Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ಕಥೆ ಏನು.?
ಬ್ಲಾಕ್ ಬಸ್ಟರ್ 'ಮುಂಗಾರು ಮಳೆ' ಹಾಗೂ ಸೂಪರ್ ಹಿಟ್ 'ಗಾಳಿಪಟ' ಸಿನಿಮಾ ಬಳಿಕ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗಣೇಶ್ ಒಂದಾಗಿರುವ ಸಿನಿಮಾ 'ಮುಗುಳು ನಗೆ'.
ಎರಡು ಹಿಟ್ ಗಳನ್ನು ಕೊಟ್ಟಿರುವ ಈ ಜೋಡಿಯ ಹ್ಯಾಟ್ರಿಕ್ ಸಿನಿಮಾ 'ಮುಗುಳು ನಗೆ' ಮೇಲೆ ಈಗ ಎಲ್ಲರ ಕಣ್ಣಿದೆ.
ದಾಖಲೆ ಬೆಲೆಗೆ ಮಾರಾಟ ಆಗಿದೆ 'ಮುಗುಳು ನಗೆ' ಆಡಿಯೋ ರೈಟ್ಸ್
ಕಳೆದ ಎರಡು ಚಿತ್ರಗಳಂತೆ, 'ಮುಗುಳು ನಗೆ' ಸಿನಿಮಾದಲ್ಲೂ ಮಳೆ ಸುರಿಯಲಿದ್ಯಾ.? 'ಮುಗುಳು ನಗೆ' ಚಿತ್ರದ ಕಥೆ ಏನು.? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲಿಯೂ ಕಾಡುತ್ತಿತ್ತು. ಈ ಪ್ರಶ್ನೆಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಉತ್ತರ ಕೊಟ್ಟಿದ್ದಾರೆ.
''ಎಂದೆಂದೂ ಅಳಲು ಬಾರದ ಮಗುವಿನ ಕಥೆ ಇದು. ಹುಟ್ಟಿದಾಗಿನಿಂದಲೂ ಒಂದೇ ಒಂದು ಕಣ್ಣೀರು ಆಚೆ ಬಂದಿರುವುದಿಲ್ಲ. ಡಾಕ್ಟರ್ ಹತ್ತಿರ ತೋರಿಸಿದರೂ ಪ್ರಯೋಜನ ಆಗಿರುವುದಿಲ್ಲ. ಕಡೆಗೆ ಬದುಕಿನಲ್ಲಿ ಹುಡುಗಿಯರು, ತಂದೆ-ತಾಯಿ, ಸ್ನೇಹಿತರು... ಎಲ್ಲರದ್ದೂ ಒಂದೊಂದು ಕಥೆ ಇದೆ. ಆ ಐದಾರು ಕಥೆಗಳು ಸೇರಿ ಎಂದೆಂದೂ ಕಣ್ಣೀರು ಬಾರದ ಮಗುವಿಗೆ ಒಂದು ದಿನ ಕಣ್ಣೀರು ಬರುತ್ತದೆ. ಒಂದು ಹನಿ ಕಣ್ಣೀರ ಕಥೆ 'ಮುಗುಳು ನಗೆ'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್ ಹೇಳಿದರು.
ಬಹು ನಿರೀಕ್ಷಿತ 'ಮುಗುಳು ನಗೆ' ಸಿನಿಮಾ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ.