Don't Miss!
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದುವರೆ ವರ್ಷ ಪ್ರೇಮ್ ವಾಟ್ಸ್ ಆಪ್ ನಲ್ಲಿ ಇರಲಿಲ್ಲ.! ಯಾಕೆ.?
ಜನಪ್ರಿಯ ಚಾಟಿಂಗ್ ಆಪ್ 'ವಾಟ್ಸ್ ಆಪ್'ನಲ್ಲಿ ಯಾರಿಲ್ಲ ಹೇಳಿ.? ನೆಟ್ ವರ್ಕ್ ಹಾಗೂ ಡೇಟಾ ಕನೆಕ್ಷನ್ ಇದ್ದರೆ ಸಾಕು, ಎಲ್ಲೇ ಇದ್ದರೂ.. ಫೋಟೋ, ವಿಡಿಯೋ, ಆಡಿಯೋ ಫೈಲ್ ಗಳನ್ನು ಸುಲಭವಾಗಿ 'ವಾಟ್ಸ್ ಆಪ್' ಮೂಲಕ ಕಳುಹಿಸಬಹುದು.
ಇಂತಿಪ್ಪ 'ವಾಟ್ಸ್ ಆಪ್'ನ ಕನ್ನಡದ ನಿರ್ದೇಶಕ ಪ್ರೇಮ್ ಒಂದುವರೆ ವರ್ಷ ಬಳಸಲಿಲ್ಲವಂತೆ. ಹಾಗಂತ ಕಿಚ್ಚ ಸುದೀಪ್ ಹೇಳಿದ್ದಾರೆ. ಅದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿರ್ದೇಶಕ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಭಾಗವಹಿಸಿದ್ದರು.
ಇದೇ ವಾರ ಪ್ರಸಾರವಾಗ್ತಿದೆ ಸುದೀಪ್ 'ನಂ.1 ಯಾರಿ' ಎಪಿಸೋಡ್
ಈ ವೇಳೆ, ಪ್ರೇಮ್ ಕಾಲೆಳೆಯುತ್ತಿದ್ದ ಕಿಚ್ಚ ಸುದೀಪ್, ''ಒಂದುವರೆ ವರ್ಷ ಪ್ರೇಮ್ ವಾಟ್ಸ್ ಆಪ್ ನಲ್ಲಿ ಇರಲಿಲ್ಲ. ಯಾಕಂದ್ರೆ, ಒಂದು ಸರಿ ನಿದ್ದೆ ಮಾಡುತ್ತಿರುವಾಗ, ನೋಟಿಫಿಕೇಷನ್ ಬಂದಿದೆ. ರಕ್ಷಿತಾ ನೋಡಿದ್ದಾರೆ. ಅದಕ್ಕೆ ವಾಟ್ಸ್ ಆಪ್ ನಲ್ಲಿ ಇರಲಿಲ್ಲ'' ಎಂದರು.
ಆಗ, ''ವಾಟ್ಸ್ ಆಪ್ ನಲ್ಲಿ ಸಣ್ಣ-ಪುಟ್ಟ ಫೋಟೋ ಕಳುಹಿಸುತ್ತಾರೆ. ಡೈರೆಕ್ಟರ್ ಆಗಿ ನಾವು ಇನ್ನೇನ್ ಮಾಡೋಕ್ಕಾಗುತ್ತೆ.?'' ಎಂದರು ಪ್ರೇಮ್. ಅದಕ್ಕೆ, ''ಡೈರೆಕ್ಟ್ ಮಾಡುವವರು ವಾಟ್ಸ್ ಆಪ್ ನಲ್ಲಿ ಸ್ಕ್ರೀನ್ ಟೆಸ್ಟ್ ಯಾಕೆ ತೆಗೆದುಕೊಳ್ಳಬೇಕು.?'' ಎಂದು ಸುದೀಪ್ ಕಿಚಾಯಿಸಿದರು.
''ಆಮೇಲಾನಾಯ್ತು.?'' ಅಂತ ಶಿವಣ್ಣ ಕೇಳಿದ್ದಕ್ಕೆ, ''ಆಮೇಲೇನಿಲ್ಲ. ಬಿಡಿ ಅಣ್ಣ...'' ಎಂದು ಟಾಪಿಕ್ ಚೇಂಜ್ ಮಾಡಿಸಿಬಿಟ್ಟರು ಪ್ರೇಮ್.