಇದು ಟ್ರೀಟ್ಮೆಂಟ್ ಗೆ ಅಡ್ಡ ಬಂದಿತು ಎಂದು ಅಣ್ಣನನ್ನು ಬೈಯ್ದಿದ್ದಾನೆ.

    ನಂತರ ದೀಪಾ ಬಳಿ ಬಂದ ರಾಮಾಚಾರಿ ಚಾರು ಮೇಡಂ ಕಣ್ಣಲ್ಲಿ ನೀರು ಬಾರದೇ ಇರಬೇಕಿತ್ತು ನೀನು ಖಾರವನ್ನು ಸುರಿದು ಅವರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ ಎಂದು ಹೇಳಿ ದೀಪಾ ಮುಂದೆ ಕಣ್ಣೀರು ಹಾಕಿದ್ದಾನೆ. ಇದನ್ನೆಲ್ಲಾ ನೋಡಿದ ಜಾನಕಿಗೆ ಸಂಕಟವಾಗುತ್ತಿದೆ ತನ್ನ ಮಗ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಜಾನಕಿ ಸಂಕಟಪಡುತ್ತಾಳೆ.

    ನಮ್ಮ ಕುಟುಂಬದಲ್ಲಿ ನಾವು ಒಂದು ಇರುವೆಗೂ ಸಹ ಕೇಡನ್ನು ಬಯಸಿಲ್ಲ ಆದರೆ ನಮ್ಮಿಂದಾಗಿ ಒಂದು ಹೆಣ್ಣಿನ ಬಾಳು ಕತ್ತಲೆಗೆ ದೂಡಿದಂತಾಗಿದೆ ಎಂದು ರಾಮಾಚಾರಿ ಅಳುತ್ತಾನೆ. ಕೋಪದ ಕೈಗೆ ಬುದ್ಧಿ ಕೊಟ್ಟು ಈಗ ನೋವು ಅನುಭವಿಸುವಂಥಾಗಿದೆ ಎಂದು ಕಣ್ಣೀರು ಹಾಕುತ್ತಾನೆ. ಜಾನಕಿ ಮಗನನ್ನು ಸಮಾಧಾನ ಮಾಡಲು ಯತ್ನಿಸುತ್ತಾಳೆ.

    ಸಡನ್ನಾಗಿ ಮನೆಗೆ ಎಂಟ್ರಿ ಕೊಟ್ಟ ಮಾನ್ಯತಾ

    ಸಡನ್ನಾಗಿ ಮನೆಗೆ ಎಂಟ್ರಿ ಕೊಟ್ಟ ಮಾನ್ಯತಾ

    ಆಚಾರಿ ಮನೆಗೆ ಸಡನ್ನಾಗಿ ಮಾನ್ಯತಾ ಎಂಟ್ರಿಕೊಟ್ಟು ತನ್ನ ಮಗಳು ಚಾರುಲತಾ ಇದ್ದಾಳೆ ಎಂದು ರಾಮಾಚಾರಿಯ ಬಳಿ ಪ್ರಶ್ನೆ ಮಾಡಿದ್ದಾಳೆ. ಇವಳೇ ರಾಮಾಚಾರಿ ಚಾರು ಮೇಡಂ ಇಲ್ಲ ಯಾಕೆ ಬರುತ್ತಾರೆ ಅವರು ಕಲ್ಕತ್ತಾ ಗೆ ಹೋಗಿದ್ದಾರೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಮಾನ್ಯತಾ ನೀನು ಸುಮ್ಮನೆ ಇರು ನಾನು ನನ್ನ ಮಗಳು ಇರುವುದನ್ನು ಕಂಡು ಹಿಡಿದೆ ಹಿಡಿಯುತ್ತೇನೆ ಎಂದು ರಾಮಾಚಾರಿ ಬಳಿ ಹೇಳುತ್ತಾಳೆ.

    ಮನೆಯೆಲ್ಲ ತಡಕಾಡಿದ ಮಾನ್ಯತಾ

    ಮನೆಯೆಲ್ಲ ತಡಕಾಡಿದ ಮಾನ್ಯತಾ

    ಚಾರು ಬೇಬಿ ಚಾರು ಬೇಬಿ ಎಂದು ಕೂಗಿಕೊಂಡು ಮಾನ್ಯತಾ ಮನೆಯನ್ನೆಲ್ಲ ತಡಕಾಡಿದ್ದಾಳೆ.‌ ಅದಕ್ಕೆ ನಿಲ್ಲಿಸದ ಮಾನ್ಯತಾ ಬಚ್ಚಲು ಮನೆಗೂ ಹೋಗಿ ಡ್ರಮ್ನಲ್ಲಿ ಅಡಗಿಕೊಂಡಿದ್ದಾಳೆ ಎಂದು ಸಹ ನೋಡಿ ಅಲ್ಲಿ ಇರದನ್ನು ಸಹ ಕನ್ಫರ್ಮ್ ಮಾಡಿಕೊಂಡು ಬಂದಿದ್ದಾಳೆ. ನಂತರ ಪಾ, ಚಾರುಳನ್ನು ಬಚ್ಚಿಟ್ಟು ರೂಮಿನಲ್ಲಿ ಬಂದದ್ದನ್ನು ನೋಡಿದ ಮಾನ್ಯತಾಗೆ ಡೌಟ್ ಬಂದು ರೂಮಿನ ಕಡೆಯೂ ಸಹ ಹುಡುಕಾಟವನ್ನು ನಡೆಸಿದ್ದಾಳೆ.

    ಎಲ್ಲಿ ಹೋದಳು ಚಾರು

    ಎಲ್ಲಿ ಹೋದಳು ಚಾರು

    ರೂಮಿನ ಬಾಗಿಲು ತೆಗೆದ ಮಾನ್ಯತಾ ವಾರ್ಡ್ರೋಬ್ ಸೇರಿದಂತೆ ಮಂಚದ ಕೆಳಗೆಲ್ಲ ತನ್ನ ಮಗಳು ಇದ್ದಾಳೆ ಎಂದು ಹುಡುಕಾಟ ನಡೆಸಿದ್ದಾಳೆ. ಕೊನೆಗೆ ಚಾರು ಇಲ್ಲದಿರುವುದನ್ನು ಕಂಡು ಮನೆಯಿಂದ ಹೊರಗೆ ಹೋಗಲು ಹಾಲ್‌ಗೆ ಬಂದಿದ್ದಾಳೆ. ಆಗ ರಾಮಾಚಾರಿ ಅಜ್ಜಿಗೆ ತಿಳಿಯುತ್ತಾನೆ ಅಜ್ಜಿ ಎಲ್ಲೂ ಇಲ್ಲದವಳೇನು ಆಕಾಶದಿಂದ ಉದುರಿ ಬರುತ್ತಾಳ ಈ ರೀತಿ ಮಾಡುವುದು ತಪ್ಪು ಬೇರೆಯವರ ಮನೆಗೆ ಬಂದು ನೀವು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳುತ್ತಾರೆ. ಕೊನೆಗೆ ಮನೆಯಿಂದ ಹೊರಗೆ ಹೋಗುವಾಗ ಇನ್ನೊಮ್ಮೆ ಮನೆಯನ್ನು ಕಣ್ಣಾಡಿಸುತ್ತಾಳೆ. ಆದರೆ ಚಾರು ಅಲ್ಲಿ ಇರುವುದು ಗೊತ್ತಾಗುವುದಿಲ್ಲ ನಂತರ ಹೊರಗೆ ಹೋಗುತ್ತಾಳೆ. ರಾಮಾಚಾರಿಗೆ ಶಾಕ್ ಆಗುತ್ತದೆ ಚಾರು ಎಲ್ಲಿ ಹೋದರು ಎಂದು ಹುಡುಕಾಟ ನಡೆಸುತ್ತಿದ್ದಾಗ ಚಾರುಲತಾ ವಾಯ್ಸ್ ಕೇಳಿಸುತ್ತದೆ.

    ಬೊಂಬೆ ನಡುವೆ ಅಡಗಿ ಕುಳಿತ‌ ಚಾರು

    ಬೊಂಬೆ ನಡುವೆ ಅಡಗಿ ಕುಳಿತ‌ ಚಾರು

    ಈ ಕಡೆ ಸಿಕ್ಕಿ ಬೀಳುತ್ತೇನೆ ಎಂದು ತಿಳಿದ ಚಾರುಲತಾ ಹೇಗೋ ಬೊಂಬೆಗಳ ನಡುವೆ ಬಂದು ಕುಳಿತುಕೊಳ್ಳುತ್ತಾಳೆ. ಚಾರುಲತಾ ಅಮ್ಮನ ಕೈಗೆ ಸಿಕ್ಕಿ ಬೀಳುವುದಿಲ್ಲ ಎಂದುಕೊಳ್ಳುತ್ತಾಳೆ. ಈ ಕಡೆ ವಾಯ್ಸ್ ಬಂದ ಕಡೆಯೇ ರಾಮಾಚಾರಿ ಹಾಗೂ ಮನೆಯವರು ನೋಡುತ್ತಿದ್ದಾಗ ಬೊಂಬೆಯ ಮಧ್ಯದಲ್ಲಿ ಅಡಗಿ ಕುಳಿತ ಚಾರುಲತಾಳ ಕಣ್ಣು ಮಾತ್ರ ಕಾಣಿಸುತ್ತಿರುತ್ತದೆ. ನೋಡಿದ ರಾಮಾಚಾರಿ ವಂಡರ್ಫುಲ್ ಮೇಡಂ ವಂಡರ್ಫುಲ್ ಎಂದು ಚಪ್ಪಾಳೆಯನ್ನು ತಟ್ಟುತ್ತಾನೆ ಆಗ ಮಾನ್ಯತಾ ಸಹ ಅಲ್ಲಿಗೆ ಬಂದು ಚಪ್ಪಾಳೆ ತಟ್ಟುತ್ತಿರುತ್ತಾಳೆ. ಮತ್ತೆ ಮಾನ್ಯತಾಳನ್ನು ನೋಡಿದ ಮನೆಯವರಿಗೆ ಶಾಕ್ ಆಗಿದೆ ಮುಂದೆ ಮಾನ್ಯತಾ ಏನು ನಿರ್ಧಾರ ಕೈಗೊಳ್ಳುತ್ತಾಳೆ ಎಂಬುವುದೇ ಕುತೂಹಲಕಾರಿಯಾಗಿದೆ.

    English summary
    colors Kannada serial Ramachari Written Update on January 24th episode. Here is the details about to Manyatha searching Ramachari house
    Wednesday, January 25, 2023, 20:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X