'ಲೂಸಿಯಾ' ಚಿತ್ರ ಸತೀಶ್ ಮಾಡದೆ ಇದ್ದಿದ್ದರೇ ಹೀರೋ ಯಾರಾಗ್ತಿದ್ರು?
'ಲೂಸಿಯಾ' ಕನ್ನಡದಲ್ಲಿ ಹೊಸ ಪ್ರಯತ್ನದ ಸಿನಿಮಾಗಳು ಬರಲು ಸ್ಪೂರ್ತಿ ನೀಡಿದ ಸಿನಿಮಾ. ಈ ಚಿತ್ರದಲ್ಲಿ ನಟ ನೀನಾಸಂ ಸತೀಶ್ ಅದ್ಭುತವಾಗಿ ನಟಿಸಿದ್ದರು. ಆಕಸ್ಮತ್ 'ಲೂಸಿಯಾ' ಚಿತ್ರ ಸತೀಶ್ ಮಾಡದೆ ಇದ್ದಿದ್ದರೇ, ಅದು ಲೂಸ್ ಮಾದ ಯೋಗಿ ಅವರ ಕೈ ಸೇರುತ್ತಿತ್ತಂತೆ.
ಈ ವಿಷ್ಯವನ್ನ ಸ್ವತಃ ಲೂಸಿಯಾ ಚಿತ್ರದ ನಿರ್ದೇಶಕ ಪವನ್ ಕುಮಾರ್ ಹೇಳಿಕೊಂಡಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಪವನ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡುವಾಗ 'ಸತೀಶ್ ಬಿಟ್ಟು ಲೂಸಿಯಾ ಚಿತ್ರಕ್ಕೆ ದುನಿಯಾ ವಿಜಯ್, ಶ್ರೀನಗರ ಕಿಟ್ಟಿ, ಯೋಗಿ ಇವರಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಅಕುಲ್ ಪ್ರಶ್ನೆ ಕೇಳಿದರು.

ಅಕುಲ್ ಪ್ರಶ್ನೆಗೆ ಉತ್ತರಿಸಿದ ಪವನ್, ಲೂಸ್ ಮಾದ ಯೋಗಿ ಅವರನ್ನ ಆಯ್ಕೆ ಮಾಡಿಕೊಂಡರು. ಯಾಕಂದ್ರೆ, ಈ ಕಥೆಗೆ ಯೋಗಿ ಸೂಕ್ತವಾಗಿದ್ದಾರೆ ಎಂದು ಸ್ಪಷ್ಟನೆ ಸಹ ನೀಡಿದರು.

More from Filmibeat
English summary
Director Pavan Kumar Talk About Loose Mada Yogesh In Colors Super Channel's Popular show 'Super talk time'.


Click it and Unblock the Notifications











