Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆಯ ಜನಪ್ರಿಯ ನಟಿ ಆತ್ಮಹತ್ಯೆ: ಕಾರಣ ನಿಗೂಢ
'ಕ್ರೈಮ್ ಪ್ಯಾಟ್ರೋಲ್' ಟಿವಿ ಸರಣಿ ಮೂಲಕ ಹೆಸರು ಗಳಿಸಿದ್ದ ನಟಿ ಪ್ರೇಕ್ಷಾ ಮೆಹ್ತಾ ಮಂಗಳವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ನ ಬಜರಂಗ್ ನಗರದಲ್ಲಿನ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.
Recommended Video
'ಎಲ್ಲಕ್ಕಿಂತಲೂ ಕೆಟ್ಟ ಸಂಗತಿಯೇನೆಂದರೆ ಕನಸುಗಳು ಸಾಯುವುದು' ಎಂದು ಅವರು ಆತ್ಮಹತ್ಯೆಗೂ ಮುನ್ನ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಇದರಿಂದ ಅವರ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಇರಬಹುದು ಎಂಬ ಅನುಮಾನ ಮೂಡಿದೆ.
ಜನ್ಮದಿನ ಆಚರಿಸಿಕೊಂಡ ಎರಡೇ ದಿನಕ್ಕೆ ಹೃದಯಾಘಾತಕ್ಕೆ ಬಲಿಯಾದ ಯುವ ನಟ
ಲಾಕ್ ಡೌನ್ ಶುರುವಾದ ಸಂದರ್ಭದಿಂದಲೂ ಪ್ರೇಕ್ಷಾ ಮೆಹ್ತಾ ಇಂದೋರ್ನ ತಮ್ಮ ನಿವಾಸದಲ್ಲಿ ನೆಲೆಸಿದ್ದರು. ಕಿರುತೆರೆಯಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದ ಅವರು ಮುಂಬೈನಲ್ಲಿ ಕಳೆದ ಮೂರು ವರ್ಷಗಳಿಂದ ನೆಲೆಸಿದ್ದರು. ಕೊರೊನಾ ವೈರಸ್ ಹಾವಳಿ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಇಂದೋರ್ನ ತವರೂರಿಗೆ ಮರಳಿದ್ದರು. ಮುಂದೆ ಓದಿ...
ಸೀಲಿಂಗ್ ಫ್ಯಾನ್ಗೆ ನೇಣು
25 ವರ್ಷದ ನಟಿ ಆತ್ಮಹತ್ಯಾ ಪತ್ರವನ್ನು ಕೂಡ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಅದರಲ್ಲಿ ಅವರು ಈ ದುಡಕಿನ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನೆಂಬುದನ್ನು ತಿಳಿಸಿಲ್ಲ. ಮಂಗಳವಾರ ಬೆಳಿಗ್ಗೆ 6.30ರ ವೇಳೆಗೆ ಪ್ರೇಕ್ಷಾ ಅವರು ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿರುವುದನ್ನು ಮನೆಯವರು ನೋಡಿದ್ದರು.
ಕಾರಣ ತಿಳಿಯಲು ತನಿಖೆ
ನಟಿಯ ತಂದೆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಕೆ ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಲಾಕ್ ಡೌನ್ ಸಮಯದಿಂದಲೂ ಪ್ರೇಕ್ಷಾ ನಗರದಲ್ಲಿಯೇ ಇದ್ದರು. ಅವರ ಆತ್ಮಹತ್ಯೆಯ ಕಾರಣ ತಿಳಿಯಲು ತನಿಖೆ ನಡೆಸಲಾಗಿದೆ ಎಂದು ಹೀರಾ ನಗರ್ ಪೊಲೀಸ್ ಅಧಿಕಾರಿ ರಾಜೀವ್ ಭಡೋರಿಯಾ ತಿಳಿಸಿದ್ದಾರೆ.
ರಸ್ತೆ ಅಪಘಾತ: ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಯುವ ನಿರ್ದೇಶಕ ದುರ್ಮರಣ
ನೋವುಗಳೆಲ್ಲ ಜಾರಿ ಹೋಗಲಿ...
ನಾಲ್ಕು ದಿನಗಳ ಹಿಂದೆ ಪ್ರೇಕ್ಷಾ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೊವೊಂದನ್ನು ಹಂಚಿಕೊಂಡಿದ್ದರು. 'ನನ್ನತ್ತ ಬರುವ ಎಲ್ಲ ದುಃಖಗಳು ಹಾಗೇ ಜಾರಿಹೋಗಲಿ, ನನ್ನ ಕಂಗಳಲ್ಲಿ ನಿನ್ನನ್ನು ತುಂಬಿಕೊಂಡಿರುವೆ, ಮಾತನಾಡದೆಯೇ ನಿನ್ನೊಂದಿಗೆ ಮಾತನಾಡುತ್ತಲಿರುವೆ' ಎಂದು ಕವಿತೆಯ ಸಾಲೊಂದನ್ನು ಬರೆದುಕೊಂಡಿದ್ದರು.
ರಂಗಭೂಮಿ, ಧಾರಾವಾಹಿ
ಕ್ರೈಮ್ ಪ್ಯಾಟ್ರೋಲ್ ಧಾರಾವಾಹಿಯ ಜತೆ ಅವರು, ಮೇರಿ ದುರ್ಗಾ, ಲಾಲ್ ಇಷ್ಕ್ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದರು. ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದು, ಡಾಟರ್ ಇನ್ ಲಾ, ಡ್ರಾಪ್ಸ್, ರಾಕ್ಷಸನ್, ಇನ್ ಕಂಪ್ಲೀಟ್ ವುಮನ್ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ಇನ್ನಿಲ್ಲ