Don't Miss!
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಡಿ ಶೇಮಿಂಗ್ ಅನುಭವ ಬಿಚ್ಚಿಟ್ಟು ಕಣ್ಣೀರು ಹಾಕಿದ ದಿವ್ಯ ಸುರೇಶ್
ಕಾಲೇಜ್ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ದಿವ್ಯಾ ಸುರೇಶ್ ಮಾಡಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು. 2017ರಲ್ಲಿ ನಡೆದ 'ಸೌತ್ ಇಂಡಿಯಾ ಮಿಸ್' ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇಲ್ಲಿಂದಲೇ ದಿವ್ಯ ಅವರ ವೃತ್ತಿ ಜೀವನ ಆರಂಭವಾಗಿತ್ತು.
ಅದಾದ ಬಳಿಕ ಕನ್ನಡ-ತೆಲುಗು ಚಲನಚಿತ್ರಗಳಲ್ಲಿ ನಟಿಸಿದರು. ಜೊತೆಗೆ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಖತ್ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ದಿವ್ಯ ಸುರೇಶ ಒಂದು ಸಮಯದಲ್ಲಿ ಬಾಡಿ ಶೇಮಿಂಗ್ಗೆ ಒಳಗಾಗಿದ್ದರು. ಕಾಲೇಜಿನಲ್ಲಿ ಓದುತ್ತಿದ್ದಾಗ ಎಲ್ಲರೂ ರೇಗಿಸುತ್ತಿದ್ದರು ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಮುಂದೆ ಓದಿ....
Bigg Boss Kannada 8: ನಿರ್ಮಲಾ ರಾಜ್ಯ ಪ್ರಶಸ್ತಿ ಗೆದ್ದಿದ್ದು ಯಾರಿಗೂ ಗೊತ್ತಾಗಲಿಲ್ಲ ಯಾಕೆ?
ತಲೆಗೆ ಎಣ್ಣೆ ಹಾಕ್ಕೊಂಡು ಬರ್ತಾಳೆ
''ಪಿಯುಸಿ ಮುಗಿಸಿ ಡಿಗ್ರಿ ಮಾಡುವಾಗ ನಾನು ಬಹಳ ಮುಗ್ದ ರೀತಿಯಲ್ಲಿದ್ದೇ. ತಲೆಗೆ ಎಣ್ಣೆ ಹಾಕ್ಕೊಂಡು ಚೂಡಿದಾರ್ ಹಾಕ್ಕೊಂಡು ಕಾಲೇಜ್ಗೆ ಹೋಗ್ತಿದ್ದೆ. ಕೆಲವರು ಇದನ್ನೇ ಮಹಾ ಅಪರಾಧ ಎಂಬಂತೆ ಕಾಲೆಳೆಯುತ್ತಿದ್ದರು. ಬಾಡಿ ಶೇಮಿಂಗ್ ಮಾಡ್ತಿದ್ದರು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈಗ ಸೂಪರ್ ಮಾಡೆಲ್
''ನಾಲ್ಕು ವರ್ಷದ ಹಿಂದೆ ಬಾಡಿ ಶೇಮಿಂಗ್ ಮಾಡ್ತಿದ್ದ ಹುಡುಗಿ ಈಗ ಸೂಪರ್ ಮಾಡೆಲ್ ಎಂದು ಹೇಳಿದಾಗ ತುಂಬಾ ಖುಷಿ ಆಯ್ತು. ಅಂದು ತುಂಬಾ ಎತ್ತರ ಇದ್ದಾಳೆ, ಚೂಡಿದಾರ್ ಹಾಕ್ಕೊಂಡು ಬರ್ತಾಳೆ ಅಂದಿದ್ದವರು ಈಗ ನನ್ನನ್ನು ನೋಡಿ ತುಂಬಾ ಚೆನ್ನಾಗಿದ್ದಾಳೆ ಅಂತಾರೆ. ದಯವಿಟ್ಟು ಯಾರಿಗೂ ಬಾಡಿ ಶೇಮಿಂಗ್ ಮಾಡಬೇಡಿ'' ಎಂದು ಭಾವುಕರಾದರು.
ಬಿಗ್ ಮನೆಯಲ್ಲಿ ಪ್ರಾರಂಭವಾಯ್ತು ಸ್ಪರ್ಧಿಗಳ ಕಿತ್ತಾಟ: ಕ್ಯಾಪ್ಟನ್ ವಿರುದ್ಧ ಸಂಬರ್ಗಿ ಕೆಂಡಾಮಂಡಲ
ನಾನೊಬ್ಬಳು ಸ್ಫೂರ್ತಿ
''ಈ ವಿಚಾರದಲ್ಲಿ ನಾನು ಇತರೆ ಜನರಿಗೆ ಸ್ಫೂರ್ತಿ. ನಿನ್ನ ಎಷ್ಟೇ ಕೆಟ್ಟದಾಗಿ ನೋಡಿದ್ರು, ಎದ್ದು ನಿಂತ್ಕೊಂಡು ನೋಡು ನಾನು ಗೆದ್ದಿದ್ದೀನಿ ಎಂದು ತೋರಿಸುವುದು ಬಹಳ ಹೆಮ್ಮೆ ಇದೆ. ನೀನು ಎಲ್ಲಿಂದ ಬಂದಿದ್ದೀಯಾ, ನಿನ್ನ ಹಿನ್ನೆಲೆ ಏನು ಎನ್ನುವುದು ಮುಖ್ಯವೇ ಅಲ್ಲ. ನಿನ್ನಲ್ಲಿ ಛಲ ಇರಬೇಕು, ಕನಸು ಕಾಣಬೇಕು, ಅದಕ್ಕೆ ಬೆಲೆ ಕೊಡಬೇಕು'' ಎಂದು ದಿವ್ಯ ಸುರೇಶ್ ಹೇಳಿದ್ದಾರೆ.
ರನ್ನಿಂಗ್ ರೇಸ್ನಲ್ಲಿ ಪ್ರಶಸ್ತಿ
ನನ್ನನ್ನು ಬಾಡಿ ಶೇಮಿಂಗ್ ಮಾಡ್ತಿದ್ದವರಿಗೆ ಉತ್ತರ ಕೊಟ್ಟಿದ್ದು ಈ ಪ್ರಶಸ್ತಿ ಮೂಲಕ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಕಾಲೇಜಿನಲ್ಲಿ ರನ್ನಿಂಗ್ ರೇಸ್ನಲ್ಲಿ ಪಡೆದ ಪ್ರಶಸ್ತಿ ಬಗ್ಗೆ ದಿವ್ಯ ಹೇಳಿದರು. ''ಚೂಡಿದಾರ್ ಹಾಕ್ಕೊಂಡು ಅಡುಗೆನೂ ಮಾಡ್ತೀನಿ, ಚಡ್ಡಿ ಹಾಕ್ಕೊಂಡು ನಿಮ್ಮಪ್ಪನ ಗಾಡಿನೂ ಓಡಿಸ್ತೀನಿ'' ಎಂದು ಟಾಂಗ್ ಕೊಟ್ಟಿದ್ದನ್ನು ಸ್ಮರಿಸಿಕೊಂಡರು.