Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಸಿನಿಮಾರಂಗಕ್ಕೆ ಬರಲು ಮೊದಲ ಮೆಟ್ಟಿಲಾಗಿದ್ದು ಈ ವ್ಯಕ್ತಿ.!
ಗಣೇಶ್ ಅವರಿಗೆ ಸಿನಿಮಾರಂಗಕ್ಕೆ ಬರಬೇಕು ಎನ್ನುವುದು ಚಿಕ್ಕವಯಸ್ಸಿನ ಕನಸು. ಹಾಗಾಗಿಯೇ, ಸ್ಕೂಲ್ ಗೆ ಕೂಡ ಸರಿಯಾಗಿ ಹೋಗದೇ, ಮೆಜೆಸ್ಟಿಕ್ ನಲ್ಲಿ ಸಿನಿಮಾ ನೋಡಲು ಹೋಗುತ್ತಿದ್ದರು. ಕಾಲೇಜು ದಿನಗಳಲ್ಲಿ ಸಿನಿಮಾ ಕನಸು ಮತ್ತಷ್ಟು ಹೆಚ್ಚಾಗಿತು.
ಹೀಗಿರುವಾಗ, ಒಂದು ಅವಕಾಶಕ್ಕಾಗಿ ಕಾಯುತ್ತಾ ಕೂತಿದ್ದರಂತೆ ಗಣೇಶ್. ಈ ಮಧ್ಯೆ ಕಾಲೇಜ್, ಜೊತೆಗೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಆಗಲೇ ಸಿಕ್ಕಿದ್ದು ಗಣೇಶ್ ಪಾಲಿನ ಮೊದಲ ಹೀರೋ. ಅವರ ಹೆಸರು ವೀರಮಾರೇಗೌಡ.
ಯಶಸ್ಸಿನ ಅಮಲು ಗಣೇಶ್ ನೆತ್ತಿಗೇರಿರಲಿಲ್ಲ: ಬಂದ ದಾರಿ ಮರೆಯಲಿಲ್ಲ.!
ಅಡಕಮಾರನಹಳ್ಳಿಯಲ್ಲಿ ಜಾತ್ರೆಯಲ್ಲಿ ವೀರಮಾರೇಗೌಡರು ಒಂದು ನಾಟಕ ಮಾಡಿದರು. ಆ ನಾಟಕದಲ್ಲಿ ಗಣೇಶ್ ಅವರು ಕೂಡ ಅಭಿನಯಸಿದ್ದರು. ಆಗ ಗಣೇಶ್ ಅಭಿನಯ ನೋಡಿ ಇಷ್ಟಪಟ್ಟ ವೀರಮಾರೇಗೌಡರು ಗಣೇಶ್ ಗೆ ಸಹಾಯ ಮಾಡಿದರಂತೆ. ಆದರ್ಶ ಫಿಲ್ಮ್ ಇನ್ಸೂಟ್ಯೂಟ್ ನಲ್ಲಿ ಬಿ.ಆರ್.ಪಿ ಪುಟ್ಟಸ್ವಾಮಿ ಎಂಬ ಆತ್ಮೀಯರೊಬ್ಬರು ಮೂಲಕ ಗಣೇಶ್ ಬಗ್ಗೆ ಹೇಳಿ ಸಹಾಯ ಮಾಡಿ ಎಂದು ಅಲ್ಲಿಗೆ ಸೇರಿಸಿದ್ದರಂತೆ. ಇದು ಗಣೇಶ್ ಸಿನಿ ಪ್ರಪಂಚಕ್ಕೆ ಕಾಲಿಡಲು ಮೊದಲ ಮೆಟ್ಟಿಲಾಯಿತ್ತಂತೆ. ಅದಕ್ಕೆ ಕಾರಣ ಇದೇ ವೀರಮಾರೇಗೌಡರು.
'ಗೋಲ್ಡನ್ ಸ್ಟಾರ್' ಗಣೇಶ್ ಬಗ್ಗೆ ದುನಿಯಾ ವಿಜಯ್ ಏನಂದರು.?
ಆದರ್ಶ ಫಿಲ್ಮ್ ಇನ್ಸೂಟ್ಯೂಟ್ ನಲ್ಲಿ ಗಣೇಶ್ ಅವರಿಗೆ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಬಂದಾಗ, ಸೂಟ್ ಹಾಕ್ಕೊಂಡು ಬನ್ನಿ ಅಂದ್ರಂತೆ. ಆಗ ಗಣೇಶ್ ಅವರು ವೀರಮಾರೇಗೌಡರ ಬಳಿ ಸೂಟ್ ತಗೊಂಡು ಹೋಗಿದ್ದರಂತೆ. ಅದನ್ನ ಈಗಲೂ ಲಕ್ಕಿ ಸೂಟ್ ಎಂದು ಜೋಪಾನವಾಗಿ ಕಾಪಾಡಿಕೊಂಡಿದ್ದಾರಂತೆ.
ಮದುವೆ ಆರ್ಕೆಸ್ಟ್ರಾದಲ್ಲಿ ಗಣೇಶ್ ಡ್ಯಾನ್ಸ್ ನೋಡಿದ್ರೆ ಎದ್ದು ಬಿದ್ದು ನಗ್ತೀರಾ!