Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಾಲಿಟಿ ಶೋ ನಲ್ಲಿ ಕಣ್ಣೀರಿಟ್ಟ ಡಾಲಿ ಧನಂಜಯ
Recommended Video
'ಸದಾ ನಿಮ್ಮೊಂದಿಗೆ' ಉದಯ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಾಲಿಟಿ ಶೋ. ಕಷ್ಟದಲ್ಲಿರುವ ಜನರಿಗಾಗಿ ಕನ್ನಡ ಸಿನಿಮಾ ಸ್ಟಾರ್ ಗಳು ಬೇರೆ ಬೇರೆ ರೀತಿಯ ವ್ಯಾಪಾರವನ್ನು ಮಾಡಿ ಅದರಿಂದ ಬರುವ ಹಣವನ್ನು ಆ ಕುಟುಂಬಕ್ಕೆ ಸಹಾಯವಾಗಿ ನೀಡುತ್ತಾರೆ.
ಕಳೆದ ಸಂಚಿಕೆಗಳಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪಲ್ಲವಿಗಾಗಿ ನಟಿ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು. ರೈತರ ಕುಟುಂಬಕ್ಕೆ ಸಹಾಯ ಮಾಡಲು ನಟ ಶ್ರೀಮುರಳಿ ಕಬ್ಬಿನ ಹಾಲು ಮಾರಿದ್ದರು.
ಇದೇ ರಿಯಾಲಿಟಿ: ಬೀದಿಬದಿಯಲ್ಲಿ ಮೂಸಂಬಿ ಜ್ಯೂಸ್ ಮಾರಿದ ಧನಂಜಯ್.!
ಎಲೆಕ್ಟ್ರಿಕ್ ಶಾಕ್ ನಿಂದಾಗಿ ಎರಡು ಕೈ ಹಾಗೂ ಒಂದು ಕಾಲು ಕಳೆದುಕೊಂಡಿದ್ದ ನಾಗೇಶ್ ಅವರಿಗಾಗಿ ಸೃಜನ್ ಲೋಕೇಶ್ ರಸ್ತೆ ಬದಿ ಚಾಟ್ಸ್ ಮಾರಿದ್ದರು. ಈ ವಾರ ನಟ ಡಾಲಿ ಧನಂಜಯ್ ರಸ್ತೆ ಬದಿಯಲ್ಲಿ ಜ್ಯೂಸ್ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಧನಂಜಯ್ ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಕಣ್ಣೀರಿಟ್ಟಿದ್ದಾರೆ. ಐದು ವರ್ಷದಿಂದ ಚಿತ್ರರಂಗದಲ್ಲಿ ಸಿನಿಮಾ ಸಿಕ್ಕರೂ ಸಕ್ಸಸ್ ಮಾತ್ರ ಸಿಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಚಿತ್ರರಂಗದವರೇ ಮಾತನಾಡಿನ ಮಾತುಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಅದೇ ಸಮಯದಲ್ಲಿ ಸದ್ಯ ಸಿಕ್ಕಿರುವ ಗೆಲುವನ್ನು ನೆನೆದು ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.