Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿ-ಬಾಸ್ ಬಗ್ಗೆ ಕೊಂಡಾಡಿದ ಅಂಬಿ ಪುತ್ರ: ನೋಡೋದು ಮಿಸ್ ಮಾಡ್ಕೋಬೇಡಿ
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಮುಂದಿನ ವಾರ ದೇಶಾದ್ಯಂತ ತೆರೆಕಾಣಲು ಸಜ್ಜಾಗಿದೆ. ಎಲ್ಲೆಡೆ ಅಮರ್ ಸಿನಿಮಾ ಪ್ರಚಾರ ಮಾಡ್ತಿರುವ ಅಭಿ ಟಿವಿ ಕಾರ್ಯಕ್ರಮವೊಂದರಲ್ಲಿ ಡಿ ಬಾಸ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
''ದರ್ಶನ್ ಅವರು ನಮ್ಮ ತಂದೆಯಂತೆ ಸ್ವಭಾವ ಹೊಂದಿದ್ದಾರೆ. ಬೇರೆಯವರನ್ನ ಬೆಳೆಸಬೇಕು ಎಂಬ ಉದ್ದೇಶ ಅವರಲ್ಲಿದೆ. ಬರಿ ನನಗೆ ಮಾತ್ರವಲ್ಲ, ಎಲ್ಲ ಸಿನಿಮಾಗಳಿಗೂ ಸಪೋರ್ಟ್ ಮಾಡ್ತಾರೆ. ಎಲ್ಲ ಟ್ರೈಲರ್, ಆಡಿಯೋ ಬಿಡುಗಡೆ ಕಾರ್ಯಕ್ರಮಗಳಲ್ಲೂ ಭಾಗಿಯಾಗ್ತಾರೆ. ಆ ಗುಣದಿಂದಲೇ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತೆ. ಈಗಲೂ ಅವರಿಲ್ಲ, ಆದರೂ ಡಿ ಬಾಸ್ ಎನ್ನುವ ಬ್ರ್ಯಾಂಡ್ ಸದ್ದು ಮಾಡುತ್ತೆ'' ಎಂದು ಖುಷಿಯಾದರು.
'ಅಮರ್' ಚಿತ್ರದಲ್ಲಿ ದರ್ಶನ್ ಮಾಡಬೇಕು ಎನ್ನುವುದು 'ಅವರ' ಆಸೆಯಂತೆ
ಅಂದ್ಹಾಗೆ, ಇದನ್ನ ಅಭಿಷೇಕ್ ಅಂಬರೀಶ್ ಹೇಳಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ಕಾರ್ಯಕ್ರಮದಲ್ಲಿ.
ಈ ವಾರದ ಎಪಿಸೋಡ್ ಗೆ ಅಂಬರೀಶ್ ಮಗ ಅಭಿ ಹಾಗೂ ಅಮರ್ ಚಿತ್ರತಂಡ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯಕ್ಕೆ ಇದು ಪ್ರೋಮೋ ಮಾತ್ರ. ಪೂರ್ತಿ ಎಪಿಸೋಡ್ ಈ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ನೋಡಬೇಕಿದೆ.
ದರ್ಶನ್ ಹೇಳಿದ ಆ ಮಾತು ನನಗೆ ದೊಡ್ಡ ಸಹಾಯ ಮಾಡಿತು: ಅಭಿಷೇಕ್
ಇನ್ನು ಅಮರ್ ಸಿನಿಮಾ ಬಗ್ಗೆ ಹೇಳುವುದಾರೇ ಮೈನಾ ಖ್ಯಾತಿ ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ತಾನ್ಯ ಹೋಪ್ ನಾಯಕಿಯಾಗಿ ನಟಿಸಿದ್ದಾರೆ.