Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮೂಲ್ಯ ಮೇಲೆ ವೇದಂತ್ಗೆ ಅನುಮಾನ!
'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಈಗ ಗರ್ಭಿಣಿಯಾಗಿದ್ದಾಳೆ. ಇದು ಇಡೀ ಮನೆಯನ್ನು ಸಂಭ್ರಮಿಸುವಂತೆ ಮಾಡಿದೆ. ಅಮೂಲ್ಯ ಆರತಿಗೆ ತೊಟ್ಟಿಲನ್ನು ಗಿಫ್ಟ್ ಮಾಡಿದ್ದಾಳೆ. ಅಮೂಲ್ಯ ಮೇಲೆ ದ್ವೇಷ ಕಾರುತ್ತಿದ್ದ ಆರತಿ ಈಗ ಸ್ವಲ್ಪ ತನ್ನ ಅನುಮಾನಗಳನ್ನು ಕಡಿಮೆ ಮಾಡಿಕೊಂಡಿದ್ದಾಳೆ.
ಇದೇ ವೇಳೆಗೆ ಆರತಿ ಮಗುವಿಗೆ ವೇದಾಂತ್ ದೊಡ್ಡ ಗಿಫ್ಟ್ ಕೊಟ್ಟಿದ್ದಾನೆ. ಅದೇನೆಂದರೆ, ದೊಡ್ಡ ಶಾಲೆಯನ್ನೇ ನಿರ್ಮಿಸುತ್ತಿದ್ದಾನೆ. ಇದನ್ನು ತೋರಿಸಲು ಆರತಿ, ವಿಕ್ಕಿ, ಅಮೂಲ್ಯರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ನಡೆಯಬಾರದ ಘಟನೆ ನಡೆದು ಹೋಗಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ ಜೋಡಿ ನಂ.1 ರಿಯಾಲಿಟಿ ಶೋ
ಅದೇನೆಂದರೆ, ಆರತಿ ಮಗುವನ್ನು ಕೊಲ್ಲಲು ಸುಹಾಸಿನಿ ರೌಡಿಗಳನ್ನು ಕಳಿಸಿದ್ದಾಳೆ. ಆರತಿಯನ್ನು ತಳ್ಳುವ ವೇಳೆಗೆ ನೋಡಿದ ವೇದಾಂತ್ ಆಕೆಯನ್ನು ಕಾಪಾಡಿದ್ದಾನೆ. ಈ ಘಟನೆ ಮನೆಯವರನ್ನು ಕೊಂಚ ಆಘಾತಗೊಳಿಸಿದೆ.
ವೇದಾಂತ್, ಆರತಿ ಭಾವುಕ!
ಆರತಿಯನ್ನು ಉಳಿಸಲು ಹೋಗಿ ವೇದಾಂತ್ ಹೊಟ್ಟೆಗೆ ಏಟಾಗಿದೆ. ಈಗ ಆತ ರೆಸ್ಟ್ ಮಾಡುತ್ತಿದ್ದಾನೆ. ಇದೇ ವೇಳೆಗೆ ಆರತಿ ರೂಮಿಗೆ ಬಂದ ವೇದಾಂತ್, ಈ ಘಟನೆಗೂ ಅಮೂಲ್ಯ ನನ್ನನ್ನು ಮದುವೆಯಾಗಿರುವುದಕ್ಕೂ, ಅವಳ ಕಾಲು ಗುಣದಿಂದಲೇ ನಿಮ್ಮ ಮಗುವಿಗೆ ತೊಂದರೆಯಾಗುತ್ತಿದೆ ಎಂದು ಯೋಚಿಸಬೇಡಿ. ಇದರಲ್ಲಿ ಅಮೂಲ್ಯ ಪಾತ್ರ ಏನು ಇಲ್ಲ ಎಂದು ಹೇಳುತ್ತಾನೆ. ಆರತಿ ವೇದಾಂತ್ ಈ ಮಾತನ್ನು ಕೇಳಿ ಬೇಸರ ಮಾಡಿಕೊಳ್ಳುತ್ತಾಳೆ. ಇಲ್ಲ ಭಾವ ನನಗೆ ಅಮೂಲ್ಯ ಮೇಲೆ ಯಾವ ಅನುಮಾನವೂ ಇಲ್ಲ. ಇನ್ಮುಂದೆ ಹಾಗೆ ನಡೆದುಕೊಳ್ಳುವುದಿಲ್ಲ ಎನ್ನುತ್ತಾಳೆ. ಆರತಿ ಹಾಗೂ ಅಮೂಲ್ಯ ಇಬ್ಬರೂ ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.
ಬೆಟ್ಟದ ಹೂ: ಅಯ್ಯೋ.. ಹೂವಿಗೆ ಮತ್ತೊಂದು ಮದುವೆ ಮಾಡಲು ಹೊರಟಿದ್ದಾನೆ ರಾಹುಲ್..!
ಅಪ್ಪನಿಗೆ ಏಲಕ್ಕಿ ಟೀ ಕೊಟ್ಟ ಅಮೂಲ್ಯ
ಅಮೂಲ್ಯ ಅವರ ತಂದೆ ವೇದಾಂತ್ ಮನೆಯಲ್ಲೇ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮನೆಯವರ ಕಣ್ಣಿಗೆ ಬೀಳದಂತೆ ನೈಟ್ ಶಿಫ್ಟ್ ಮಾಡುತ್ತಿದ್ದಾನೆ. ಆದರೆ ಈ ವಿಚಾರ ಅಮೂಲ್ಯಗೆ ಗೊತ್ತಾಗಿದೆ. ಹೀಗಾಗಿ ಅಮೂಲ್ಯ ಅಪ್ಪನಿಗಾಗಿ ಏಲಕ್ಕಿ ಟೀ ಮಾಡಿದ್ದಾಳೆ. ಇದನ್ನು ಕೊಡುವುದಕ್ಕೆ ಹೋದಾಗ ಅವರಿಗೆ ತಲೆ ನೋವು ಬಂದಿದೆ ಎಂದು ಗೊತ್ತಾಗಿ ಕಾಫಿ ಮಾಡಿಕೊಂಡು ಬಂದು ಕೊಟ್ಟು ಹೋಗಿದ್ದಾಳೆ. ಮಗಳು ಕೊಟ್ಟ ಕಾಫಿ ಕುಡಿದ ಅಮೂಲ್ಯ ತಂದೆ ತಲೆನೋವು ಹೋಗಿದೆ.
ತಂದೆಗಾಗಿ ಆರತಿ, ಅಮೂಲ್ಯ ಹೊಸ ಪ್ಲ್ಯಾನ್!
ಇತ್ತ ಅಮೂಲ್ಯ ಮನೆಯಲ್ಲಿ ತೊಂದರೆ ಎದುರಾಗಿದೆ. ಹಣದ ಸಮಸ್ಯೆ ಇರುವುದರಿಂದ, ಅಧಿತಿ, ಪರಿಮಳ ಕೂಡ ಕೆಲಸ ಮಾಡುತ್ತಿದ್ದಾರೆ. ಅಮೂಲ್ಯ ತಂದೆ ಮಂಜುನಾಥ್ ಕೂಡ ವಾಚ್ಮ್ಯಾನ್ ಆಗಿ, ಆಟೋ ಡ್ರೈವರ್ ಕೆಲಸ ಎಲ್ಲವನ್ನೂ ಮಾಡುತ್ತಿದ್ದಾರೆ. ಈ ವಿಚಾರ ತಿಳಿದ ಅಮೂಲ್ಯ ಹಾಗೂ ಆರತಿ ಸಹಾಯ ಮಾಡಲು ಮುಂದಾಗಿದ್ದಾರೆ. ಆರತಿ ತಾನು ಕೂಡಿಟ್ಟ ಹಣವನ್ನು ಕೊಡಲು ನಿರ್ಧರಿಸಿದ್ದು, ಅಮೂಲ್ಯ ತಾನು ಕೆಲಸ ಮಾಡಿದ ಸಂಬಳವನ್ನು ಕೊಡಬೇಕು ಎಂದುಕೊಂಡಿದ್ದಾಳೆ.
ಸಂಬಳ ಕೇಳಿದ ಅಮೂಲ್ಯ!
ಹೀಗಾಗಿ ಅಮೂಲ್ಯ ವೇದಾಂತ್ ತನ್ನ ಬಾಕಿ ಸಂಬಳವನ್ನು ಹೆಚ್ಚಿಸುವುದರ ಜೊತೆಗೆ ಕ್ಲಿಯರ್ ಮಾಡುವಂತೆ ಕೇಳಿದ್ದಾಳೆ. ವೇದಾಂತ್ ಇದಕ್ಕೆ ನಿರಾಕರಿಸಿದ್ದು, ಸ್ವಲ್ಪ ತರಲೆ ಮಾಡಿದ್ದಾನೆ. ಆದರೆ, ಅಮೂಲ್ಯ ಪಟ್ಟು ಹಿಡಿದು ಕೇಳಿದ್ದಕ್ಕೆ, ಕಾರಣ ಕೇಳಿದ್ದಾನೆ. ಆಗ ಅಮೂಲ್ಯ ತನಗೆ ಖರ್ಚಿದೆ ಹಣ ಬೇಕಿತ್ತು ಎಂದಾಗ ವೇದಾಂತ್ ತನ್ನ ಕಾರ್ಡ್ಗಳನ್ನು ನೀಡಿದ್ದಾನೆ. ಆದರೆ ಅಮೂಲ್ಯ ಅದನ್ನು ನಿರಾಕರಿಸಿದ್ದು, ವೇದಾಂತ್ ಅಮೂಲ್ಯ ಯಾವುದೋ ಪ್ಲ್ಯಾನ್ ಮಾಡಿದ್ದಾಳೆ. ಆದರೆ, ಏನು ಅಂತ ಹೇಳುತ್ತಿಲ್ಲ ಎಂದು ಯೋಚಿಸುತ್ತಿದ್ದಾನೆ.