Don't Miss!
- News ಪಿಎಸ್ ಐ ಪರೀಕ್ಷೆ ಅಕ್ರಮ ಆರೋಪಿ ಮನೆಗೆ ಉಮೇಶ್ ಜಾಧವ ಭೇಟಿ : ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈಟಿವಿ ಯಲ್ಲಿ ವೀಕ್ಷಿಸಿ 'ಶ್ರೀ ರಾಘವೇಂದ್ರ ಮಹಿಮೆ'
ಕಲಾಗೊಂಗೋತ್ರಿ ಮಂಜು ನಿರ್ದೇಶನದ ಈ ಧಾರಾವಾಹಿ ಈಟಿವಿ ಕನ್ನಡದಲ್ಲಿ ಇಂದಿನಿಂದ (13 ಆಗಸ್ಟ್ 2012) ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8-00 ಗಂಟೆಗೆ ಪ್ರಸಾರವಾಗಲಿದೆ. ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರಧಾರಿಯಾಗಿ ಹಿರಿಯ ನಟ ಶ್ರೀಧರ್ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ಕಾಲ ಸಾಕಷ್ಟು ಬಾರಿ ಶಿವನ ಪಾತ್ರ ಮಾಡಿದ್ದ ನಟ ಶ್ರೀಧರ್, ಇದೇ ಮೊದಲ ಬಾರಿಗೆ ರಾಘವೇಂದ್ರ ಸ್ವಾಮಿ ಪಾತ್ರ ಪೋಷಿಸುತ್ತಿದ್ದಾರೆ.
"ಈ ಧಾರಾವಾಹಿಯಲ್ಲಿ ನಾವು ಪುರಾಣದಲ್ಲಿ ಉಲ್ಲೇಖಿಸಿರುವ ವಿಷಯ ಬಿಟ್ಟು ಬೇರೆ ಹೊಸದಾಗಿ ಏನನ್ನೂ ಹೇಳಲಾಗುವುದಿಲ್ಲ. ಬರಲಿರುವ ಹೊಸ 'ಶ್ರೀ ರಾಘವೇಂದ್ರ ಮಹಿಮೆ' ಧಾರಾವಾಹಿಯಲ್ಲಿ ಕೂಡ ಈ ಹಿಂದೆ ಹೇಳಲಾಗಿರುವ ರಾಯರ ಕಥೆಗಳು, ಪವಾಡಗಳು ಹಾಗೂ ಮಹಿಮೆಗಳನ್ನು ಸಾರುವಂತಹ ಕಥೆಯೇ ಇದೆ. ಆದರೆ ನಮ್ಮ ನಿರೂಪಣೆ ವಿಭಿನ್ನವಾಗಿ ಮೂಡಿಬರಲಿದೆ.
ಈ ಧಾರಾವಾಹಿಯ ಮೂಲಕ ರಾಯರು ಬೃಂದಾವನ ಸೇರಿದ ನಂತರದ ಘಟನೆಗಳನ್ನು ಹೇಳುವ ಪ್ರಯತ್ನ ನಮ್ಮದು. ಇದೊಂದು ಪೌರಾಣಿಕ ಧಾರಾವಾಹಿಯಾದ್ದರಿಂದ ನಾವು ಪುರಾಣದ, ಐತಿಹ್ಯದ ಚೌಕಟ್ಟಿನಲ್ಲೇ ಸಾಗಬೇಕು. ಆದರೆ ಈ ಧಾರಾವಾಹಿ ಮೂಲಕ ರಾಯರ ಬಗೆಗಿನ ಹೊಸ ಇನ್ನಷ್ಟು ಅಂಶಗಳನ್ನು ಹೇಳುವ ಪ್ರಯತ್ನ ಮಾಡುತ್ತೇವೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ನಟ ಶ್ರೀಧರ್, ಪಾತ್ರಕ್ಕೆ ಬಹಳಷ್ಟು ಹೊಂದಿಕೊಂಡಿದ್ದಾರೆ.
ಶ್ರೀ ರಾಘವೇಂದ್ರ ವೈಭವ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿ ಭವ್ಯಶ್ರೀ ರೈ ಕೂಡ ನಟಿಸಿದ್ದಾರೆ. ಈ ಧಾರಾವಾಹಿ ಬಹಳಷ್ಟು ಶ್ರೀಮಂತವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ಕೆಲವು ದೃಶ್ಯಗಳ ಚಿತ್ರೀಕರಣಕ್ಕಾಗಿ ಸೆಟ್ ಕೂಡ ಹಾಕಲಾಗಿದೆ" ಎಂದಿದ್ದಾರೆ ನಿರ್ದೇಶಕರಾದ ಕಲಾ ಗಂಗೋತ್ರಿ. ಇಂದಿನಿಂದ ರಾತ್ರಿ 8-00 ಕ್ಕೆ ಈಟಿವಿ ಕನ್ನಡ, ರಾಘವೇಂದ್ರ ಸ್ವಾಮಿ ಭಕ್ತರಿಗೆ ಮತ್ತೊಮ್ಮೆ ಕಿರುತೆರೆಯಲ್ಲಿ ರಾಯರ ದರ್ಶನ ಭಾಗ್ಯ ಕಲ್ಪಿಸಲಿದೆ. (ಒನ್ ಇಂಡಿಯಾ ಕನ್ನಡ)