Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿಎನ್ ಸೀತಾರಾಂ ಜೊತೆ ಕೆಲಸ ಮಾಡುವ ಕೌಶಲ್ಯ ನಿಮ್ಮಲ್ಲಿದೆಯೆ?
ಕನ್ನಡ ಟಿವಿ ಧಾರಾವಾಹಿ ವೀಕ್ಷಕರ ಪಾಲಿನ ಸ್ಟಾರ್ ನಿರ್ದೇಶಕ ಟಿಎನ್ ಸೀತಾರಾಂ ಅವರ ಧಾರಾವಾಹಿ ಬರುತ್ತದೆಂದರೆ ನೋಡುಗರ ಕಣ್ಣು ಕಿವಿಗಳು ಅಗಲವಾಗುತ್ತವೆ, ಮನಸ್ಸು ಚಟಪಡಿಸುತ್ತದೆ. ಮಾಯಾಮೃಗ, ಮುಕ್ತ, ಮುಕ್ತ ಮುಕ್ತ ಮುಂತಾದ ಧಾರಾವಾಹಿಗಳ ಮೂಲಕ ಆ ಪರಿ ಹುಚ್ಚು ಹಿಡಿಸಿದ್ದಾರೆ ಸೀತಾರಾಂ ತಲಗವಾರ್, ಗೌರಿಬಿದನೂರು.
ಅವರ ಸೀರಿಯಲ್ಲು ನೋಡುವುದು ನೋಡುಗರ ಪಾಲಿನ ರಸಗವಳವಾದರೆ, ಅವರೊಂದಿಗೆ ಕೆಲಸ ಮಾಡುವುದು ಹಲವಾರು ಕಲಾವಿದರ ಪಾಲಿಗೆ ಪ್ರತಿಷ್ಠೆಯ ಸಂಗತಿ. ಕಲಾವಿದರಿಂದ, ತಂತ್ರಜ್ಞರಿಂದ ಅಷ್ಟು ಶಿಸ್ತುಬದ್ಧವಾಗಿ ಕೆಲಸ ತೆಗೆಸುವುದನ್ನು ಸೀತಾರಾಂ ಬಲ್ಲರು.
ಈಗ ಅವರೊಂದಿಗೆ ಧಾರಾವಾಹಿಯಲ್ಲಿ ಕನ್ನಡವನ್ನು ಅವರಿಗಿಷ್ಟವಾಗುವಂತೆ ಬರೆಯಬಲ್ಲ ನಿರ್ದೇಶಕರಿಗೆ ಅದ್ಭುತ ಅವಕಾಶವನ್ನು ಸೀತಾರಾಂ ಅವರು ದೊರಕಿಸಿಕೊಟ್ಟಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ಕಿನಲ್ಲಿ ಸ್ಟೇಟಸ್ ಹಾಕಿದ್ದಾರೆ. ನಾಮುಂದು ತಾಮುಂದು ಎಂದು ಮುನ್ನುಗ್ಗುವ ಮುನ್ನ ಅವರು ಕೆಲವೊಂದು ಷರತ್ತುಗಳನ್ನು ಒಡ್ಡಿದ್ದಾರೆ.
ಆ ಷರತ್ತುಗಳು ನಿಮಗೆ ಒಪ್ಪಿಗೆಯಾದರೆ, ಸೀತಾರಾಂ ಅವರು ಬಯಸುವ ಅರ್ಹತೆಗಳು ನಿಮ್ಮಲ್ಲಿ ಇದ್ದಲ್ಲಿ, ಕನ್ನಡದ ಬಗ್ಗೆ ಅಪಾರವಾದ ಪ್ರೀತಿ ಇದ್ದರೆ, ಕವನಗಳನ್ನು ಕರತಲಾಮಲಕ ಮಾಡಿಕೊಂಡಿದ್ದರೆ, ಕೋರ್ಟು ಕಚೇರಿಗಳ ಬಗ್ಗೆ ಅಲ್ಪಸ್ವಲ್ಪ ಜ್ಞಾನವಿದ್ದರೆ ಒಂದು ಕೈ ನೋಡಿಯೇಬಿಡಿ. ಆಲ್ ದಿ ಬೆಸ್ಟ್. ಕೆಳಗಿದೆ ನೋಡಿ ಸೀತಾರಾಂ ಅವರ ಸ್ಟೇಟಸ್ಸು. [ತಂದೆ ಸಾವಿಗೆ ಪರೋಕ್ಷ ಕಾರಣನಾದೆ: ಟಿಎನ್ ಸೀತಾರಾಮ್]
***
ನನ್ನ
ಜತೆ
ಧಾರಾವಾಹಿಗಳಲ್ಲಿ
ನಿರ್ದೇಶನ
ಮತ್ತು
ಬರವಣಿಗೆಯಲ್ಲಿ
ಕೆಲಸ
ಮಾಡಲು
ಆಸಕ್ತಿ
ಇರುವವರು
ಫೇಸ್ಬುಕ್
ನ
ನನ್ನ
ಇನ್ಬಾಕ್ಸ್
ಮೂಲಕ
ನನ್ನನ್ನು
ದಯವಿಟ್ಟು
ಸ೦ಪರ್ಕಿಸಿ...
ಆಸಕ್ತಿ
ಇದ್ದರೆ
ಮಾತ್ರ
ಸಾಕಾಗಲಾರದು...
1)
ಸಾಹಿತ್ಯದಲ್ಲಿ
ಆಸಕ್ತಿ
ಮತ್ತು
ಕನ್ನಡದ
ಬಗ್ಗೆ
ಪ್ರೀತಿ
ಇರಬೇಕು.
ಕನ್ನಡದಲ್ಲಿ
ಮಾತನಾಡಲು
ಮತ್ತು
ಬರೆಯಲು
ಬರಬೇಕು.
2)
ಕಾನೂನಿನ
ಸಾಮಾನ್ಯ
ಜ್ಞಾನ
ಇರಬೇಕು.
ಕಾನೂನು
ಪದವಿಧರರಾದರೆ
ಅತ್ಯುತ್ತಮ.
3)
ಇ೦ಟರ್ನೆಟ್
ಮೂಲಕ
ಮಾಹಿತಿ
ಕಲೆ
ಹಾಕುವ
ಜ್ಞಾನ
ಅತ್ಯವಶ್ಯ.
ಮತ್ತಷ್ಟು ಸ೦ಗತಿಗಳು (ಕಂಡಿಷನ್ನುಗಳು)
1)
ನಮ್ಮ
ಕಥೆಗಳನ್ನು
ಬೇರೆಯವರ
ಬಳಿ
ಹೋಗಿ
ಹೇಳುವ
ಅಭ್ಯಾಸ
ಇರದಿದ್ದರೆ
ಉತ್ತಮ.
2)
ಪಾತ್ರಗಳನ್ನು
ಮಾಡುವ
ಗುಪ್ತ
ಆಸೆಯಿಟ್ಟುಕೊ೦ಡು,
ಬರಹಗಾರರ
ವೇಷದಲ್ಲಿ
ಬರುವವರಿಗೆ
ಇಲ್ಲಿ
ಪ್ರೋತ್ಸಾಹವಿಲ್ಲ.
3)
ನಿರುದ್ಯೋಗಿಗಳಿಗೆ
ಆದ್ಯತೆ...
(ಮನೆಯಿ೦ದ
ಹೇಳದೆ
ಓಡಿ
ಬ೦ದವರು
ತ೦ದೆ,
ತಾಯಿಯರ
ಅನುಮತಿ
ಪಡೆದು
ಬ೦ದರೆ
ಉತ್ತಮ)
4)
ನನ್ನ
ವಿರುದ್ಧ
ಗೊಣಗುವುದಾದರೆ
ಮನಸ್ಸಿನಲ್ಲಿ
ಗೊಣಗಿಕೊಳ್ಳುವುದನ್ನು
ಕಲಿಯಬೇಕು.
5)
ಸ೦ಬಳ
ನಿಶ್ಚಿತ...
ತಾರೀಕು
ಅನಿಶ್ಚಿತ
.......ಇತ್ಯಾದಿ.
[ಅಮ್ಮನ
ದಿನಕ್ಕಾಗಿ
ಟಿಎನ್
ಸೀತಾರಾಂ
ನೆನಪುಗಳು]