Lakshana: ಚಂದ್ರಶೇಖರ್ನನ್ನು ಬಾಯಿ ತುಂಬಾ ಮಾವ ಎಂದ ಭೂಪತಿ
ಇವರೆಗೆ 'ಲಕ್ಷಣ' ಧಾರಾವಾಹಿಯಲ್ಲಿ ಭೂಪತಿ, ನಕ್ಷತ್ರ ಅತ್ತೆ ಮನೆಗೆ ಬಂದಿದ್ದಾರೆ. ಅದ್ಯಾಕೋ ಚಂದ್ರಶೇಖರ್ ನನ್ನು ನೋಡಿದ ಭೂಪತಿ ಸ್ವಲ್ಪ ಬೇಜಾರಿನಲ್ಲಿ ಇದ್ದಾನೆ. ಇದನ್ನು ನೋಡಿದ ಚಂದ್ರಶೇಖರ್ಗೂ ಸಹ ಬೇಸರವಾಗಿದೆ.
ನಕ್ಷತ್ರ ಮನೆಯ ತುಂಬಾ ಭೂಪತಿಯನ್ನ ಹುಡುಕುತ್ತಿದ್ದಾಳೆ. ಈ ಕಡೆ ಭೂಪತಿ ಆರತಿಯ ಬಳಿ ಚಂದ್ರಶೇಖರ್ ಮಾತನಾಡುತ್ತಿದ್ದನ್ನು ಕೇಳಿಸಿಕೊಂಡಿದ್ದಾನೆ. ನಂತರ ಕೆಳಗಿಳಿದು ಬಂದು ಕುರ್ಚಿಯ ಮೇಲೆ ಕುಳಿತುಕೊಂಡಿದ್ದಾನೆ. ಅಲ್ಲಿಗೆ ಬಂದ ನಕ್ಷತ್ರ, ಭೂಪತಿಗೆ ಫೋನ್ ಬರುತ್ತಿದೆ ಫೋನ್ ಬಿಟ್ಟು ಎಲ್ಲಿಗೆ ಹೋಗಿದ್ದೆ ಎಂದು ಕೇಳಿದ್ದಾಳೆ. ನಕ್ಷತ್ರಗಳನ್ನು ಭೂಪತಿ ನಿನ್ನ ಬಳಿ ಏನು ಮಾತನಾಡಬೇಕು ಎಂದು ಕೇಳಿದಾಗ ನಕ್ಷತ್ರ ಮಾತನಾಡುವೆ ಎಂದು ಹೇಳಿದ್ದಾಳೆ.
ತಪ್ಪು ಮಾಡದೇ ನೀನು ಎಲ್ಲಾ ಶಿಕ್ಷೆಯನ್ನು ಅನುಭವಿಸಿದೆ. ನಮ್ಮನ್ನು ಕ್ಷಮಿಸುವ ಮನಸ್ಥಿತಿ ನಿನಗೆ ಹೇಗೆ ಬಂತು ಎಂದು ಭೂಪತಿ, ನತ್ರಕ್ಷ ಬಳಿ ಕೇಳಿದಾಗ ನೀವು ಬೇಕಂತಲೇ ಏನು ಮಾಡಿಲ್ಲ ಅಲ್ವಾ? ಅದರ ಬಗ್ಗೆ ಮಾತು ಬಿಡು ಎಂದು ಹೇಳಿ ಭೂಪತಿಯನ್ನು ಸಮಾಧಾನ ಮಾಡಿದ್ದಾಳೆ. ದೇವಸ್ಥಾನ ಎಲ್ಲಿ ಇದೆ ಎಂದು ತಿಳಿದುಕೊಂಡ ಭೂಪತಿ ದೇವಸ್ಥಾನಕ್ಕೆ ಹೊರಟು ನಿಂತಿದ್ದಾನೆ. ಈ ಕಡೆ ಆರತಿ ಮಗಳು ಮತ್ತು ಅಳಿಯನಿಗೆ ಕೊಡಲು ಹೊಸ ಬಟ್ಟೆಗಳನ್ನ ತಂದಿದ್ದಾರೆ.

ಶ್ವೇತಾಗೆ ಬೈದು ಫೋನಿಟ್ಟ ಡೆವಿಲ್
ಡೆವಿಲ್ಗೆ ಕರೆ ಮಾಡಿದ ಶ್ವೇತಾ ಡೆವಿಲನ್ನು ನಾನು ಹೇಳಿದ ಕೆಲಸದ ಬಗ್ಗೆ ಏನನ್ನು ಯೋಚನೆ ಮಾಡಿದ್ದೀಯ ಎಂದು ಕೇಳುತ್ತಿದ್ದಾಳೆ. ಈ ಕಡೆ ಡೆವಿಲ್ಗೆ ಕೆಟ್ಟ ಕೋಪ ಬಂದಿದೆ. ಸಾಲ ಕೊಟ್ಟವರಾ ರೀತಿ ಕೇಳುತ್ತಿದ್ದೀಯ ಯೋಚನೆ ಮಾಡಬೇಕು ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಶ್ವೇತಾಗೆ ತುಂಬಾ ಕೋಪ ಬಂದಿದೆ. ನೀನು ಏನು ಕೆಲಸ ತೆಗೆದುಕೊಂಡು ಯಾವುದನ್ನು ಹೇಳಲಿಲ್ಲ ಎಂದು ಶ್ವೇತಾ ಹೇಳಿದ್ದಾಳೆ. ನೀನೇನು ಮದುವೆಯಾಗದವನನ್ನು ಕೊಡು ಎಂದು ಹೇಳುತ್ತಿದ್ದೀಯ ಮದುವೆಯಾಗಿ ಇನ್ನೇನು ಪ್ರೀತಿ ಅರಳುತ್ತಿದೆ ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಶ್ವೇತಾಗೆ ಸಿಟ್ಟು ಬಂದಿದೆ. ಅದಕ್ಕೆ ನಾನು ಹೇಳುವುದಿಲ್ಲ ಎಂದು ಭಾರ್ಗವಿ ಫೋನನ್ನು ಕಟ್ ಮಾಡಿದ್ದಾಳೆ. ಭಾರ್ಗವಿ ಫೋನ್ ಕಟ್ ಮಾಡಿದ್ದನ್ನು ನೋಡಿದ ಶ್ವೇತಾಗೆ ತುಂಬಾನೇ ಕೋಪ ಬಂದಿದೆ.

ದೇವಸ್ಥಾನಕ್ಕೆ ಹೋದ ಭೂಪತಿ
ದೇವಸ್ಥಾನಕ್ಕೆ ಚಂದ್ರಶೇಖರ್ ಅನ್ನು ಹುಡುಕಿಕೊಂಡು ಭೂಪತಿ ಹೋಗಿದ್ದಾನೆ. ಇನ್ನು ಅರ್ಚಕರ ಬಳಿ ಚಂದ್ರಶೇಖರ್ ಯಾವುದಕ್ಕೆ ಪ್ರಸಾದ ಹಂಚುತ್ತಿದ್ದಾನೆ ಎಂದು ಕೇಳಿದ್ದಾನೆ. ಮಗಳು ಮತ್ತು ಅಳಿಯನಿಗೋಸ್ಕರ ಪೂಜೆಯನ್ನ ಮಾಡಿಸಿ ಪ್ರಸಾದವನ್ನು ಹಂಚುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರಸಾದ ಅಂಚುತ್ತಿರುವ ಜಾಗಕ್ಕೆ ಭೂಪತಿ ಹೋಗಿ ಕೈಯನ್ನವೊಡ್ಡಿದ್ದಾನೆ. ಭೂಪತಿಯನ್ನು ಆಶ್ಚರ್ಯದಿಂದ ಚಂದ್ರಶೇಖರ್ ನೋಡಿದ್ದಾರೆ. ಇದೇ ವೇಳೆ ಭೂಪತಿ ನನಗೆ ಪ್ರಸಾದವನ್ನು ಕೊಡೋದಿಲ್ವಾ ಎಂದು ಕೇಳಿದ್ದಾನೆ. ಇದಕ್ಕೆ ಚಂದ್ರಶೇಖರ್ ಎಷ್ಟು ಬೇಕು ಅಷ್ಟು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಮಾತನಾಡಬೇಕು ಪ್ರಸಾದವನ್ನು ಹಚ್ಚಿದ ನಂತರ ಬನ್ನಿ ಎಂದು ಅಲ್ಲಿಂದ ತೆರಳಿದ್ದಾನೆ.

ಭೂಪತಿ ಮಾತಿಗೆ ಚಂದ್ರಶೇಖರ್ ಖುಷ್
ದೇವಸ್ಥಾನಕ್ಕೆ ಹೋಗಿರುವ ಭೂಪತಿ ಚಂದ್ರಶೇಖರ್ ಬಳಿ ಮಾತನಾಡುತ್ತಿದ್ದಾನೆ. ನಕ್ಷತ್ರ ಕ್ಷಮಿಸಿದ ಮೇಲೆ ನನ್ನದು ಏನಿದೆ ಎಂದು ಹೇಳಿದ್ದಾನೆ. ಅಂದು ನೀವು ಮಗಳಿಗಾಗಿ ಎಲ್ಲವನ್ನು ಮಾಡಿದ್ದೀರಿ ಹಿಂದೇ ನಡೆದಿದ್ದೆಲ್ಲ ಈಗ ಬೇಡ ಎಂದು ಭೂಪತಿ ಚಂದ್ರಶೇಖರ್ ಬಳಿ ಹೇಳುತ್ತಿದ್ದಾನೆ. ಇನ್ನು ನಾನು ನಿಮ್ಮನ್ನು ಕ್ಷಮಿಸಲಾರೆ ಎಂದು ಹೇಳುವುದಿಲ್ಲ ಎಂದು ಹೇಳಿ ಮಾವ ಎಂದು ಬಾಯಿ ತುಂಬಾ ಕರೆದಿದ್ದಾನೆ. ಎಂದು ಕರೆದಿದ್ದನ್ನು ಕೇಳಿಸಿಕೊಂಡ ಚಂದ್ರಶೇಖರ್ಗೆ ತುಂಬಾ ಖುಷಿಯಾಗಿದೆ.


Click it and Unblock the Notifications











