Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪ್ರೇಮಲೋಕ' ತಂಡಕ್ಕೆ ಎಂಟ್ರಿ ಕೊಟ್ಟ ಮಲ್ಲಿಕಾ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜುಲೈ 22ರಿಂದ ಪ್ರೇಮಲೋಕ ಧಾರಾವಾಹಿ ಪ್ರಸಾರವಾಗುತ್ತಿದೆ. ವಿಜಯ್ ಸೂರ್ಯ ಮತ್ತು ಅಂಕಿತಾ ಗೌಡ ಅಭಿನಯದ ಈ ಧಾರಾವಾಹಿಯಲ್ಲಿ ಈಗ ದೊಡ್ಡ ಟ್ವಿಸ್ಟ್ ಎದುರಾಗಲಿದೆ. ಸೂರ್ಯ ಪ್ರೇರಣಾ ಪ್ರೇಮಲೋಕದಲ್ಲಿ ಬಿರುಗಾಳಿಯಾಗಿ ಬಂದಿದ್ದಾಳೆ ಮಲ್ಲಿಕಾ.
ಸೂರ್ಯ ಮತ್ತು ಪ್ರೇರಣಾ ಜೀವನದಲ್ಲಿ ಪ್ರೀತಿ ಇನ್ನೂ ಸ್ಪಷ್ಟವಾಗಿ ಮೂಡಿಲ್ಲ. ಈಗಾಗಲೇ ತನ್ನ ಮನೆ ಮೇಲಿರುವ ಸಾಲ ತೀರಿಸಲು ಪ್ರೇರಣ ತನ್ನ ತಂದೆ ವಯಸ್ಸಿನವನಾಗಿರುವ ನವೀನ್ ಒಡೆಯರ್ ನನ್ನು ಮದುವೆಯಾಗಲು ಒಪ್ಪಿದ್ದಾಳೆ, ಪ್ರೇರಣಾ ಮತ್ತು ನವೀನ್ ನಡುವೆ ನಿಶ್ಚಿತಾರ್ಥ ಕೂಡ ನಡೆದಿದೆ.
ಯಾವುದೋ ಸಂರ್ದರ್ಭಕ್ಕೆ ಸಿಲುಕಿ ಪ್ರೇರಣಾ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ನಂಬಿರುವ ಸೂರ್ಯ, ಪ್ರೇರಣಾ ಮತ್ತು ನವೀನ್ ಮದುವೆಯನ್ನು ನಿಲ್ಲಿಸುವ ಪ್ರಯತ್ನದಲ್ಲಿದ್ದಾನೆ. ನವೀನ್ ಒಡೆಯರ್ ವಿರುದ್ಧ ಸಾಕ್ಷಿ ಕಲೆಹಾಕಿದ್ದಾನೆ.
ಪ್ರೇರಣಾ ಬಗ್ಗೆ ಸೂರ್ಯನಿಗಿರುವ ಕಾಳಜಿ ಪ್ರೀತಿಯಾಗಿ ಬದಲಾಗುತ್ತಿದೆ ಅನ್ನುವಷ್ಟರಲ್ಲಿ ಇವರಿಬ್ಬರ ನಡುವೆ ಬಂದಿದ್ದಾಳೆ ಮಲ್ಲಿಕಾ. ಸೌಂದರ್ಯ ಮತ್ತು ಐಶ್ವರ್ಯ ಎರಡರಲ್ಲೂ ಶ್ರೀಮಂತೆ. ಪ್ರಭಾವಿ ರಾಜಕಾರಣಿ ಮಗಳು, ಹಠ ಮತ್ತು ಸಿಟ್ಟಿಗೂ ಹೆಸರುವಾಸಿ. ಬೇಕು ಅನಿಸಿದ್ದನ್ನು ಹೇಗಾದರು ಪಡೆಯುವ ಅಂದವಾದ ರಾಕ್ಷಸಿ.
ಆಗಸ್ಟ್ 13ರಂದು ರಾತ್ರಿ 8 ಗಂಟೆಗೆ ಪ್ರೇಮಲೋಕದಲ್ಲಿ ಮಲ್ಲಿಕಾ ಎಂಟ್ರಿಯಾಗಲಿದೆ. ಇದರಿಂದ ಸೂರ್ಯ ಮತ್ತು ಪ್ರೇರಣಾ ಒಂದಾಗುತ್ತಾರಾ, ದೂರಾಗುತ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ.
ದಿವ್ಯಾ ರಾವ್ ಮಲ್ಲಿಕಾ ಪಾತ್ರದಲ್ಲಿ ಮಿಂಚಲಿದ್ದಾರೆ. ಉಳಿದಂತೆ ಪ್ರೇಮಲೋಕದಲ್ಲಿ ಹಿರಿಯ ನಟ ಬಾಲ್ ರಾಜ್, ವಾಣಿಶ್ರೀ, ನೇತ್ರಾ ಸಿಂಧ್ಯಾ, ಅಶೋಕ್ ಹೆಗೆಡೆ, ಸಿದ್ದು, ಶಾಲಿನಿ, ರವಿ ಭಟ್, ಮಾಲತಿ ಸರದೇಶಪಾಂಡೆ, ಮಾಸ್ಟರ್ ರಾಮಪ್ರಸಾದ್ , ಶಶಿರಾಜ್ , ಶೀಲಾ ಮತ್ತು ಪ್ರಜ್ಞಾ ಭಟ್ ಮುಖ್ಯಭೂಮಿಕೆಯಲ್ಲಿದ್ದಾರೆ. ಪರಿಣಿತ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಿಸಲಾಗಿರುವ 'ಪ್ರೇಮಲೋಕ'ಕ್ಕೆ, ಸಂಜೀವ್ ತಗಡೂರು ಅವರ ನಿರ್ದೇಶನವಿದೆ.