Don't Miss!
- Automobiles ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- News CAA: ಸಿಎಎ ಜಾರಿ ಪ್ರಶ್ನಿಸಿ 230ಕ್ಕೂ ಹೆಚ್ಚು ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ಕಥೆ ಏನು.?
ಬ್ಲಾಕ್ ಬಸ್ಟರ್ 'ಮುಂಗಾರು ಮಳೆ' ಹಾಗೂ ಸೂಪರ್ ಹಿಟ್ 'ಗಾಳಿಪಟ' ಸಿನಿಮಾ ಬಳಿಕ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗಣೇಶ್ ಒಂದಾಗಿರುವ ಸಿನಿಮಾ 'ಮುಗುಳು ನಗೆ'.
ಎರಡು ಹಿಟ್ ಗಳನ್ನು ಕೊಟ್ಟಿರುವ ಈ ಜೋಡಿಯ ಹ್ಯಾಟ್ರಿಕ್ ಸಿನಿಮಾ 'ಮುಗುಳು ನಗೆ' ಮೇಲೆ ಈಗ ಎಲ್ಲರ ಕಣ್ಣಿದೆ.
ದಾಖಲೆ ಬೆಲೆಗೆ ಮಾರಾಟ ಆಗಿದೆ 'ಮುಗುಳು ನಗೆ' ಆಡಿಯೋ ರೈಟ್ಸ್
ಕಳೆದ ಎರಡು ಚಿತ್ರಗಳಂತೆ, 'ಮುಗುಳು ನಗೆ' ಸಿನಿಮಾದಲ್ಲೂ ಮಳೆ ಸುರಿಯಲಿದ್ಯಾ.? 'ಮುಗುಳು ನಗೆ' ಚಿತ್ರದ ಕಥೆ ಏನು.? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲಿಯೂ ಕಾಡುತ್ತಿತ್ತು. ಈ ಪ್ರಶ್ನೆಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಉತ್ತರ ಕೊಟ್ಟಿದ್ದಾರೆ.
''ಎಂದೆಂದೂ ಅಳಲು ಬಾರದ ಮಗುವಿನ ಕಥೆ ಇದು. ಹುಟ್ಟಿದಾಗಿನಿಂದಲೂ ಒಂದೇ ಒಂದು ಕಣ್ಣೀರು ಆಚೆ ಬಂದಿರುವುದಿಲ್ಲ. ಡಾಕ್ಟರ್ ಹತ್ತಿರ ತೋರಿಸಿದರೂ ಪ್ರಯೋಜನ ಆಗಿರುವುದಿಲ್ಲ. ಕಡೆಗೆ ಬದುಕಿನಲ್ಲಿ ಹುಡುಗಿಯರು, ತಂದೆ-ತಾಯಿ, ಸ್ನೇಹಿತರು... ಎಲ್ಲರದ್ದೂ ಒಂದೊಂದು ಕಥೆ ಇದೆ. ಆ ಐದಾರು ಕಥೆಗಳು ಸೇರಿ ಎಂದೆಂದೂ ಕಣ್ಣೀರು ಬಾರದ ಮಗುವಿಗೆ ಒಂದು ದಿನ ಕಣ್ಣೀರು ಬರುತ್ತದೆ. ಒಂದು ಹನಿ ಕಣ್ಣೀರ ಕಥೆ 'ಮುಗುಳು ನಗೆ'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್ ಹೇಳಿದರು.
ಬಹು ನಿರೀಕ್ಷಿತ 'ಮುಗುಳು ನಗೆ' ಸಿನಿಮಾ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ.