''ಇಡೀ ಭಾರತದಲ್ಲಿ ನನಗೆ ಇಷ್ಟ ಆಗುವ ದೇವಸ್ಥಾನ ಧರ್ಮಸ್ಥಳ'' - ಸಾಧು ಕೋಕಿಲ
ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲರಿಗೆ ಧರ್ಮಸ್ಥಳ ದೇವಸ್ಥಾನ ಎಂದರೆ ತುಂಬ ಇಷ್ಟವಂತೆ. ಈ ವಿಷಯವನ್ನು ಇತ್ತೀಚಿಗೆ 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಅವರು ಹೇಳಿಕೊಂಡಿದ್ದಾರೆ.
Recommended Video
ಈ ಕಾರ್ಯಕ್ರಮದಲ್ಲಿ 'ನಿಮ್ಮ ಜೀವನದ ಸೂಪರ್ ಹಿಟ್ ಸಂದರ್ಭ ಯಾವುದು?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಮ್ಮ ಜೀವನದ ಮೂರು ಘಟನೆಯನ್ನು ನೆನೆದರು.
ಕ್ಷೇತ್ರ ಮಹಾತ್ಮೆ : ನಾಡಿನ ನ್ಯಾಯದೇಗುಲ "ಧರ್ಮಸ್ಥಳ"
''ಡಾ ರಾಜ್ ಕುಮಾರ್ ಹಾಗೂ ಮದರ್ ಥೆರೆಸಾ ಅವರನ್ನು ಮುಟ್ಟಿದಾಗ ಒಂದು ವೈಬ್ರೆಷನ್ ಆಯ್ತು. ಆ ಆನಂದವನ್ನು ತಡೆದುಕೊಳ್ಳಲು ಆಗುವುದಿಲ್ಲ.'' ಎಂದು ತಮ್ಮ ಅಧ್ಬುತ ಅನುಭವವನ್ನು ವೀಕ್ಷಕರಿಗೆ ವಿವರಿಸಿದರು.

ನಂತರ ''ಇಡೀ ಭಾರತದಲ್ಲಿ ನನಗೆ ಇಷ್ಟ ಆಗುವ ದೇವಸ್ಥಾನ ಧರ್ಮಸ್ಥಳ. ಅಲ್ಲಿ ಹೋದಾಗ ಸಿಗುವ ನೆಮ್ಮದಿ ಬೇರೆಲ್ಲು ಇಲ್ಲ. ಅಲ್ಲಿ ಇರುವ ಸಮಾನತೆ ತುಂಬ ಇಷ್ಟ. ಎಲ್ಲಿಯೂ ದುಡ್ಡು ಹಾಕಲೇ ಬೇಕು ಎಂದು ಕೇಳುವುದಿಲ್ಲ. ಹಾಗಾಗಿ ನನಗೆ ಆ ದೇವಸ್ಥಾನ ಬಹಳ ಇಷ್ಟ'' ಎಂದು ಹೇಳಿದರು.
ಸಾಧು ಕೋಕಿಲ 'ಕನ್ನಡ ಕಣ್ಮಣಿ' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದು, ಶನಿವಾರ ಮತ್ತು ಭಾನುವಾರ ಕಲರ್ಸ್ ಸೂಪರ್ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗುತ್ತಿದೆ.


Click it and Unblock the Notifications











