Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈಟಿವಿ ಯಲ್ಲಿ ವೀಕ್ಷಿಸಿ 'ಶ್ರೀ ರಾಘವೇಂದ್ರ ಮಹಿಮೆ'
ಕಲಾಗೊಂಗೋತ್ರಿ ಮಂಜು ನಿರ್ದೇಶನದ ಈ ಧಾರಾವಾಹಿ ಈಟಿವಿ ಕನ್ನಡದಲ್ಲಿ ಇಂದಿನಿಂದ (13 ಆಗಸ್ಟ್ 2012) ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8-00 ಗಂಟೆಗೆ ಪ್ರಸಾರವಾಗಲಿದೆ. ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರಧಾರಿಯಾಗಿ ಹಿರಿಯ ನಟ ಶ್ರೀಧರ್ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ಕಾಲ ಸಾಕಷ್ಟು ಬಾರಿ ಶಿವನ ಪಾತ್ರ ಮಾಡಿದ್ದ ನಟ ಶ್ರೀಧರ್, ಇದೇ ಮೊದಲ ಬಾರಿಗೆ ರಾಘವೇಂದ್ರ ಸ್ವಾಮಿ ಪಾತ್ರ ಪೋಷಿಸುತ್ತಿದ್ದಾರೆ.
"ಈ ಧಾರಾವಾಹಿಯಲ್ಲಿ ನಾವು ಪುರಾಣದಲ್ಲಿ ಉಲ್ಲೇಖಿಸಿರುವ ವಿಷಯ ಬಿಟ್ಟು ಬೇರೆ ಹೊಸದಾಗಿ ಏನನ್ನೂ ಹೇಳಲಾಗುವುದಿಲ್ಲ. ಬರಲಿರುವ ಹೊಸ 'ಶ್ರೀ ರಾಘವೇಂದ್ರ ಮಹಿಮೆ' ಧಾರಾವಾಹಿಯಲ್ಲಿ ಕೂಡ ಈ ಹಿಂದೆ ಹೇಳಲಾಗಿರುವ ರಾಯರ ಕಥೆಗಳು, ಪವಾಡಗಳು ಹಾಗೂ ಮಹಿಮೆಗಳನ್ನು ಸಾರುವಂತಹ ಕಥೆಯೇ ಇದೆ. ಆದರೆ ನಮ್ಮ ನಿರೂಪಣೆ ವಿಭಿನ್ನವಾಗಿ ಮೂಡಿಬರಲಿದೆ.
ಈ ಧಾರಾವಾಹಿಯ ಮೂಲಕ ರಾಯರು ಬೃಂದಾವನ ಸೇರಿದ ನಂತರದ ಘಟನೆಗಳನ್ನು ಹೇಳುವ ಪ್ರಯತ್ನ ನಮ್ಮದು. ಇದೊಂದು ಪೌರಾಣಿಕ ಧಾರಾವಾಹಿಯಾದ್ದರಿಂದ ನಾವು ಪುರಾಣದ, ಐತಿಹ್ಯದ ಚೌಕಟ್ಟಿನಲ್ಲೇ ಸಾಗಬೇಕು. ಆದರೆ ಈ ಧಾರಾವಾಹಿ ಮೂಲಕ ರಾಯರ ಬಗೆಗಿನ ಹೊಸ ಇನ್ನಷ್ಟು ಅಂಶಗಳನ್ನು ಹೇಳುವ ಪ್ರಯತ್ನ ಮಾಡುತ್ತೇವೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ನಟ ಶ್ರೀಧರ್, ಪಾತ್ರಕ್ಕೆ ಬಹಳಷ್ಟು ಹೊಂದಿಕೊಂಡಿದ್ದಾರೆ.
ಶ್ರೀ ರಾಘವೇಂದ್ರ ವೈಭವ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿ ಭವ್ಯಶ್ರೀ ರೈ ಕೂಡ ನಟಿಸಿದ್ದಾರೆ. ಈ ಧಾರಾವಾಹಿ ಬಹಳಷ್ಟು ಶ್ರೀಮಂತವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ಕೆಲವು ದೃಶ್ಯಗಳ ಚಿತ್ರೀಕರಣಕ್ಕಾಗಿ ಸೆಟ್ ಕೂಡ ಹಾಕಲಾಗಿದೆ" ಎಂದಿದ್ದಾರೆ ನಿರ್ದೇಶಕರಾದ ಕಲಾ ಗಂಗೋತ್ರಿ. ಇಂದಿನಿಂದ ರಾತ್ರಿ 8-00 ಕ್ಕೆ ಈಟಿವಿ ಕನ್ನಡ, ರಾಘವೇಂದ್ರ ಸ್ವಾಮಿ ಭಕ್ತರಿಗೆ ಮತ್ತೊಮ್ಮೆ ಕಿರುತೆರೆಯಲ್ಲಿ ರಾಯರ ದರ್ಶನ ಭಾಗ್ಯ ಕಲ್ಪಿಸಲಿದೆ. (ಒನ್ ಇಂಡಿಯಾ ಕನ್ನಡ)